Home / ಕವನ / ಕವಿತೆ / ಕಾಣುವ ಕಣ್ಣಿಗೆ ಸಗ್ಗಸಿರಿ

ಕಾಣುವ ಕಣ್ಣಿಗೆ ಸಗ್ಗಸಿರಿ

ಸ್ವರ್ಗವೆಂದರೆ ಇಲ್ಲೆ ಕನ್ನಡ ನಾಡಲ್ಲಿ
ನಲುಮೆ ಗೆಲುಮೆ ಒಲುಮೆ ಎಲ್ಲ ನಿತ್ಯ ನೋಡಿಲ್ಲಿ
ಚೆಲುವು ಬೆಡಗು ಹಸಿರ ಮೆರಗು ಎಂದೂ ಹಸಿರಾಗಿ
ತಣಿಸಿದೆ ಕಣ್ಮನ… ಉಣಿಸಿದೆ ಹೂರಣ… ಚೆಲುವಿನ ಸಲೆಯಾಗಿ
ಪಂಪ ನಾರಣಪ್ಪರ ರನ್ನ ರಾಘವಾಂಕರ
ಕಾವ್ಯ ಜ್ಯೋತಿ ಬೆಳಗಿದೆ; ಅಂಧಕಾರ ನೀಗಿದೆ
ಬಸವಣ್ಣ ಅಲ್ಲಮರ ಕನಕದಾಸ ಪುರಂದರ
ನೀತಿ ಮಾರ್ಗ ಕಂಡಿದೆ; ವಿಶ್ವಪಥಕೆ ಕೂಡಿದೆ
ಕನ್ನಡದಾ ಗಾಯನ… ಹೊಸತು ವಿನೂತನ…
ಸೃಷ್ಟಿಯಲ್ಲಿ ಸೊಬಗಲ್ಲಿ ಎಂದೂ ಚಿರಚೇನ || ೧ ||

ಬಾಹುಬಲಿ ನೃಪತುಂಗ ಮಹಾದೇವಿ ಉತ್ತುಂಗರ
ತ್ಯಾಗ ಭೂಮಿ ಸತ್ವವು; ಕನ್ನಡದೇ ನಿತ್ಯವು
ವೀರರಾಣಿ ಚೆನ್ನಮ್ಮ ಕಾವ್ಯರಾಣಿ ಹೊನ್ನಮ್ಮ
ಸಾಧನೆಗೆ ಸ್ಫೂರ್ತಿಯು; ಉತ್ಸಾಹಕೆ ಹಾದಿಯು
ಕನ್ನಡದಾ ಕಾಣಿಕೆ… ಜಗಮಾತೆಗೆ ಮಾಣಿಕೆ…
ನಿತ್ಯ ಕಂಗೊಳಿಸುವ ಮುತ್ತಿನ ಸರ ಮಾಲಿಕೆ || ೨ ||

ಬೇಲೂರ ಕಲೆ ಗುಡಿಯು ಬಾದಾಮಿ ಗವಿ ಶಿಲೆಯು
ಶಿಲ್ಪಿಗಳ ಕರ ಕುಶಲ; ನವರಸಗಳ ಹೂತಲ
ಕಾವೇರಿಯ ಕಲರವ; ಮಲೆನಾಡಿನ ಗಿಡಮರವ
ಕಾವೇರಿಯ ಕಂಠದಲೆ ಕವಿಗಳಿಗೆ ಸ್ಫೂರ್ತಿನೆಲೆ
ಕನ್ನಡವೇ ನಿತ್ಯವು… ಎಂದೂ ಅದು ಸತ್ಯವು
ನುಡಿಯಲು ರೋಮಾಂಚನ ಕೇಳಿ ಜನ್ಮ ಪಾವನ || ೩ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...