Home / ಕವನ / ಕವಿತೆ / ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ
ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ
ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ
ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು||

ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ
ಕಿಸುರ ಕಣ್ಣ ಒರೆಸಿ ತುಂಬಿಕೊ ಬೆಳಕ ಪೂರ
ಬಿದಿರು ಮೆಳೆಯಲ್ಲಿ ಅಡಗಿಹನು ಪಿಳ್ಳಂಗೋವಿಯ ಒಡೆಯ
ನವಿಲುಗಣ್ಣ ತೆರೆದು ನೋಡೊ ಒಮ್ಮೆ ಗೆಳೆಯಾ ||ಬಿಸಿಲು||

ಬಿದಿರು ಕಡ್ಡಿಯೆ ಬೇರೆ ಬಿಸಿಲು ಕೋಲೆ ಬೇರೆ
ಬಿದಿರು ಕಡ್ಡಯೆಂದೇ ಬಗೆದು
ಬಿಸಿಲು ಕೋಲ ನುಡಿಸಲು ಬೇಡ ||ಬಿಸಿಲು||

ಅಂಬರದ ಹಕ್ಕಿಗೆ ಆಕಾಶದಗಲದ ರೆಕ್ಕೆ
ರೆಕ್ಕೆ ಬೀಸಿ ಹಕ್ಕಿ ಮೆರೆದರೂ ಬಾನೊಳಗೆ
ಕಾಳು ಕಡ್ಡಿ ಹೆಕ್ಕಿ ಬೆಚ್ಚನೆ ಗೂಡ ಕಟ್ಟಿ
ಬಣ್ಣದ ಹಾಡ ಹೆಣೆದು ಹಣ್ಣಾಯಿತು ನೆಲದೊಳಗೆ ||ಬಿಸಿಲು||

ಮಿಂಚು ಹುಳುವೆ ಬೇರೆ ಮಿನುಗೊ ಚುಕ್ಕಿಯೆ ಬೇರೆ
ಮಿಂಚು ಹುಳುವೆಂದೆ ಬಗೆದು
ಮಿನುಗೊ ಚುಕ್ಕಿಯ ಹಿಡಿಯಲು ಬೇಡ ||ಬಿಸಿಲು||

ನೀರೊಳಗಿನ ನೈದಿಲೆಗೂ ನೀರಡಿಕೆ ತಪ್ಪಿಲ್ಲ
ಚಿಪ್ಪಿನ ಮುತ್ತಿಗೆ ನತ್ತಾದರೂ ನೆಮ್ಮದಿಯಿಲ್ಲ
ಕಾಲು ಕಂಗಾಲಾದರೂ ಕನಸಿಗೆ ಬರವಿಲ್ಲ
ನಡೆದಷ್ಟು ದಾರಿಯು ನಿಲ್ಲೊ ಮಾತೇ ಇಲ್ಲ ||ಬಿಸಿಲು||

ಒಡಲೊಳಗುರಿದರೂ ಬೆಂಕಿ
ಒಲೆಯೊಳಗುರಿದರೂ ಬೆಂಕಿ
ಬೆಂಕಿಯೊಳಗೆ ಬೆಂದು ಬಯಲು ಕಾಣೊ ಗೆಳೆಯಾ ||ಬಿಸಿಲು||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...