ದಟ್ಟ ನಗರದ ಈ

ದಟ್ಟ ನಗರದ ಈ
ಸ್ಪಷ್ಟ ಏಕಾಂತದಲ್ಲಿ
ಈ ಹೋಟೆಲಿನ ಈ
ಮೂಲೆಯಲ್ಲಿ
ಈ ಟೇಬಲಿನ ಈ
ಎರಡು ಪಕ್ಕಗಳಲ್ಲಿ

ಕೂತಿರುವ ನಾವು
ಈಗ ಯೋಚಿಸುತ್ತಿರುವುದು ಏನು ಪ್ರಿಯೆ ?
ಅದು ಜಾಫ್ನಾ ಅಲ್ಲ
ನಾಳಿನ ಭಾರತದ
ಸ್ವಪ್ನವೂ ಅಲ್ಲ
ಅದು ಶ್ರೀಲಂಕಾ ಅಲ್ಲ
ಅದು ಗೋಯಂಕಾ ಅಲ್ಲ
ಅಲ್ಲ ಅದು ತೆಲಂಗಾಣ

ಹಾಲೀ
ನಾವು ಮಾಡಿದ್ದೇವೆ ನಮ್ಮ ಮನಸುಗಳನ್ನು
ಖಾಲಿ
ನಾನಂತೂ
ಇದ್ದೇನೆ ಮೌನದಲ್ಲಿ

ಮೌನವ ಕೊಡು ಮೌನವ ತಕೊ
ನಾನಿರುತ್ತೇನೆ ಹೀಗೇ
ಈ ಚಹಾ ತಟ್ಟೆಯ ಎದುರು
ಹಗಲುಗಳೆದ್ದು ಮುಳುಗುವ ಈ ಸಿಟಿಯ
ಕಾಂಪ್ಲೆಕ್ಸಿಟಿಯ
ಆಳ
ಆಳ
ಆಳದಲ್ಲಿ

ನನ್ನ ಹೆಸರಿದೆ ಗಳತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಮೋಚನಾ
Next post ರಣಹೇಡಿ ಸರ್ಕಾರ ಹೆಣ ಹೊರೋಕೂ ನಾಲಾಯಕ್ಕು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys