ಬುತ್ತಿಗಂಟು

ಲಕ್ಷ ಲಕ್ಷ ಯೋನಿಗಳಲ್ಲಿ ತೇಲಿ
ಬಂದೆಯಾ ಭುವಿಗೆ ಮಾನವಾ
ಅತ್ಯಮುಲ್ಯದ ಈ ದೇಹವ ಪಡೆದು
ಆಗ ಬೇಡ ನೀನೆಂದು ದಾನವಾ

ಬರುವಾಗ ಬಂದೆ ದೇಹದೊಂದಿಗೆ
ಹೋಗುವಾಗ ಶರೀರವು ಬಾರದು
ಹೊನ್ನು ಸಂಪತ್ತು ಸಂಚಯಿಸಿದ್ದು
ನಿನ್ನ ಸಾವಿಗೆ ಅದು ಅಡ್ಡಬಾರದು

ಬಂಧು ಬಾಂಧವರು ಆತ್ಮೀಯರೆ!
ಅವರ ತಮ್ಮ ಸುಖಕ್ಕೆ ಕಾದಿಹರು
ನೀನು ಸತ್ತ ಕ್ಷಣದ ಒಳಗೆ
ನಿನ್ನ ತನುವಿಗೆ ಬೆಂಕಿ ಇಡುವರು

ಸಂತೆ ಇದು ಜಗ ಬಣ್ಣದ ಬದುಕು
ಜಾತ್ರೆ ಮುಗಿದರಾಯ್ತು ಇಲ್ಲವಾಗ್ವುದು
ಕರ್‍ಮಧರ್‍ಮಗಳ ಗಂಟುಮೂಟೆಯ
ಹೊತ್ತು ಧರಿಸು, ಇಲ್ಲವೆನ್ನಲಾಗದು

ಕಾಲ ಮಿಂಚಿಲ್ಲ ಮನವು ನಿನ್ನದು ಈಗ
ದುಡಿಸಿಕೊ ದೇವ ಮಾರ್‍ಗದಿ ನಡೆಸಿಕೊ
ನಿನ್ನ ಬುತ್ತಿಯ ಗಂಟಲಿ ಪುಣ್ಯವೇ ಇರಲಿ
ಮಾಣಿಕ್ಯವಿಠಲನಾಗಿ ನಿನ್ನ ದುಡಿಸಿಕೊ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೦
Next post ಮಲ್ಲಿ – ೮

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…