Home / ಕವನ / ಕವಿತೆ / ಬಣ್ಣಗೆಡುತ್ತಿವೆ ಬೀಜಗಳು

ಬಣ್ಣಗೆಡುತ್ತಿವೆ ಬೀಜಗಳು

ನನ್ನದೇ ತಾರಸಿಯಲ್ಲಿ ಒಣಗಿಸಿದ
ಒಂದೇ ಜಾತಿಯ ಬೀಜಗಳು
ಮೈಮನ ಗೆದ್ದಿದ್ದವು.
ಕಂಕುಳಲ್ಲಿ ಎತ್ತಿಕೊಂಡು ಉಣಿಸಿ
ತಣಿಸಿ ಹದಮಾಡಿ ತೋಯಿಸಿಟ್ಟ ಬೀಜ ಮಹಾಬೀಜವಾದಂತೆ
ಒಂದೊಂದು ದಿಕ್ಕಿನಲ್ಲಿ ಪಲ್ಲಟಗೊಂಡ ಪ್ರಾಯದ ಪುಂಡ
ಹಲಬುವಿಕೆ ಧಾಡಸಿಯಾಗುತ್ತಲೇ ನಡೆದವು.

ಎದೆಯುಬ್ಬಿಸಿ ಫಲವತ್ತಾದ ಫಸಲು ನೋಡಬೇಕು
ರಸ ಒಸರುವ ಕಳಿತ ಹಣ್ಣುಗಳು ತೋನೆಯಾಡಬೇಕು
ಬೀಜದ ತಾಕತ್ತು, ಹತ್ತಾರು ಬಲ ಬೀಜಗಳ ಬೆಳಕಿಗೆ
ಇಡಬೇಕು.

ವ್ಯತಿರಿಕ್ತವಾಗಿ ಮೋಹಕ ವರ್ಣಗಳೆಲ್ಲ
ಕಳಪೆಯಾಗಿ ಈಗೀಗ ಮೈತುಂಬಾ ಮುಳ್ಳುಗಳೆದ್ದ
ಜಾಲಿಗಿಡಗಳು ಬೀಜಗಳಿಂದ ಉಕ್ಕುಕ್ಕಿ
ಕುಕ್ಕುತ್ತಿವೆ ದೃಷ್ಟಿಯುದ್ದಕೂ.
ಚಿತ್ರವಿಚಿತ್ರ ಮೈಗವಸಗಳು
ಕುರುಚಲು ಕಾಡುಗಳ ಹಬ್ಬಿಸಿಕೊಂಡ
ಕೃತಕ ಹಾವಭಾವದ ಕನ್ನಡಿಗಳು
ದಟ್ಟವಾಗುತ್ತ ಅರಳುಗಣ್ಣಿನ ಗಿಡಗಳು
ಇಂಗಾಲಮಯವಾಗಿವೆ.

ಹದಗೊಳಿಸಿದ ಹೊಲವಿನ್ನು
ಹಸನಾಗದು, ಕಣಜ ಉಕ್ಕೆದ್ದು ಬರಲಾಗದು.
ನನ್ನದೇ ತಾರಸಿಯಲ್ಲಿ ಒಣಗಿಸಿದ
ಬೀಜಗಳು ಈಗ ನಿರಂತರದಿ ಬಣ್ಣ ಬದಲಾಯಿಸುತ್ತಿವೆ.
ಕೆಲವು ಕೆಟ್ಟು ಕರಕಲಾಗುತ್ತಿವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...