Home / ಕವನ / ಕೋಲಾಟ / ಸುಗ್ಗಿ ಪದ – ಜಾಗಡಿ ಪದ

ಸುಗ್ಗಿ ಪದ – ಜಾಗಡಿ ಪದ

ಅತಾಳ ಪಾತಾಳ ಸಾತಾಳ ರಸತಾಳ
ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ ||

ಭೂತಾಳದೊಳಗೊಂದು ಶಶಿ ಹುಟ್ಟಿ
ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ ||

ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ
ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ ||

ಆಕಾಶಕೆ ಸೈವಾಗಿ ನೆಗುದೀತಾ ಶಶೀ
ವೃಕ್ಷವೆಂಬ ಹೆಸರೂ ಬಂದೀತು ಕೋಲೇ || ೪ ||

ವೃಕ್ಷವೆಂಬ ಹೆಸರೂ ಬಂದೀತಾ ಶಶೀಗೇ
ಕಾಯಿ ಹಣ್ಣಾಗಿ ಬೆಳುಗೀತು ಕೋಲೇ || ೫ ||

ಕಾಯಿ ಹಣ್ಣಾಗಿ ಬೆಳುಗಿತಾ ವೃಕ್ಷಕ್ಕೆ
ನೂರ್ವೊಂದು ಕಪಿಗಳು ಯೆರುಗಾವೆ ಕೋಲೇ || ೬ ||

ನೂರ್ವೊಂದು ಕಪಿಗಳು ಯೆರುಗಾವಾ ವೃಕ್ಷಕ್ಕೆ
ಭೂಮೀಗ್ವೊಂದು ಹೆಗಲೂ ಯೆರುಗಾವೆ ಕೋಲೇ || ೭ ||

ಭೂಮೀಗ್ವೊಂದು ಹೆಗಲೂ ಯೆರುಗಾವಾ ವೃಕ್ಷಕ್ಕೆ
ಆಚೇರಿ ತಿಮ್ಮಣ್ಣ ಕಡುತಂದಾ ಕೋಲೇ || ೮ ||

ಆಚೇರಿ ತಿಮ್ಮಣ್ಣ ಕಡುತಂದಾ ಹೆಗಲಾ
ಗುಡುಗಾರ ಬೊಮ್ಮಣ್ಣ ಪಡತಿಕೆತ್ತಿದ ಕೋಲೇ || ೯ ||

ಪಡತಿಕೆತ್ತಿ ಬೆಳಗಿಟ್ಟ ಕೋಲಿಗೆ
ಹೊನೆ ಮಾಣ ದೇವ್ರ ಮುಂದೆ ಮಡುಗಿದರು ಕೋಲೇ || ೧೦ ||

ಹೊನೆ ಮಾಣ ದೇವ್ರ ಮುಂದೆ ಮಡಗೀದಾ ಕೋಲಿಗೆ
ಗಂದಾ ಹೂವನ್ನೆ ಪೂಸಿದರು ಕೋಲೇ || ೧೧ ||

ಗಂದಾ ಹೂವನ್ನೆ ಪೂಸಿದಾ ಕೋಲಿಗೆ
ಹಣ್ಣುವೀಳ್ಯಾವಾ ಇಟ್ಟಿದರು ಕೋಲೇ || ೧೨ ||

ಹಣ್ಣುವೀಳ್ಯಾವಾ ಇಟ್ಟಿದಾ ಕೋಲಿಗೆ
ಕಾಯೊಡದಿ ಕಯ್ಯಾ ಮುಗಿದಾರೂ ಕೋಲೇ || ೧೩ ||

ಕಾಯೊಡದಿ ಕಯ್ಯಾ ಮುಗಿದಾರಾ ಕೋಲಿಗೆ
ಮಂಗಳಾರತಿಯಾ ಬೆಳಗಿದರು ಕೋಲೇ || ೧೪ ||

ಮಲವಯ್ಯನೆಂಬವ ಮಾದೊಡ್ ಶೂರ
ಮಲವಯ್ಯನೆಂಬವ ಮಾದೊಡ್ ಶೂರನು ಕೋಲೇ || ೧೫ ||

ಉಟ್ಟಾ ಮೈಲಿಗೆಯಾ ತೆಗೆಯನು ತೊಳೆಯಾನು ಮಲವಯ್ಯ
ಉಂಡಾ ಯಂಳ್ಳಕೆ ಅಂಜನು ಕೋಲೇ || ೧೬ ||

ಮಲವಯ್ಯಾ ನೆಂಬವ ಮರಕೆ ಹಬ್ಬಿದ ಬಳ್ಳೀ
ಎಂದೀಗೂ ಬಳ್ಳಿ ಹರಿಯಾವು ಕೋಲೇ || ೧೭ ||

ಇಂದೀಗಾ ಬಳ್ಳಿ ಹರಿಯಾವು ಹುಸಿಯಾವು
ಇಂದೀಗಾ ಮರನಾ ಬಿಡಲಾರೆ ಕೋಲೇ || ೧೮ ||

ಮಲವಯ್ಯ ಮಲಗೂವ ಮಂಚಾದ ಕೋಲಿಗೆ
ಜಂತಾದವೆಂಬೂ ಬೊಂಬೇಗಳು ಕೋಲೇ || ೧೯ ||

ಜಂತಾದವೆಂಬೂ ಬೊಂಬೇಗಳು ಮಂಚಕ್ಕೆ
ಇಂದಿಗಾ ಮರನಾ ಬಿಡಲಾರೆ ಕೋಲೇ || ೨೦ ||

ಕೋಲಣ್ಣ ಗಂಗೀಗೂ ಕೋಲಣ್ಣ ಗೌರಿಗೂ
ಕೋಲು ಕೋಲೇನಾ ಕೋಲೆನ್ನ ಕೋಲೇ || ೨೧ ||

ಕಾಲೂ ಬಾಲಾ ಚಂದಾ ಮೇಲೇ ಹೆಗಲೂ ಚಂದಾ
ಬಾಲದಲ್ಲೀ ಚಂದಾ ಬಸುವಯ್ಯಾ ಕೋಲೇ || ೨೨ ||

ಬಾಲದಲ್ಲಿ ಚಂದಾ ಬಸವಯ್ಯಾನಾ ಪಾದಕ್ಕೆ
ಹಣ್ಣುವೀಳ್ಯಾ ಇಟ್ಟು ಶರಣೆಂಬೆ ಕೋಲೇ || ೨೩ ||

ಹಣ್ಣುವೀಳ್ಯಾ ಇಟ್ಟು ಏನಂದಿ ಶರಣಂಬೇ
ನಾವ ಮಾಡುವಾ ಕಾರ್ಯ ಜೀಯ ಎಂದು ಕೋಲೇ || ೨೪ ||

ಕಾಲು ಬಾಲಾ ಚಂದಾ ಮೇಲೆ ಪಾವ್ಡಾ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ಯನ ಕೋಲೇ || ೨೫ ||

ಹಾಲಗಾಯೀ ವಡೂದೂ ಬಸವಯ್ಯನ ಪಾದಕ್ಕೆ
ಹಾಲಗಾಯೀ ವಡುದೂ ಶರಣಂಬೆ ಕೋಲೇ || ೨೬ ||

ಹಾಲಗಾಯೀ ವಡುದೂ ಏನಂದಿ ಶರಣಂಬೇ?
ನಾವ ಮಾಡೂವಾ ಕಾಯಕ ಜಂಬುವೆಂದೂ ಕೋಲೇ || ೨೭ ||

ಕಾಲೂ ಬಾಲಾ ಚಂದಾ ಮೇಲೇ ಶೊಂಬೂ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ನ ಕೋಲೇ || ೨೮ ||

ಬಾಲಾದಲ್ಲಿ ಚಂದಾ ಬಸುವಯ್ನ ಪಾದಕ್ಕೆ
ಮಂಗಲಾರತಿಯಾ ಬೆಳಗಿರೇ ಕೋಲೇ || ೨೯ ||

ಮಂಗಲಾರತಿಯಾ ಬೆಳಗಿರೇ ಬಸುವಯ್ಯಗೇ
ನಾವು ಮಾಡುವಾ ಕಾರ್ಯಾ ಜಯವೆಂದೂ ಕೋಲೇ || ೩೦ ||
*****
ಹೇಳಿದವರು: ಶ್ರೀ ಮಂಜು ಬಡವ ನಾಯ್ಕ, ಹೊನ್ನಾಕುಳಿ, ೨೪/೧೦/೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...