ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ
ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ
ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು
ಉದ್ದುದ್ದ ಕೋಲು ಚೆಲ್ಲುತ ಬರುವ
ಸಂಕ್ರಾಂತಿ ಕಾಲ-

ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು
ಹೊರಬಾಗಿಲು ಕಟ್ಟೆಗೆ ಬಂದು ಕೂಡುವ
ಊರುಗೋಲು ಹಿಡಿದ ಅಜ್ಜನ ಬೊಚ್ಚುನಗು;
ಮೊಮ್ಮಕ್ಕಳ ಕೈ ಹಿಡಿದು ಹಿತ್ತಲಂಗಳದ
ಬಳ್ಳಿಕಾಯಿ ಹರಿವ, ಉಡಿಯೊಳಗೆ ಮೊಮ್ಮಕ್ಕಳನು
ಆಡಿಸುತ ಚಿತ್ತಾರದ ಕೌದಿ ಹೊಲೆಯುವ
ಬೆಚ್ಚನೆಯ ನಗುವಿನ ಅಜ್ಜಿ;
ಒಲೆಯ ಮುಂದೆ ಕುಳಿತು ಪ್ರೀತಿ ಪ್ರೇಮದ
ಮುಗುಳು ನಗೆಯ ಕುಸುರೆಳ್ಳಿಗೆ
ಮತ್ತೆ ಮತ್ತೆ ಮುಳ್ಳೆಬ್ಬಿಸಿ ತುಟಿಗೊತ್ತಿಕೊಳ್ಳುವ
ಹದಿಹರೆಯದ ಸಂಭ್ರಮದ ತುಂಟು ಹುಡುಗಿಯರು –

ಹಳ್ಳ ಹೊಳೆಗಳ ಬೆಚ್ಚನೆಯ ನೀರಿನಲಿ ಮಿಂದೆದ್ದು
ಮಡಿಯುಟ್ಟು ಸುಗ್ಗಿಯ ಹೊಸ ಫಸಲು ಪೂಜಿಸುವ ಕಾಲ
ಹಬ್ಬ ಹಬ್ಬಗಳ ನೆಪಮಾಡಿ ಉಂಡುಟ್ಟು
ಸಿಹಿ ತಿಂದು ನಕ್ಕು ನಲಿದು ಆಕಾಶದಂಗಳಕೆ
ಪತಂಗ ಹಾರಿಸುವ ಗೂಡು ಹಕ್ಕಿಗಳ ಸ್ವಚ್ಛಂದದ ಕಾಲ-

ಗುಲಾಲು ಮೆತ್ತಿ ರಿಬ್ಬನ್‌ ಕಟ್ಟಿ ಎತ್ತುಗಳ ಸಿಂಗರಿಸಿ
ಕೆಂಡ ಹಾಯಿಸುವ ಚಕ್ಕಡಿ ಓಡಿಸುವ ಮೋಜಿನ ಕಾಲ
ಪಾಪ ಕರ್‍ಮಗಳ ಪ್ರಾಯಶ್ಚಿತಕೆ
ನಿಗಿನಿಗಿ ಕೆಂಡಹಾಯುವ ಪರ್‍ವಕಾಲ

ವರುಷ ವರುಷ ಸಾವಿರ ವರುಷಗಳ
ಪುರಾಣ ಇತಿಹಾಸಗಳ ಕಥೆ ಹೊತ್ತು
ರಥವೇರಿ ಬರುವ ಸೂರ್‍ಯ
ಸುಸ್ತಾಗದೆ ಸಿಟ್ಟಾಗದೆ ಮತ್ತೆ ಮತ್ತೆ
ಜಾಗತೀಕರಣದ ಸಂತೆ ಪೇಟೆಯ
ಗಂಟು ಕಟ್ಟಿಕೊಳ್ಳುತ ಭವಿಷ್ಯಕೆ ಬಿಚ್ಚಲು
ಒಮ್ಮೆ ಉತ್ತರಾಯಣ ಒಮ್ಮೆ ದಕ್ಷಿಣಾಯಣದ
ಕಾಲಚಿತ್ರ ಬಿಡಿಸುತ ಅವನೂ ನಿರಮ್ಮಳವಾಗುವ ಕಾಲ
ಇದು ಎಳ್ಳು ಬೆಲ್ಲವ ತಿಂದು ಒಳ್ಳೊಳ್ಳೆಯ
ಮಾತನಾಡುವ ಸಂಕ್ರಾಂತಿ ಕಾಲ
ಇದು ಸಂಕ್ರಾಂತಿ ಕಾಲ-
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೮
Next post ಕಳ್ಳರ ಕೂಟ – ೬

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…