ಪರಮಾತ್ಮನ ತೀರ

ಕ್ಷಣ ಕ್ಷಣಕ್ಕೂ ನಿ ಬದಲಾಗದಿರು
ನಿನ್ನ ಅಂತರ ಭಾವ ಅರಿತುಕೊಳ್ಳು
ಕಷ್ಟ ಸುಖಗಳಿಗೆ ಹತಾಷೆ ನಾಗದಿರು
ಮುಕ್ಕಣ ಭಾವಗಳ ಬೆಳೆಸಿಕೊಳ್ಳು

ಮೌನವಾಗಲು ನೀ ಕಲಿಯಬೇಕು
ನಿಂದೆಗಳ ಮಾಡದೆ ಬಿಡಬೇಕು
ಸಕಲ ಜೀವಗಳಲ್ಲೂ ಸಮಾನತೆಬೇಕು
ಸಾಕ್ಷಿಯಾಗಿ ಎಲ್ಲವೂ ನೋಡಬೇಕು

ಮನಸ್ಸು ರಂಜನೆಗೆ ದಾಸನಾಗಬೇಡ
ಕ್ಷಣಿಕ ಯೋಜನೆಗಳಿಗೆ ಕಾಲಹರಣಬೇಡ
ಮೊದಲು ನಿನ್ನ ನೀ ರೂಪಿಸುಕೊಳ್ಳು
ಇನ್ನೊಬ್ಬರ ಬಾಳ್ವೆಗೆ ಲೇವಡಿ ಮಾಡಬೇಡ

ಪೂರ್‍ವ ಕರ್‍ಮದಂತೆ ನಿನಗೆಲ್ಲ ಫಲ
ಮನುಷ್ಯ ಜನ್ಮಕ್ಕೆ ಎಷ್ಟೊಂದು ಫೇರಿ
ಗೋಡೆಗೆ ತೂಗು ಹಾಕಿದ ಚಿತ್ರದಂತೆ ನೀ
ಅನುಭವಿಸಿ ಸಫಲಿಸು ಬಾಳು ಜಯಬೇರಿ

ಈಗೊಂದು ಅವಕಾಶ ನಿನಗೆ ಬಂದಿದೆ
ಇದನ್ನು ಎಚ್ಚರಿದಿ ನೀನು ಅನುಸರಿಸು
ಬಿರುಗಾಳಿ ಬರುವ ಮುಂಚೆ ದೋಣಿ ಸಾಗಲಿ
ಮಾಣಿಕ್ಯ ವಿಠಲನ ತೀರಕ್ಕೆ ಪಯಣಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೨
Next post ಓ ಮಕ್ಕಳೆ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…