Home / ಕವನ / ಕವಿತೆ / ಹದ್ದು ಹದ್ದು ಹದ್ದು

ಹದ್ದು ಹದ್ದು ಹದ್ದು

ಹದ್ದು ಹದ್ದು ಹದ್ದು ಅಣ್ಣ ಸುತ್ತಮುತ್ತಲೂ
ರಣಹದ್ದುಗಳ ರಾಜ್ಯವಾಯ್ತು ಎತ್ತೆತ್ತಲೂ ||ಪ||

ರಕ್ತ ಮಾಂಸ ತಿನ್ನುತ್ತಾವೆ ಶಕ್ತಿ ಹೀರಿ ಒಗೆಯುತಾವೆ
ಗೊತ್ತೆ ಆಗದಂಥ ರೀತಿ ಕೊಲ್ಲುತಾವೆ
ಕೆಂಗಣ್ಣು ಕೆಕ್ಕರಿಸುತ ಕೊಕ್ಕು ತಿಕ್ಕಿ ಡೊಕ್ಕರಿಸುತ
ಹೆದರಿಸುತ್ತ ಬೆದರಿಸುತ್ತ ಸುಲಿಯುತಾವೆ ||೧||

ಪಂಚಾಯ್ತಿ ತಾಲೂಕು ಜಿಲ್ಲಾ ಕಛೇರಿಗಳಾಗೆ
ಹೊಂಚಾಕಿ ಕುಂತಾವೆ ಕುರ್ಚಿಗಳೊಳಗೆ
ಫೋಲೀಸು ಠಾಣದಾಗೆ ಕೋರ್ಟಿನ ತಾಣದಾಗೆ
ಆಸುಪತ್ರೆ ಅಲ್ಲಿ ಇಲ್ಲಿ ಎಲ್ಲ ಕಡೆಗೆ ||೨||

ಒಳ್ಳೇ ಬೆಣ್ಣೆ ಮಾತಿನ್ಯಾಗ ಮಣ್ಣು ತಿನಿಸಿ ಬಿಡುತಾವೆ
ಕಳ್ಳ ದಾರಿ ಸಂದುಗಳಾಗೆ ಕೈಯಾಡ್ತಾವೆ
ಮಳ್ಳ ಮಂದಿ ಕುರೀ ಮಂದೇ ಕಟುಕರ ಕೈಯಾಗ್ಗುಬ್ಬಿಯಂಗೆ
ಕಳ್ಳು ಹರದು ಕೂಗಿಕೊಂಡ್ರು ಚೂರಿ ಆಡ್ತಾವೆ ||೩||

ಬಿಳೀ ಬಟ್ಟೆ ಹಾಕಿಕೊಂಡು ಬಿಳೀ ಟೊಪ್ಗಿ ಇಟ್ಟುಕೊಂಡು
ಬೆಳ್ಳ ಬೆಳ್ಳನ್ನಗುವ ಚಿಮ್ಮಿ ಮಳ್ಮಾಡ್ತಾವೆ
ಓಟು ಕೊಡ್ರಿ ದೈವ ನಿಮ್ಮ ದಾಸನಂತ ಹೇಳಿಕೊಂಡು
ನೋಟು ಬಟ್ಟೆ ಬಾಟ್ಲಿ ಕೊಟ್ಟು ನಿಮ್ಮ ಕೊಳ್ತಾವೆ
ವೋಟು ಗೆದ್ದ ಮ್ಯಾಲೆ ಹದ್ದು ಕಾರುಗಳಾಗೆ ಹಾರತಾವೆ
ನೀಟಾಗಿ ಗದ್ದುಗೇರಿ ಲೂಟಿ ಮಾಡ್ತಾವೆ ||೪||

ಗುಡಿಗಳಾಗೆ ಹೊಟ್ಟೆ ಜುಟ್ಟು ಹಣೇ ಮೈಗೆ ನಾಮದ ಬೊಟ್ಟು
ಮಠಗಳಾಗೆ ಬೊಜ್ಜಿನ ಹದ್ದು ಭಕ್ತರನ್ನುಂಗೋ ಹದ್ದು
ಕಳ್ಳ ಸಂತೆ ಪ್ಯಾಟಿಗಳಾಗೆ ದಲ್ಲಾಳಿ ಮಳಿಗೆಗಳಾಗೆ
ಪೆಂಡೆ ಪೆಂಡೆ ಝಣಝಣಾಂತ ರಣ ರಣಾ ಹದ್ದು ||೫||

ದರಸದುದ್ದುಕ್ ರಕ್ತ ಬೆವರು ಸುರಿಸಿ ರೈತ ದುಡ್ಡು ಒಯ್ದು
ಮಾರುಕಟ್ಟೆ ಅಂಗಡ್ಯಾಗೆ ಹದ್ದಿಗ್ಹಾಕ್ತಾನೆ
ರಟ್ಟೆ ಮುರ್ದು ಜೀವಾ ಹಿಂಡಿ ಫ್ಯಾಕ್ಟರಿಯೊಳಗೆ ದುಡಿಯುವಂಥ
ಕೆಲಸಗಾರ ಭಂಡವಾಳಿಗ ಹದ್ದಿಗ್ಹಾಕ್ತಾನೆ ||೬||

ಹದ್ದುಗಳಿಗೆ ಹೆದರಿ ಹೆದರಿ ಬಾಳಿದ್ದಿನ್ನು ಸಾಕೋ ಯಣ್ಣಾ
ಒದ್ದೋದ್ದವ್ನ ಎಳಿಯೋ ಅಣ್ಣ
ಗುದ್ದಿದ್ರೇನೆ ಸರಿಯೋ ಅಣ್ಣ
ಜನಾ ದುಡ್ದುದ್ ತಿಂಬೋವಂಥ ಹದ್ದುಗಳ್ಹಣಿರಿ
ಜನಗಳ ಹೆಸರಿನ್ಯಾಗೆ ಗಳಸೋ ಬಸುರ ತುಳೀರಿ ||೭||

ಖಾದೀ ಬಟ್ಟೆ ಮಂತ್ರಿಯಾಗ್ಲಿ ಪ್ಯಾಂಟು ಬೂಟು ಆಫೀಸರಾಗ್ಲಿ
ಖಾಕಿ ಬಟ್ಟೆ ಖಾದಿಯಾಗ್ಲಿ ಜನಗಳ ಸೇವೆ ಮಾಡ್ಲಿ
ನಮ್ಮ ಕೈಕಾಲೊತ್ತೋದ್ ಬ್ಯಾಡ ನಮ್ಮ ಕೆಲಸ ಮಾಡ್ಲಿ
ದನಗಳಂಗೆ ನಮ್ಮನ್ನೋಡ್ದೆ ಮನಸ್ಯಾರಂಗೆ ನೋಡ್ಲಿ ||೮||

ರೆಕ್ಕೆ ಕಿತ್ರಿ ಪುಕ್ಕ ಹಿರೀರಿ ಕೊಕ್ಕು ಸೀಳಿ ಹಾಕ್ರಿ
ಹದ್ದುಗಳಿಂದ ದೇಶಾ ಸುಡುಗಾಡಾಗೋಯ್ತಲ್ಲ ಇಕ್ರಿ
ಹದ್ದಿನ ರೂಪ ಕಂಡ ಕೂಡ್ಲೆ ತಡಮಾಡಿದ್ರೆ ತಪ್ಪು
ನೋಡೀ ನೋಡೀ ಸುಮ್ನೆ ಇದ್ರೆ ನಾವೇ ಅಲ್ಲೇ ಬೆಪ್ಪು ||೯||

೬-೪-೮೬
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...