ಕೊಳಲು

ಹಿಡಿಯಿದನು, ಇದುವೆ ಆ ಕಥೆಯ ತಬ್ಬಲಿಗೊಳಲು.
ಗೆಳೆಯನಿದನಾಯ್ದು ತಂದನು ಬನದ ಬಿದಿರು ಮೆಳೆ-
ಯೆದುರು ಗಣೆಯಾಗಿರಲು, ಅದ ತಿದ್ದಿ ತೀಡಿ ಕೊಳೆ,-
ಒಳಗೆಲ್ಲ ಕಾಣಿಸಿತು ತುಂಬಿ ಬಂದಿಹ ತಿಳಲು.
ಅದನು ಕೊರೆಯುತ ಸವರಿ ಹನಿ ಹೆಜ್ಜೆಗಳನಿಡಲು
ಹರಿದಿತಿದರೊಳಗಿಂದ ಗಾನದಿನದನಿಯ ಹೊಳೆ.
ಕೊಳಲ ನುಡಿಸಲು ಗೆಳೆಯ ಮೆಲುಮೆಲನೆ ಪ್ರೀತಿಮೊಳೆ-
ವಂತೆಲ್ಲರೆದೆಯಾಳದಲಿ, ಹಿಗ್ಗಿ ತಿಡಿ ಹೊಳಲು!

ಒಂದೆರಡು ವರುಷಗಳ ಮೇಲೆ ಕುಗ್ಗಿತು ಕೊರಲು,
ಒಲಿಯದಾ ಚೆಲುವೆಯಲ್ಲೊಸೆದ ಸಖ ಕಣ್ಣಿನಲಿ
ಒಗುಮಿಗುವ ಶೋಕವನು ಮುರಲಿಯಲಿ ಹರಿಸಿದನು.
ಅವನ ದೇಹವದೀಗ ಬೂದಿಯಿರೆ ಮಣ್ಣಿನಲಿ-
ಕಾಣದಿದೆ ಈ ಕೊಳಲು ತನ್ನ ನುಡಿಸಿದ ಬೆರಳು.
ಮಂತ್ರಿಸಿದ ಕೊಳಲಯ್ಯ! ಎಚ್ಚರದಿ ನುಡಿಸಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಪ್ರೇಮ ಯುಗ ಶಿಲ್ಪಿ
Next post ಕಾಡುತಾವ ನೆನಪುಗಳು – ೨೭

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…