ಮನ್ನಿಸುವ ದೇವ

ಲಕ್ಷ ಜನುಮಗಳ ಗಳದಾಟಿ ಬಂದೇವು
ಈ ಮನುಜ ಶರೀರ ನಾವು ಪಡೆದೇವು
ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ
ನಿದ್ರೆ ಆಹಾರ ಮೈಥುನದ ದುರಭ್ಯಾಸವೆ!

ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು
ನೀನು ಸಾಕ್ಷಾತ ಪರಮಾತ್ಮನ ತಂತು
ಗಗನದೆತ್ತರದ ಯೋಜನೆಗಳ ಸೃಷ್ಟಿಸಿ
ಈ ಬಾಳೆ ಸಾರ್ಥಕವೆಂದು ಭ್ರಮಿಸಿ

ಅಹಂಕಾರ ನಿನ್ನದು ಕಪ್ಪು ಚುಕ್ಕೆ
ಸದಾ ಎಳುಯುವುದು ನಿನ್ನ ನರಕಕ್ಕೆ
ಮಾನ ಅಪಮಾನ ಶರೀರ ಭಾವಗಳು
ಸದಾ ಅಶಾಂತಿಯ ಅವಿರ್‍ಭಾವಗಳು

ರವಿಯ ತೇಜದ ನೀನು ತೇಜೊ ಬಿಂದು
ಪ್ರೇಮ ಸಾಗರದ ನೀನು ದೈವ ಸಿಂಧು
ನಿನ್ನಸು ಕರ್ಮಗಳೇ ನಿನಗೆ ನೆಳಲು
ನಿನ್ನ ಎತ್ತಿಕೊಳ್ಳುವನು ಮಾಣಿಕ್ಯ ವಿಠಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೭
Next post ಜೋತಿ ಒಂದೇ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…