ಪರಮಾತ್ಮನ ತೀರ

ಕ್ಷಣ ಕ್ಷಣಕ್ಕೂ ನಿ ಬದಲಾಗದಿರು
ನಿನ್ನ ಅಂತರ ಭಾವ ಅರಿತುಕೊಳ್ಳು
ಕಷ್ಟ ಸುಖಗಳಿಗೆ ಹತಾಷೆ ನಾಗದಿರು
ಮುಕ್ಕಣ ಭಾವಗಳ ಬೆಳೆಸಿಕೊಳ್ಳು

ಮೌನವಾಗಲು ನೀ ಕಲಿಯಬೇಕು
ನಿಂದೆಗಳ ಮಾಡದೆ ಬಿಡಬೇಕು
ಸಕಲ ಜೀವಗಳಲ್ಲೂ ಸಮಾನತೆಬೇಕು
ಸಾಕ್ಷಿಯಾಗಿ ಎಲ್ಲವೂ ನೋಡಬೇಕು

ಮನಸ್ಸು ರಂಜನೆಗೆ ದಾಸನಾಗಬೇಡ
ಕ್ಷಣಿಕ ಯೋಜನೆಗಳಿಗೆ ಕಾಲಹರಣಬೇಡ
ಮೊದಲು ನಿನ್ನ ನೀ ರೂಪಿಸುಕೊಳ್ಳು
ಇನ್ನೊಬ್ಬರ ಬಾಳ್ವೆಗೆ ಲೇವಡಿ ಮಾಡಬೇಡ

ಪೂರ್‍ವ ಕರ್‍ಮದಂತೆ ನಿನಗೆಲ್ಲ ಫಲ
ಮನುಷ್ಯ ಜನ್ಮಕ್ಕೆ ಎಷ್ಟೊಂದು ಫೇರಿ
ಗೋಡೆಗೆ ತೂಗು ಹಾಕಿದ ಚಿತ್ರದಂತೆ ನೀ
ಅನುಭವಿಸಿ ಸಫಲಿಸು ಬಾಳು ಜಯಬೇರಿ

ಈಗೊಂದು ಅವಕಾಶ ನಿನಗೆ ಬಂದಿದೆ
ಇದನ್ನು ಎಚ್ಚರಿದಿ ನೀನು ಅನುಸರಿಸು
ಬಿರುಗಾಳಿ ಬರುವ ಮುಂಚೆ ದೋಣಿ ಸಾಗಲಿ
ಮಾಣಿಕ್ಯ ವಿಠಲನ ತೀರಕ್ಕೆ ಪಯಣಿಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೨
Next post ಓ ಮಕ್ಕಳೆ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys