Home / ಕವನ / ತತ್ವಪದ / ಬುತ್ತಿಗಂಟು

ಬುತ್ತಿಗಂಟು

ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ
ಬಂದೆಯಾ ಭುವಿಗೆ ಮಾನವಾ
ಅತ್ಯಮುಲ್ಯದ ಈ ದೇಹವ ಪಡೆದು
ಆಗ ಬೇಡ ನೀನೆಂದು ದಾನವಾ

ಬರುವಾಗ ಬಂದೆ ದೇಹದೊಂದಿಗೆ
ಹೋಗುವಾಗ ಶರೀರವು ಬಾರದು
ಹೊನ್ನು ಸಂಪತ್ತು ಸಂಚಯಿಸಿದ್ದು
ನಿನ್ನ ಸಾವಿಗೆ ಅದು ಅಡ್ಡಬಾರದು

ಬಂಧು ಬಾಂಧವರು ಆತ್ಮೀಯರೆ!
ಅವರ ತಮ್ಮ ಸುಖಕ್ಕೆ ಕಾದಿಹರು
ನೀನು ಸತ್ತ ಕ್ಷಣದ ಒಳಗೆ
ನಿನ್ನ ತನುವಿಗೆ ಬೆಂಕಿ ಇಡುವರು

ಸಂತೆ ಇದು ಜಗ ಬಣ್ಣದ ಬದುಕು
ಜಾತ್ರೆ ಮುಗಿದರಾಯ್ತು ಇಲ್ಲವಾಗ್ವುದು
ಕರ್‍ಮಧರ್‍ಮಗಳ ಗಂಟುಮೂಟೆಯ
ಹೊತ್ತು ಧರಿಸು, ಇಲ್ಲವೆನ್ನಲಾಗದು

ಕಾಲ ಮಿಂಚಿಲ್ಲ ಮನವು ನಿನ್ನದು ಈಗ
ದುಡಿಸಿಕೊ ದೇವ ಮಾರ್‍ಗದಿ ನಡೆಸಿಕೊ
ನಿನ್ನ ಬುತ್ತಿಯ ಗಂಟಲಿ ಪುಣ್ಯವೇ ಇರಲಿ
ಮಾಣಿಕ್ಯವಿಠಲನಾಗಿ ನಿನ್ನ ದುಡಿಸಿಕೊ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...