ಬುವಿಗಿಳಿದ ಸ್ವರ್ಗ

ದೂರದ ಸ್ವರ್ಗ ಬುವಿಗಿಳಿದು ಆಗಿದೆ ಕರುನಾಡು
ಲೋಕದ ಕಣ್ಮನ ಸೆಳೆಯುತಿಹ ಸುಂದರ ಸಿರಿನಾಡು ||ಪ||

ಸುಂದರ ಸಿರಿನಾಡು ನಮ್ಮ ಕಲಿಗನ್ನಡನಾಡು
ಶ್ರೀಗಂಧದ ಬೀಡು ಸರ್ವ ಚೇತನಮಯ ನಾಡು ||ಅ.ಪ||

ಕವಿ ಕೋಗಿಲೆಗಳು ಹಾಡಿರುವ ಸ್ಫೂರ್ತಿಯ ನೆಲೆವೀಡು
ನಾಟ್ಯ ಸರಸ್ವತಿ ನರ್ತಿಸಿಹ ನವರಂಗದ ಬೀಡು
ಕಲಿ ಗಂಡೆದೆಗಳು ಮೆರೆದಿರುವ ಸಿಡಿಲಿನ ಮರಿನಾಡು
ಇತಿಹಾಸದ ಪುಟ ಪುಟದಲ್ಲು ಬೆಳಗಿಹ ಕರುನಾಡು
ಕೃಷ್ಣ ಶರಾವತಿ ಕಾವೇರಿ ಹರಿದಿಹ ಹೊಳೆನಾಡು
ಮಲೆನಾಡಿನ ಗಿರಿಶೃಂಗಗಳು ಕಂಗೊಳಿಸಿಹ ಬೀಡು
ಪಡುವಣ ಕಡಲಲಿ ಬಿಂಬಿಸುವ ಕರಾವಳಿಯ ನೋಡು
ರತಿ ರೂಪಸಿಯರ ನಾಚಿಸುವ ಸುಂದರ ಕರುನಾಡು
ಮುಗಿಲನು ಮುಟ್ಟಿ ನಿಂತಿರುವ ಗೊಮ್ಮಟನ ನಾಡು
ವಿಶ್ವಖ್ಯಾತಿ ಕುಶಲಕಲಾ ಗುಮ್ಮಟಗಳ ಬೀಡು
ಮಾನವೀಯ ದನಿಗಳಿಗೆ ಜನ್ಮವಿತ್ತ ನಾಡು
ವಿಶ್ವಮಾನವತೆ ಸಾರುತಿಹ ಹೆಮ್ಮೆಯ ಕರುನಾಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಬಿ
Next post ಆಡಿ ನಲಿಯೋಣ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…