Home / ಕವನ / ಕವಿತೆ / ರಾಜಮಾರ್ಗ, ಒಳಮಾರ್ಗ

ರಾಜಮಾರ್ಗ, ಒಳಮಾರ್ಗ

ರಾಜಮಾರ್ಗಗಳಿರುವುದು ವೇಗವಾದ ವಾಹನಗಳಿಗೆ
ಒಳಮಾರ್ಗಗಳಿರುವುದು ಎತ್ತಿನ ಗಾಡಿಗಳಿಗೆ ನಗ್ನಪಾದಗಳಿಗೆ
ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ
ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ
ಬಹು ಉದ್ದೇಶಪೂರ್ಣವಾದುವು ರಾಜಮಾರ್ಗಗಳು
ಉದ್ದೇಶರಹಿತವಾಗಿ ಬಿದ್ದಿರುವುವು ಒಳಮಾರ್ಗಗಳು
ರಾಜಧಾನಿಗೆ ಹೋಗುವುವು ರಾಜಮಾರ್ಗಗಳು
ಹೊರಟಲ್ಲಿಗೇ ಹೊರಡುವುವು ಒಳಮಾರ್ಗಗಳು
ರಾಜಮಾರ್ಗಗಳು ಬಹಳ ಶುಚಿಯಾಗಿರುತ್ತವೆ
ಒಳಮಾರ್ಗಗಳು ಧೂಳಿನಿಂದ ತುಂಬಿರುತ್ತವೆ
ಅವು ಪೊದೆಗಿಡಗಳ ನಡುವೆ ಮರೆಯಾಗುತ್ತವೆ

ಇಂಥ ಒಳಮಾರ್ಗದಲ್ಲಿ ನಾನು ಕೆರೆಗಳನ್ನು ಕಂಡೆ
ಕೆರೆಯೇರಿಯಲ್ಲಿ ಕುಳಿತ ಕಪ್ಪೆಗಳನ್ನು ಕಂಡೆ
ಅವು ಮೋಡಗಳನ್ನು ಕರೆಯುವುದನ್ನು ಕಂಡೆ
ಮೋಡಗಳ ನೆರಳು ಸರಿಯುವುದನ್ನು ಕಂಡೆ
ಸೂರ್ಯಕಾಂತಿ ಹೂ ತಿರುಗುವುದನ್ನು ಕಂಡೆ
ಹೊನ್ನೆಮರಗಳ ತುಂಬ ಮಿಂಚುಗಳನ್ನು ಕಂಡೆ
ಗೋರಿಗಳ ಮೇಲೆ ಹುಲ್ಲು ಬೆಳೆಯುವುದನ್ನು ಕಂಡೆ
ಆದ್ದರಿಂದ ಇನ್ನೆಂದಿಗೂ ರಾಜಮಾರ್ಗವನ್ನು
ಸೇರದವನಾಗಿದ್ದೇನೆ. ಆದರೂ ಚಳಿಗಾಲದ
ಮುಂಜಾವಗಳಲ್ಲಿ ಕೇಳಿಸುತ್ತದೆ ಕೆಲವೊಮ್ಮೆ
ರಾಜಧಾನಿಗೆ ಹಾಯುವ ವಾಹನಗಳ ಸದ್ದು-ನನಗೂ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...