ಗೋಮಾತೆ

ಮನುಜ ಕೋಟಿಯ ತಣಿಸಿ ಸವಿಯಮೃತಮನ್ನುಣಿಸಿ
ಬೆಳೆಸುತಿಹ ತಾಯಾಗಿ ಬೆಳಕು ಹರಿಸಿ.
ಎಲ್ಲ ದೇವತೆಗಳನು ಎಲ್ಲ ಜ್ಞಾನಂಗಳನು
ಧರ್ಮದೇವತೆಯಾಗಿ ನೀನು ಧರಿಸಿ
ಸಕಲ ಬೆಳೆಗಳ ಬಿತ್ತು ಸಕಲ ಜೀವದ ಮುತ್ತು
ನಿನ್ನಿಂದ ಬಾಳ್ಮೊದಲು ಬದುಕು ಸರಸಿ
ರಸದುಂಬಿ ಮೈಯೆಲ್ಲ ರಸಗೆರೆವೆ ಜಗವೆಲ್ಲ
ರಸವೊಡಿ ಕಾಪಿಡುವೆ ಸುಖವ ಬೆಳೆಸಿ.

ಆವ ಭೇದವ ಕಾಣ ಸಕಲ ತತ್ವದ ಜಾಣೆ
ಏಕಮೇವಾದ್ವಿತಿಯಮೆಂಬುದರಿತು
ನಿನ್ನ ನೋಡಲಿ ಬಿಡಲಿ ಕಾಪಿಡಲಿ ಹಿಂಸಿಸಲಿ
ಗಣಿಸದದ ಪಾಲ್ಗರೆವೆ ಕರೆದರೆನಿತು
ತಾಯಿ ಯೋಗಿನಿ ನೀನು ಅನಪೇಕ್ಷಯಿಂ ಪೊರೆವೆ
ನೆಲದ ಸುಧೆಯಂ ಹೀರಿ ಕೊಡುವುದರಿತು
ನಿನ್ನ ಮೈರಸದಂತೆ ನಿನ್ನ ಗುಣ ಹಸನಹುದು
ದಿವಮಾದುದು ನಡತೆ ಸುಗುಣವೆನಿತು.

ಓ ದೇವಿ ನಿನ್ನ ಮೈ ಅಮೃತಧಾರೆಯ ಸುರಿಸು
ಸುಜ್ಞಾನ ಸಂಪತ್ತು ಪೌರುಷಂಗಳ ಬೆಳಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕ ಹುಡುಕುತ್ತ
Next post ಚಿಟ್ಟೆ ಕಿಟ್ಟ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…