Home / ಕವನ / ಕವಿತೆ / ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ಇರಬಹುದು ಭೂಲೋಕದಲ್ಲಿ ನಂದನವನವು;
ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು;
ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು!
ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ;
ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ
ಘನ್ನಮಹಿಮರ ನೋಡಿ ಸಾಃಕ್ರಟೀಸನಿಗೆರಗಿ, ವಂದಿಸಿ ಯುರೀಪಿಡಿಸನ!

ಆಗ ಬಂತೆದುರಾಗಿ ದೇವತೆಗಳನುರಾಗ;
ಸಾಗಿದೆನು ಜುಪಿಟಿರನ ಇಂದ್ರಪದನಿಯ ಕಂಡು
ತೂಗಿದೆನು ಹರುಷದಲಿ ಹರ್ಕ್ಯುಲೀಸನ ಬಲಕೆ, ಮರ್‍ಕ್ಯುರಿಯ ಬುದ್ಧಿ ಬಲಕೆ!
ನೋಡಿಲ್ಲಿ: ರವಿ-ಅಪಾಃಲೋನ ಶರಸಂಧಾನ!
ಬೇಡಿಲ್ಲಿ: ಓಶಿಯಾನಸನಿಗಿಹ ಕಡಲ ಸಿರಿ!
ಮಾಡಿಲ್ಲಿ ಮುಜುರೆಯನು: ಮತ್ತಿತರ ಸುರರೆಲ್ಲ ನಿಂತಿಹರು ವೈಭವದಲಿ!

ಕಂಡಿತಿಲ್ಲಿಯೆ ಆಫ್ರಿದಿತಿಯ ಮಾಲಕುಮಿ ಕಳೆ;
ಚಂದದಲಿ ಮಲಗಿಹಳು ಒಲಿದ ದೇಸೆಯಿದೇವಿ,
ವಂದಿಸಿದೆ ಭೂಗೋಲವನ್ನೆ ಕೈಯ್ಯಲಿ ಹಿಡಿದು ನಿಂತಿಹ ಯುರ್ಸಾನಿಯಳಿಗೆ!
ಆದಿಶೇಷನ ಭಾರವನೆ ಹೊತ್ತ ಅಟ್ಲಾಸ,
ನೋಡಿ ತನ್ನನು ತನ್ನೊಳೊಸೆದಿರುವ ನಾರ್‌ಸಿಸಸ!
ಹಾಡುವರು ಕೊಳಲೂದಿ ಯಕ್ಷಕಿನ್ನರರಂತೆ ಮತ್ತೆ ಸ್ಯಾ:ಟಿರ-ಫಾಃನರು!

ಅಹುದಹುದು! ಭೂಮಿಗಿಳಿದರು ಸ್ವರ್ಗದವರಿಲ್ಲಿ.
ಅಹಹ! ತಮ್ಮೊಳು ತಾವೆ ಆಳುವರು, ಬಾಳುವರು!
ಇಹರು ಕಾಲನ ಮೀರಿ ನಿಂತ ಚಕ್ರೇಶ್ವರರು ಕಾಲನೊಳನಾಡಿನಲ್ಲಿ!
ಅಹುದಾದರೋಂ ನಮೋ! ಶಿಲ್ಪಿಗಳ ಜೀವನಕೆ!
ಕಹಿ ಬಾಳ ವಿಷವನ್ನು ಕುಡಿದರಗಳಿಗೆ ಬಾಳಿ
ಸಹಿಸಿದರು ಮರಣವನು ತಮ್ಮಾತ್ಮದಮರತೆಯನಿತ್ತು ಬಾನ್ನವರಿಗೆಂದು!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...