ಶೂನ್ಯ

ಹುಟ್ಟಿನ ಕಾರಣ ತಿಳಿಯದೇ
ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ
ಅನಂತದಲ್ಲಿ ವಿಲೀನವಾಗುವುದಷ್ಟೇ
ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ
ನೆನಪು – ಮೂಲಭೂತವಾಗಿ ಇರುವುದು
ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು
ಅನಂತ ದಿಕ್ಕುಗಳು.  ಹೌದು, ಮೂಡಣ,
ಪಡುವಣ ಎಲ್ಲಾ ಭ್ರಮೆಗಳು.

ಮೂಡಣ, ಪಡುವಣ
ಅರಿಯದಿರುವುದು ಸತ್ಯಕ್ಕೆ ಹೆಚ್ಚು
ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ
ಎಲ್ಲಿಂದ ಬರುತ್ತಾನೆಂದು ಯಾರಿಗೂ
ಗೊತ್ತಿಲ್ಲ.  ಸಾಕಾರವೇ ನಿರಾಕಾರ,
ನಿರಾಕಾರವೇ ಸಾಕಾರ-ಬುದ್ಧನ
ಬೋಧನೆ ಎಲ್ಲಾ ಅಂಶಗಳನ್ನೂ
ಒಳಗೊಂಡಿದೆ.  ಸ್ಥಾವರ, ಜಂಗಮ
ಎಲ್ಲವೂ ಒಂದೇ.  ಆದರೆ ಎಲ್ಲವೂ
ಶೂನ್ಯ.

ಮನುಷ್ಯನು ಜೀವಿಯೂ
ಅಲ್ಲ.  ನಿರ್ಜೀವಿಯೂ ಅಲ್ಲ.  ಆತ
ಜನಿಸಿಯೂ ಇಲ್ಲ.  ಗತಿಸಿಯೂ ಇಲ್ಲ.  ಆ
ದಿನ ಭತ್ತದ ಕುಯಿಲು ಮಾಡುತ್ತಿದ್ದಾಗ
ಯುವಜನರಿಗೆ ಹೇಳಿದೆ – ವಸಂತದಲ್ಲಿ
ನಾಟಿ ಮಾಡಿದಾಗ ಭತ್ತ
ಮೊಳಕೆಯೊಡೆದು ಜನ್ಮ ಪಡೆಯಿತು.
ಈಗ ಹಣ್ಣಾಗಿದೆ.  ಸತ್ತಂತೆ ಕಾಣುತ್ತಿದೆ.  ಈ
ಹುಟ್ಟುಸಾವಿನ ಆಟ ನಿರಂತರ….

*****
(ಮೂಲ- ಮಸನೊಬ ಫುಕವೊಕ)

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರುಣೆಯೇ ಇಲ್ಲ
Next post ಭಾಷ್ಯ ಬರೆಯುವುದೆಂತು

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…