ಶೂನ್ಯ

ಹುಟ್ಟಿನ ಕಾರಣ ತಿಳಿಯದೇ
ಕಡೆಗೊಮ್ಮೆ ಕಣ್ಣುಮುಚ್ಚಿ ಅರಿಯದ
ಅನಂತದಲ್ಲಿ ವಿಲೀನವಾಗುವುದಷ್ಟೇ
ನಮಗೆ ಗೊತ್ತು.  ಎಂದೋ ಒಮ್ಮೆ ಓದಿದ
ನೆನಪು – ಮೂಲಭೂತವಾಗಿ ಇರುವುದು
ಬರೀ ಪೂರ್ವ ಪಶ್ಚಿಮಗಳಲ್ಲ.  ಹತ್ತು
ಅನಂತ ದಿಕ್ಕುಗಳು.  ಹೌದು, ಮೂಡಣ,
ಪಡುವಣ ಎಲ್ಲಾ ಭ್ರಮೆಗಳು.

ಮೂಡಣ, ಪಡುವಣ
ಅರಿಯದಿರುವುದು ಸತ್ಯಕ್ಕೆ ಹೆಚ್ಚು
ಹತ್ತಿರವಾದುದು.  ವಾಸ್ತವದಲ್ಲಿ ಸೂರ್ಯ
ಎಲ್ಲಿಂದ ಬರುತ್ತಾನೆಂದು ಯಾರಿಗೂ
ಗೊತ್ತಿಲ್ಲ.  ಸಾಕಾರವೇ ನಿರಾಕಾರ,
ನಿರಾಕಾರವೇ ಸಾಕಾರ-ಬುದ್ಧನ
ಬೋಧನೆ ಎಲ್ಲಾ ಅಂಶಗಳನ್ನೂ
ಒಳಗೊಂಡಿದೆ.  ಸ್ಥಾವರ, ಜಂಗಮ
ಎಲ್ಲವೂ ಒಂದೇ.  ಆದರೆ ಎಲ್ಲವೂ
ಶೂನ್ಯ.

ಮನುಷ್ಯನು ಜೀವಿಯೂ
ಅಲ್ಲ.  ನಿರ್ಜೀವಿಯೂ ಅಲ್ಲ.  ಆತ
ಜನಿಸಿಯೂ ಇಲ್ಲ.  ಗತಿಸಿಯೂ ಇಲ್ಲ.  ಆ
ದಿನ ಭತ್ತದ ಕುಯಿಲು ಮಾಡುತ್ತಿದ್ದಾಗ
ಯುವಜನರಿಗೆ ಹೇಳಿದೆ – ವಸಂತದಲ್ಲಿ
ನಾಟಿ ಮಾಡಿದಾಗ ಭತ್ತ
ಮೊಳಕೆಯೊಡೆದು ಜನ್ಮ ಪಡೆಯಿತು.
ಈಗ ಹಣ್ಣಾಗಿದೆ.  ಸತ್ತಂತೆ ಕಾಣುತ್ತಿದೆ.  ಈ
ಹುಟ್ಟುಸಾವಿನ ಆಟ ನಿರಂತರ….

*****
(ಮೂಲ- ಮಸನೊಬ ಫುಕವೊಕ)

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕರುಣೆಯೇ ಇಲ್ಲ
Next post ಭಾಷ್ಯ ಬರೆಯುವುದೆಂತು

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…