ಪರಮಾತ್ಮನ ತೀರ

ಕ್ಷಣ ಕ್ಷಣಕ್ಕೂ ನಿ ಬದಲಾಗದಿರು
ನಿನ್ನ ಅಂತರ ಭಾವ ಅರಿತುಕೊಳ್ಳು
ಕಷ್ಟ ಸುಖಗಳಿಗೆ ಹತಾಷೆ ನಾಗದಿರು
ಮುಕ್ಕಣ ಭಾವಗಳ ಬೆಳೆಸಿಕೊಳ್ಳು

ಮೌನವಾಗಲು ನೀ ಕಲಿಯಬೇಕು
ನಿಂದೆಗಳ ಮಾಡದೆ ಬಿಡಬೇಕು
ಸಕಲ ಜೀವಗಳಲ್ಲೂ ಸಮಾನತೆಬೇಕು
ಸಾಕ್ಷಿಯಾಗಿ ಎಲ್ಲವೂ ನೋಡಬೇಕು

ಮನಸ್ಸು ರಂಜನೆಗೆ ದಾಸನಾಗಬೇಡ
ಕ್ಷಣಿಕ ಯೋಜನೆಗಳಿಗೆ ಕಾಲಹರಣಬೇಡ
ಮೊದಲು ನಿನ್ನ ನೀ ರೂಪಿಸುಕೊಳ್ಳು
ಇನ್ನೊಬ್ಬರ ಬಾಳ್ವೆಗೆ ಲೇವಡಿ ಮಾಡಬೇಡ

ಪೂರ್‍ವ ಕರ್‍ಮದಂತೆ ನಿನಗೆಲ್ಲ ಫಲ
ಮನುಷ್ಯ ಜನ್ಮಕ್ಕೆ ಎಷ್ಟೊಂದು ಫೇರಿ
ಗೋಡೆಗೆ ತೂಗು ಹಾಕಿದ ಚಿತ್ರದಂತೆ ನೀ
ಅನುಭವಿಸಿ ಸಫಲಿಸು ಬಾಳು ಜಯಬೇರಿ

ಈಗೊಂದು ಅವಕಾಶ ನಿನಗೆ ಬಂದಿದೆ
ಇದನ್ನು ಎಚ್ಚರಿದಿ ನೀನು ಅನುಸರಿಸು
ಬಿರುಗಾಳಿ ಬರುವ ಮುಂಚೆ ದೋಣಿ ಸಾಗಲಿ
ಮಾಣಿಕ್ಯ ವಿಠಲನ ತೀರಕ್ಕೆ ಪಯಣಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೨
Next post ಓ ಮಕ್ಕಳೆ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…