Home / ಕವನ / ಕವಿತೆ / ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ನೇಪಲ್ಸದಲ್ಲಿಯ ಮೂರ್ತಿಸಂಗ್ರಹಾಲಯ

ಇರಬಹುದು ಭೂಲೋಕದಲ್ಲಿ ನಂದನವನವು;
ಬರಬಹುದು ಮುಗಿಲೆಲ್ಲ ನಾಳೆ ನಮ್ಮೆಡೆಗಿಳಿದು;
ತರಬಹುದು ಇಂದ್ರನೈರಾವತವ ಮತ್ತೊಂದು ದಿನ ಪಾರ್ಥನಿನ್ನೊರ್ವನು!
ಇನ್ನೆಲ್ಲಿ ಕಂಡಿರದು ಇಂಥ ಭೂವೈಕುಂಠ;
ಮುನ್ನಡೆದು ಬಂದೆ ಸೀಜರರ ಸಾಲನು ದಾಟಿ
ಘನ್ನಮಹಿಮರ ನೋಡಿ ಸಾಃಕ್ರಟೀಸನಿಗೆರಗಿ, ವಂದಿಸಿ ಯುರೀಪಿಡಿಸನ!

ಆಗ ಬಂತೆದುರಾಗಿ ದೇವತೆಗಳನುರಾಗ;
ಸಾಗಿದೆನು ಜುಪಿಟಿರನ ಇಂದ್ರಪದನಿಯ ಕಂಡು
ತೂಗಿದೆನು ಹರುಷದಲಿ ಹರ್ಕ್ಯುಲೀಸನ ಬಲಕೆ, ಮರ್‍ಕ್ಯುರಿಯ ಬುದ್ಧಿ ಬಲಕೆ!
ನೋಡಿಲ್ಲಿ: ರವಿ-ಅಪಾಃಲೋನ ಶರಸಂಧಾನ!
ಬೇಡಿಲ್ಲಿ: ಓಶಿಯಾನಸನಿಗಿಹ ಕಡಲ ಸಿರಿ!
ಮಾಡಿಲ್ಲಿ ಮುಜುರೆಯನು: ಮತ್ತಿತರ ಸುರರೆಲ್ಲ ನಿಂತಿಹರು ವೈಭವದಲಿ!

ಕಂಡಿತಿಲ್ಲಿಯೆ ಆಫ್ರಿದಿತಿಯ ಮಾಲಕುಮಿ ಕಳೆ;
ಚಂದದಲಿ ಮಲಗಿಹಳು ಒಲಿದ ದೇಸೆಯಿದೇವಿ,
ವಂದಿಸಿದೆ ಭೂಗೋಲವನ್ನೆ ಕೈಯ್ಯಲಿ ಹಿಡಿದು ನಿಂತಿಹ ಯುರ್ಸಾನಿಯಳಿಗೆ!
ಆದಿಶೇಷನ ಭಾರವನೆ ಹೊತ್ತ ಅಟ್ಲಾಸ,
ನೋಡಿ ತನ್ನನು ತನ್ನೊಳೊಸೆದಿರುವ ನಾರ್‌ಸಿಸಸ!
ಹಾಡುವರು ಕೊಳಲೂದಿ ಯಕ್ಷಕಿನ್ನರರಂತೆ ಮತ್ತೆ ಸ್ಯಾ:ಟಿರ-ಫಾಃನರು!

ಅಹುದಹುದು! ಭೂಮಿಗಿಳಿದರು ಸ್ವರ್ಗದವರಿಲ್ಲಿ.
ಅಹಹ! ತಮ್ಮೊಳು ತಾವೆ ಆಳುವರು, ಬಾಳುವರು!
ಇಹರು ಕಾಲನ ಮೀರಿ ನಿಂತ ಚಕ್ರೇಶ್ವರರು ಕಾಲನೊಳನಾಡಿನಲ್ಲಿ!
ಅಹುದಾದರೋಂ ನಮೋ! ಶಿಲ್ಪಿಗಳ ಜೀವನಕೆ!
ಕಹಿ ಬಾಳ ವಿಷವನ್ನು ಕುಡಿದರಗಳಿಗೆ ಬಾಳಿ
ಸಹಿಸಿದರು ಮರಣವನು ತಮ್ಮಾತ್ಮದಮರತೆಯನಿತ್ತು ಬಾನ್ನವರಿಗೆಂದು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...