Home / ಕವನ / ನೀಳ್ಗವಿತೆ / ಕೆಂಚಮ್ಮ

ಕೆಂಚಮ್ಮ

ಮುಟ್ಟಳಕಂಚಮ್ಮಾ ಮನ್ಯಾ ತಳುವನ ಬಿಟ್ಟೀ
ನಡ್ದಳೇ ಗಾರಾಹೂಳಿಗಿನ್ನೂ ಸುವ್ವೇ
ಹರ್‍ವಾನದೀಗೂಳಾ ಮುಳ್ಕೀ ಸಾನಮಾಡೀ
ಕನ್ನಿಯೋರಿಗೆ ಕಯ್ಯಾ ಮುಗಿದಳೆ ಸುವ್ವೇ ||೧||

ಕನ್ನಿಯೋರಿಗ್‌ ಕಯ್ಯಾ ಯೇನೇಳಿ ಮುಗೀದಳೇ
“ಸಂಜೀಲೀ ಕೊಡು ಸ್ವಾಮೀ ಮುಂಜಾಲೀ ವಯಸ್ವಾಮೀ,
ಬಂಜೆಂಬು ಸಬುದಾ ಮರ್‍ಸಿ ಸ್ವಾಮಿ ಸುವ್ವೇ
ತಾ ಬತ್ತೀ ಗಾರಾ ಹೊಳಿಗಿನ್ನೂ” ಸುವ್ವೇ ||೨||

ಅಟ್ಟಾರೂಲಿನ್ನೂ ನುಡಿದಳೆ ಕೆಂಚಮ್ಮ
ತನ್ನ ಮನೆಗಾರೂ ಬರೂವಳು ಸುವ್ವೇ
ಮುಟ್ಟಾಗೊಂದು ತಿಂಗಳಾ ಮುಟ್ಟಾಗೆರಡು ತಿಂಗಳಾ
ವಂಬತ್ತು ತಿಂಗಳಾ ಗಳಿದಾವೆ ಸುವ್ವೇ ||೩||

ವಂಬತ್ತೂ ತಿಂಗಳಾ ತುಂಬೂತನವಾ ಕೇಳೂ
ಹೆರುವಾ ಕೋಟೂಲಿಯೇ ತೊಡೂಗದೆ ಸುವ್ವೇ
ತೊಡ್ಗದೆ ಕೆಂಚಮ್ಮಾಗೆ
ಹಡದಳೆ ಗಂಡೂ ಕೊಮುರಾನಾ ಸುವ್ವೇ ||೪||

ವಾಲೆದ್ದೀ ನೀರಾ ಕಾಸದೆ ಕೆಂಚಮ್ಮಗೇ
ಉಂಗ್ಲೆದ್ದೀ ಬೆನ್ನಾ ತಿಕ್ಕದೇ ಸುವ್ವೇ
ಅರದಲರೂಸೀನಾ ಮೆರ್‍ದಾ ಸೀಗೆ ಹೊಡಿಯೆಲಿ
ಯಣ್ಣೀ ಕಂದಲವೇ ಬರೂವದೆ ಸುವ್ವೇ ||೫||

ಅಟ್ಟಾರೂಲಿನ್ನೂ ಲಾಗೂ ತನಕಾ ನೋಡೂ
ಕೆಂಚಮ್ಮ ಕರೂವದಕೇ ಬರೂವರೇ ಸುವ್ವೇ
“ಕಂದಯ್ಯಾ ಹುಟ್ಟೀ ಇಂದೀಗ್‌ ಮೂರೂ ದಿನಾ
ಇಂದಾರೂ ನಾನೂ ಬರೂನಾರೇ’ ಸುವ್ವೇ ||೬||

ಅಪ್ಪ್‌ ಹೇಳ್‌ದ್ರೂ ಕೇಳೂ ಕಂಚ್ಯಲ್ಲಾ ಅವ್‌ ಹೀಳ್‌ದ್ರೂ ಕೇಳೂ ಕಂಚ್ಯಲ್ಲಾ
ಪುರಿಸರ ತಡೂದಾರೂ ಕೇಳೂ ಕೆಂಚ್ಯಲ್ಲಾ ಸುವ್ವೇ
ಪುರಿಸರ ತಡೂದಾರೂ ಇರೂ ಕೆಂಚ್ಯಲ್ಲಾ, “ಕನ್ನಿ ಯೋರಾ
ಇಂದೆಗೇಳು ದಿನಕೇ ಬರೂತೆನೇ” ಸುವ್ವೇ ||೭||

ಐದಲೂ ದಿನವೇ ಸಾಗೂತನಕಾ ನೋಡೂ
ನೆಡ್ದಳೇ ಗಾರಾ ಹೊಳಿಗಿನ್ನೂ ಸುವ್ವೇ
ಅತ್ತೆಲಂಬದೂ, “ಕೇಳೂ ನೀನೂ ಸೊಸಿಯೇ,
ಯೆಟ್ಟೂ ಹೇಳಿದ್ರೂ ಕೇಳಬೇಕು ಸೊಸಿಯೇ
ಹೊಳಗಾರೂ ನೀನೂ ಹೋಗೂಕಾಗಾ ಸುವ್ವೇ ||೮||

ಕತ್ಯರು ನೀವ್‌ ಬನ್ನೀ, ಕೊವ್ಯಾರೂ ನೀವ್‌ ಬನ್ನೀ
ಕೆಂಚಮ್ಮ ಹೊಗ್ತದೆ ಗಾರಾ ಹೊಳಿಗಿನ್ನೆ” ಸುವ್ವೇ
“ಕತ್ಯರು ನಾ ಕೇಳುದಿಲ್ಲಾ, ಕೊವ್ಯರೂ ನಾ ಕೆಳುದಿಲ್ಲಾ
ನಾಹೋಗ್ತೇ ಗಾರಾ ಹೊಳಿಗಿನ್ನೂ” ಸುವ್ವೇ ||೯||

ಹರ್‌ವಾ ನದ್ಯಗೋಳಾ ಮಿಂದಳ್‌ ಕೆಂಚಮ್ಮ
ತನ್ನಲರೂಮನಿಗೇ ಬರೂವಳೇ ಸುವ್ವೇ
ತಾಯ್‌ ಬಳಗಕೆ ವಂದೋಲೇ ತಂದಿ ಬಳುಗಕೆ ವಂದೋಲೇ
ಗಂಡನ ಬಳಗದೋರಿಗೇ ವಂದೋಲೇ ಸುವ್ವೇ ||೧೦||

ಮೂರೂ ವಾಲೀ ಬರದೀ ಕಳಗಳೇ ಕೆಂಚಮ್ಮಾ
ತಾನೂ ಕಟ್ಟಿಗೇ ನಡಿದದೇ ಸುವ್ವೇ
ಅಪ್ಪಯ್ಯಂಬವ್ಗೇ ಸುದ್ದೀಲಾಗದೆ ನೋಡೂ
ಮಡದೀಕೂಡಿನ್ನೂ ನುಡೀತಾನೇ ಸುವ್ವೇ ||೧೧||

“ಬಿದ್ರೂರಲ್ಲಿ ವಂದೂ ಯಡಪುಂಡಾ ಇದ್ದೀದಾ
ನಿನ್ನೊಂದ್‌ ಹೆರೀಮಗಳಾ ಕೊಟ್ಯಲ್ಲೇ ಸುವ್ವೇ
ಇದ್ದೊಂದ ಹೆರೀಮಗಳಾ ಕೊಟ್ಯಲ್ಲೇ ಮಡದೀ
ಅವ ಹೊಳೀಗಾಹುತೀ ಕೊಡೂತಾನೇ” ಸುವ್ವೇ ||೧೨||

“ಮನ್ಯಲ್ಲೀಲನ್ನೂ ಮಡ್ದಿ ಇಲ್ಲಾ”ಲಂದೀ
ಕೇರೀಕೇರೀಯಾ ಹುಡುಕುತ ಬಂದಾ ಸುವ್ವೇ
“ಯಲ್ಲೆಲ್ಲೂಲಿನ್ನೂ ಮಡದಿ‌ಇಲ್ಲಾ” ಹೇಳೀ
ಕಟ್ಟೇಮೇನ್‌ ಹೋಗೀ ಕುಳೂವದೇ ಸುವ್ವೇ
ಕುಳ್ಳೂ ಸಮ್ಯಗಲ್ಲೀ ಕಟ್ಟೀಮೇನ್‌ ತಾನ್‌ ಹೋಗೀ ಕುಳೂವನೇ ಸುವ್ವೇ ||೧೩||

“ಬಂದೀರ್‍ಯಾಕ್‌ ಸ್ವಾಮೀ ಕಟ್ಟಿಮೇನ್‌ಯಂತಾಕ್‌ ಕುಳ್ತೀರೀ?
ಕಟ್ಟಿಕಲ ಹರ್‍ದಿ ಕೆಳಗೇ ಬೀಳುರೀ” ಸುವ್ವೇ
“ಕಟ್ಟಿ ಹರ್‍ದಿ ಬಿದ್ದಾರೇ ಕಟ್ಟಿ ಕಟ್ಟೂಕ್‌ ಬಲ್ಲೇ
ಮಾಳೂಗೀ ಮಡದೀ ಮನಿಗೋಗೇ ಸುವ್ವೇ ||೧೪||

ಇಪ್ಪತ್‌ ವರಾಕೊಟ್ಟೀ ಯಮ್ಮಿ ತಂದಿದೇ
ಅರುತಿಕೊಂದ್‌ ತುತ್ತಾ ಉಣಲಿಲ್ಲಾ ಸುವ್ವೇ
ಇಪ್ಪತ್‌ ವರೂ ಕೊಟ್ಟೀ ವಾಲೀಗೆಯ್ಯುಸೀದೋ
ವಂದಿನೂ ನೀನೂ ಇಡುಲಿಲ್ಲಾ ಸುವ್ವೇ ||೧೫||

ಕಂದಯ್ಯಾ ಹುಟ್ಟೀ ಇಂದೀಗ್‌ ಮೂರೂ ದೀನಾ
ಕಂದಯ್ಯಳ್ಳೂವಾ ಮನೀಗೋಗು” ಸುವ್ವೇ
“ಕಂದಯ ಅಳ್ಳದ್ರು ಅಳ್ಳೀ, ಪುಟ್ಟಯ್ಯ ಅಳ್ಳದ್ರೆ ಅಳ್ಳೀ
ಕಂದಯ್ಯನ ಗೊಡವೇ ನನುಗಿಲ್ಲ” ಸುವ್ವೇ “ದೇವರೇ ||೧೬||

ಕಂದಯ್ಯಳ್ಳುವಾ ನೀವ್‌ ಮನಿಗ್‌ ಹೋಗೀ” ಸುವ್ವೇ
ಅಟ್ಟಾರೂ ಅನ್ನೂ ಹೇಳೂ ತನ್ಕಾಕೇಳೂ
ಮಡ್ಡೀ ವಳೂಗ್‌ ಹಾಕೀ ಕದೂ ಹಾಕ್ದಾ ಸುವ್ವೇ
ತೀಡೂತಾದೇ ನೋಡೂ ಮರ್‌ಕುತಾದೇ ನೋಡೂ ||೧೭||

ಯೇನೇನ್‌ ಹೇಳಿದರೂ ಕೇಳೂದಿಲ್ಲಾ ಸುವ್ವೇ
“ಕೇಳ್‌ ಕೇಳೇ ಕೆಂಚಮ್ಮಾ, ಕೇಳಲೆ ಕೆಂಚಮ್ಮಾ
ಅಪ್ಪಯನಿನ್ಗೆ ಪಟ್ಟಯಾ ತರೂವನೆ” ಸುವ್ವೇ
“ಪಟ್ಟಿ ತಂದ್ರೂ ತರ್‍ಲೀ, ಹೂಂಗಾ ತಂದ್ರೂ ತರ್‍ಲೀ ||೧೮||

ಅಪ್ಪಯ್ಯನಾ ಗೊಡವೇ ನನುಗಿಲ್ಲಾ’ ಸುವ್ವೇ
“ಕೇಳ್‌ ಕೇಳೇ ಕೆಂಚಮ್ಮಾ, ಕೇಳಲೆ ಕೆಂಚಮ್ಮಾ
ನಿನ್ನ ತಾಯಿ ಬಂದದ್ಯೆ ಕರೂವಾಕೆ ಸುವ್ವೇ
ತಾಯಿ ಬಂದರ್‍ಯೇ ಕರವಕೆ ತಂಗಿ, ಕೇಳೂ ||೧೯||

ಕುಪ್ಸ ತಂದದ್ಯೇ ಲಿಡೂನಾಕೇ” ಸುವ್ವೇ
“ತಾಯೀ ಬಂದ್ರೆ ಬರ್‍ಲಿ ಕುಪ್ಸ ತಂದ್ರೆ ತರಲೀ
ತಾಯವ್ವೀಗೊಡವೀ ನನೂಗಿಲ್ಲಾ” ಸುವ್ವೇ ||೨೦||

“ಕೇಳ್‌ ಕೇಳೇ ಕೆಂಚಮ್ಮಾ, ಕೇಳಲೆ ಕೆಂಚಮ್ಮಾ,
ನಿನ್ನಣ್ಣ ಬಂದನೇ ಇಲುನೋಡೆ” ಸುವ್ವೇ
“ಅಣ್ಣ ಬಂದ್ರೆ ಬರಲೀ, ಹೂಗಾ ತಂದ್ರೆ ತರಲೀ
ಅಣ್ಣಯ್ಯನ ಗೊಡವೇ ನನುಗಿಲ್ಲ’ ಸುವ್ವೇ ||೨೧||

“ಅಪ್ಪಯ್ಯ ನಿನ್ನೂ ಕರದರೇ ಕೆಂಚಮ್ಮಾ
ಅಪ್ಪಯ್ಯನ ತೊಡೀ ಮೇನೇ ಕುಳೂವದೇ” ಸುವ್ವೇ
“ಕೇಳ್‌ ಕೇಳೊ ಲಪ್ಪಯ್ಯ, ಕೇಳಲಪ್ಪಯ್ಯಾ
ತಾನ್‌ ಹೋತೇ ಗಾರಾ ಹೊಳಿಗಿನ್ನು ಸುವ್ವೇ ||೨೨||

ನಾನೆ ಹೋಗೆ ಗಾರಾ ಹೊಳಿಗಿನ್‌ ಕಲುಜೇನಮ್ಮಾ
ಕಲುಜೇನ ತಂಗಮ್ಮಾ ಕಯುದಾರೀ ಸುವ್ವೇ
ತಂಗಮ್ಮ ಕೈದಾರೀ ಯೆರಕೂಡೊಲಪ್ಪಯ್ಯಾ”
ತಾಯೀ ಪಾದಕೇ ವಂದನೆ ಮಾಡಿದ್ದಾಳೇ ಸುವ್ವೇ ||೨೩||

ತಾಯೀ ಕೂಡಿನ್ನೂ ನುಡೀದದೇ ಸುವ್ವೇ
“ಕೇಳ್‌ ಕೇಳೆ ತಾಯವ್ವಾ ಕೇಳಲೆ ತಾಯವ್ವಾ,
ಕಲುಜೇನಾ ತಂಗಮ್ಮ ಕೈದಾರೀ ಯೊರಕೊಡೆ” ಸುವ್ವೇ
ಅಣ್ಣನ ಪಾದಕೇ ವಂದನೆ ಮಾಡಿದಾಳೇ ಸುವ್ವೇ ||೨೪||

ಅಣ್ಣನ ಕೂಡಿನ್ನೂ ನುಡಿದಾಳೇ ಸುವ್ವೇ
ಅಣ್ಣನ ಕೂಡಿನ್ನೂ ಯೇನೇಳಿ ನುಡಿದಾದೇ?
“ಕೇಳ್‌ ಕೇಳೂ ಅಣ್ಣಯ್ಯ, ಕೇಳಲೆ ಅಣ್ಣಯ್ಯ,
ಕಲುಜೇನ ತಂಗಮ್ಮ ದಾರೀ ಯರೂಕೊಡೀ” ಸುವ್ವೇ ||೨೫||

ಅಟ್ಟಾರೂಲಿನ್ನೂ ನುಡ್ದದೇ ಕೆಂಚಮ್ಮಾ
ನಡೆದಾಳೇ ಗಾರಾ ಹೊಳೀಗಿನ್ನೂ ಸುವ್ವೇ
ಅಪ್ನ ಬಳ್ಗ್ ವಂದ್‌ ಸಾವ್ರಾ, ಅವಿ ಬಳ್ಗ್ ವಂದ್‌ ಸಾವ್ರಾ
ಗಂಡನ ಬಳುಗೆದವರೂ ಐನೂರು ಸುವ್ವೇ ||೨೬||

ಲೈನೂರು ಸಯ್ತಲಾಗೀ
ಹಣ್ಣನಾ ಮುಟ್ಟೊ ಹದಿನಾರೂ ಸುವ್ವೇ
ಹದ್ನಾರೂ ಸಯ್ತಲಾಗೀ
ಕೆಂಚಮ್ಮ ಬೆನ್ನಿಗೂ ಬರೂವದೇ ಸುವ್ವೇ ||೨೭||

ಅಲ್ಲೇಲೋಗದೇ ಹಣ್ಣೀ ಹರೂಗಾದೇ
ಹೂಗಾರೂಲಿನ್ನೂ ಲಿಡೂವುದೇ ಸುವ್ವೇ
ಇಡ್ಸೆದೆ ಕೆಂಚಮ್ಮಾ
ಕಡ್ಡಿ ಕುಂಕುಮಿನ್ನೂ ಇಡೂವದೇ ಸುವ್ವೇ ||೨೮||

ಕಡ್ಡಿಕೂಕುಮಾ ಇಟ್ಟದೆ ಕೆಂಚಮ್ಮಾ
ಕಾಯೊಡುದೀ ಕಯ್ಯಾ ಮುಗೂದದೇ ಸುವ್ವೇ
ಮುಗ್ವಾ ತನ್ಕಾನೋಡೂ
ದೇವಲೋಕ ಸತ್ತುಗೀ ಬರೂವದೆ ಸುವ್ವೇ ||೨೯||

ಸತ್ತುಗಿಲತ್ತದೇ ದಂಡುಗಿಲ್ಲಿಡೂದದೇ
ಸವ್ಲುಯ್ಯಲಮೇಲೇ ಕುಳೂವದೆ ಸುವ್ವೇ
“ಕೇಳ್‌ ಕೇಳ್‌ ಕನ್ನಿಯೋರಾ, ಕೇಳಲಿ ಕನ್ನಿಯೋರಾ
ನಾನೊಂದಾ ಮಾತಾ ನುಡಿತೇನೇ ಸುವ್ವೇ ||೩೦||

ತಣ್ಣೀ ಉಂಡದಲ್ಲಾ (ತಾಯೀ) ಬಿಸ್‌ ನೀರ ಮಿಂದದ್ದಲ್ಲಾ
ಬಾಲರಪ್ಪಂತೇ ಸಲಿಕಳ್ಳಿ ಸುವ್ವೇ
ಸಲಿಕಳಿ” ಲಂದ್‌ಹೇಳಿ ಕನ್ನಿಯೋರಿಗೆ ಕಯ್ಯಾ ಮುಗೀದದೇ ಸುವ್ವೇ ||೩೧||

ಅಟ್ಟಾರಲನ್ನೂ ಹೇಳಿಕಂಡೀ ಕಂಡೀ
ಅಳಿಯನ ಕರೂಕಂಡೀ ನೆಡೂದರೂ ಸುವ್ವೇ
ಅಳಿಯನಾರೂ ಲಿನ್ನೂ ತಮ್ಮನಿಗೆ ಕರ್‍ಕಂಡ್‌ ಹೋಗೀ
ಕಲುಜೇನ ತಂಗಮ್ಮ ಕೈದಾರೀ ಯೆರೂಕೊಟ್ಟೂ ಸುವ್ವೇ ||೩೨||

“ಗಂಡಗ್‌ ಹಿಣ್ತೀಲಾಯ್ತೂ ಮಗನಿಗೆ ತಾಯೂಲಾಯ್ತೂ
ನೀವ್‌ ಹೋಗಿರ್ರೋ ನಿಮ್ಮ ಮನಿಯಲ್ಲೀ” ಸುವ್ವೇ
ಮನ್ಯಲ್ಲಿ ಅಂದ ಹೇಳೀ ಮಗಳೂವಾ ಅಳೀನಾ ಯೇನೇಳಿ ಕಳೂಗಾರೇ
“ನೀವ್‌ ಹೋಗಿರೊ ನಿಮ್ಮಾ ಮನಿಯಲ್ಲಿ ಸುವ್ವೀ ||೩೩||
*****

ಕೆಲವು ಪದಗಳ ವಿವರಣೆ

ಮೆರ್‍ದಾ = ಕುಟ್ಟಿದ
ವರೂ = ರೂಪಾಯ್
ಸತ್ತುಗಿ = ಪಲ್ಲಕಿ
ತಣ್ಣೀ = ತಣಿದ ಹಿಂದಿನ ದಿನದ ಅನ್ನ

ಹೇಳಿದವರು: ದಿ. ಬಳಿಯಮ್ಮ ಪುಟ್ಟುನಾಯ್ಕ, ಹೊಸಾಕುಳಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...