ನಿನಗಾಗಿ ಏನು!

ಬದುಕು ಇದು ಭವದ ಕಾರ್‍ಮುಗಿಲು
ನರಜನ್ಮವಿದು ಹರನ ಮರೆತಿಹುದು
ನಿತ್ಯ ಮನುಜನಿಗೆ ಮನಸೆ ಸಂಚಾಲಕ
ಆಸೆ ನಿರಾಸೆಗಳೊಳಗೆ ತೊಳಲಾಡುತಿಹುದು

ನೂರು ವರುಷ ಆಯಸ್ಸು ಇದೆಯೋ ಗೊತ್ತಿಲ್ಲ
ಕೋಟಿ ವರುಷಕ್ಕಾಗುವಷ್ಟು ಧನವು ಸಂಚಯನ
ಬಂಧು ಮಿತ್ರರು ಸಮಯಕ್ಕುಂಟೊ ಗೊತ್ತಿಲ್ಲ
ಅವರ ಬದುಕಿಗಾಗಿ ನಿತ್ಯ ರಾಮಾಯಣ

ದೇಹ ಭಾವಗಳಲಿ ಮರೆತು ಮರೆದವರು
ಒಡನಾಡಿಗಳ ನಡುವೆ ತಾವೇ ವೀರಮತಿ
ತಮ್ಮೊಳಗಿನ ಆತ್ಮ ಹೇಗಿರುವನೋ ಅರಿಯದವರು
ವೇದಾಂತಗಳ ಉದ್ಧರಿಸುವ ತಾವೆಯತಿ

ಯಾವಕ್ಷಣಕಕ್ಕೂ ಬಂತು ಈ ಜೀವ ಲೋಕಕ್ಕೆ
ಆ ಗಳಿಗೆಯಿಂದಲೇ ಹುಟ್ಟಿತ್ತು ಸ್ವಾರ್ಥ ವಂಚನೆ
ಕ್ಷಣಕ್ಕೂ ಮಾಡಿದುಕ್ಕೆಲ್ಲ ಕೊಡಬೇಕಲ್ಲವೆ ಲೆಕ್ಕ
ಮಾಣಿಕ್ಯ ವಿಠಲನಾಗಿ ಬೇಡ ಆತ್ಮ ವಂಚನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೫
Next post ಗಾಂಧೀ ತಾತ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…