ಅಲ್ಪ ತೃಪ್ತನಾಗಿರೆ

ಅಲ್ಪ ತೃಪ್ತನಾಗಿರೆ
ಹೆಚ್ಚು ಸುಖವು ಜೀವನವು|
ಬಾಳು ಸುಗಮ ಸುಂದರ
ಬದುಕು ಬಲು ಹಗುರ|
ಇಲ್ಲದಿರೆ ಎಲ್ಲದಕೂ ಬೇಸರ
ವಿಷಮಸ್ಥಿತಿ, ಬದುಕು ಭೀಕರ||

ಇತಿಮಿತಿಯಲ್ಲಿರುವುದೇ ಬಲು ಸೊಗಸು,
ನನಸಾಗುವುದೆಲ್ಲಾ ಕಂಡ ಕನಸು|
ಮಿತಿ ಮೀರಿದರೆಲ್ಲಾ ಬರೀ ಕೆಡಕು||

ಅತಿಯಾದ ಆಸೆ ತರುವುದು ನಿರಾಸೆ|
ಬರೀ ಹಗಲುಗನಸು ನೋಡಲಷ್ಟೇ ಸೊಗಸು
ನಿಜವಾಗದೆಂದೆದಿಗೂ ಸತ್ಯಕ್ಕೆ ದೂರವಿಹುದು||

ಆಸೆಗಳಿರಬೇಕು ಈಡೇರುವಷ್ಟು,
ನಿಜದಿ ನೆರೆವೇರಿಸುವಷ್ಟು|
ಉಣಬೇಕು ಹಸಿವ ಇಂಗಿಸುವಷ್ಟು,
ಉಳಿಸಬೇಕು ನಾಳೆಮಾತ್ರಕೆ ಆಗುವಷ್ಟು
ಎಲ್ಲರಿಗೂ ಎಲ್ಲದೂ ಸಿಗಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗತ್ಪ್ರಸಿದ್ಧ ಚೀನೀ ಕಲೆ ಬೋನ್ಸಾಯ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೧

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…