Home / ಕವನ / ಕವಿತೆ / ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ….

ಬಿಸಿಲು ಕುದುರೆಯನೇರಿ ಹೋಗಬೇಡೋ ಗೆಳೆಯಾ
ಬೆಂಗಾಡಿನಲಿ ಸುತ್ತಿ ಬೆವರ ಸುರಿಸಲು ಬೇಡ
ಬಯಕೆ ಬೆಟ್ಟವ ಹತ್ತಿ ಹೋಗಬೇಡೋ ಗೆಳೆಯಾ
ಬಂಡೆಯಂತೆ ಉರುಳಿ ಬೆರಗಾಗಲು ಬೇಡ ||ಬಿಸಿಲು||

ಬಿಸಿಲು ಮಚ್ಚಿನ ಮೇಲೆ ಬಿರಿದಿರಲು ಬಳಿ ಸೂರ್‍ಯ
ಕಿಸುರ ಕಣ್ಣ ಒರೆಸಿ ತುಂಬಿಕೊ ಬೆಳಕ ಪೂರ
ಬಿದಿರು ಮೆಳೆಯಲ್ಲಿ ಅಡಗಿಹನು ಪಿಳ್ಳಂಗೋವಿಯ ಒಡೆಯ
ನವಿಲುಗಣ್ಣ ತೆರೆದು ನೋಡೊ ಒಮ್ಮೆ ಗೆಳೆಯಾ ||ಬಿಸಿಲು||

ಬಿದಿರು ಕಡ್ಡಿಯೆ ಬೇರೆ ಬಿಸಿಲು ಕೋಲೆ ಬೇರೆ
ಬಿದಿರು ಕಡ್ಡಯೆಂದೇ ಬಗೆದು
ಬಿಸಿಲು ಕೋಲ ನುಡಿಸಲು ಬೇಡ ||ಬಿಸಿಲು||

ಅಂಬರದ ಹಕ್ಕಿಗೆ ಆಕಾಶದಗಲದ ರೆಕ್ಕೆ
ರೆಕ್ಕೆ ಬೀಸಿ ಹಕ್ಕಿ ಮೆರೆದರೂ ಬಾನೊಳಗೆ
ಕಾಳು ಕಡ್ಡಿ ಹೆಕ್ಕಿ ಬೆಚ್ಚನೆ ಗೂಡ ಕಟ್ಟಿ
ಬಣ್ಣದ ಹಾಡ ಹೆಣೆದು ಹಣ್ಣಾಯಿತು ನೆಲದೊಳಗೆ ||ಬಿಸಿಲು||

ಮಿಂಚು ಹುಳುವೆ ಬೇರೆ ಮಿನುಗೊ ಚುಕ್ಕಿಯೆ ಬೇರೆ
ಮಿಂಚು ಹುಳುವೆಂದೆ ಬಗೆದು
ಮಿನುಗೊ ಚುಕ್ಕಿಯ ಹಿಡಿಯಲು ಬೇಡ ||ಬಿಸಿಲು||

ನೀರೊಳಗಿನ ನೈದಿಲೆಗೂ ನೀರಡಿಕೆ ತಪ್ಪಿಲ್ಲ
ಚಿಪ್ಪಿನ ಮುತ್ತಿಗೆ ನತ್ತಾದರೂ ನೆಮ್ಮದಿಯಿಲ್ಲ
ಕಾಲು ಕಂಗಾಲಾದರೂ ಕನಸಿಗೆ ಬರವಿಲ್ಲ
ನಡೆದಷ್ಟು ದಾರಿಯು ನಿಲ್ಲೊ ಮಾತೇ ಇಲ್ಲ ||ಬಿಸಿಲು||

ಒಡಲೊಳಗುರಿದರೂ ಬೆಂಕಿ
ಒಲೆಯೊಳಗುರಿದರೂ ಬೆಂಕಿ
ಬೆಂಕಿಯೊಳಗೆ ಬೆಂದು ಬಯಲು ಕಾಣೊ ಗೆಳೆಯಾ ||ಬಿಸಿಲು||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...