ಈ ಜೀವಂತ ನೆಲದ ಮೇಲೆ

ಅಲ್ಲಿ ಗಾಢ ವಾಸನೆಯ
ಸತ್ತ ಒಣಕಲು ಮೀನು
ಕತ್ತರಿಸಿದ ಹೊಗೆಸೊಪ್ಪಿನ
ಮುರುಕಲು ತುಂಡು
ಸುಟ್ಟ ಸುಣ್ಣದ ಕಲ್ಲು
ತುಂಡರಿಸಿ ಬಿದ್ದ
ಒಣ ಅಡಿಕೆ ಚೂರು
ಗರಿಗುಡುತಿರುವ
ಒಣ ಮೆಣಸು
ಜಜ್ಜಿ ಬೀಜ ಬೇರ್ಪಡಿಸಿದ
ಹುಣಸೆ
ಬಿಕರಿಗೆ ಬಿದ್ದಿವೆ ಸತ್ತು
ಈ ಜೀವಂತ ನೆಲದ ಮೇಲೆ


ಇದರೊಂದಿಗೇ ಸದ್ದಿಲ್ಲದೇ
ಅಲ್ಲಿ ಈಗಷ್ಟೇ
ಹಿಡಿದು ತಂದ
ಮೀನಿನ ಜೀವದ ಜಿಗಿತ
ಆಗಷ್ಟೇ ಕಿತ್ತು ತಂದ
ಹಸಿ ಹಸಿ ಸೊಪ್ಪಿನ ಉಸಿರಾಟ
ಮನೆಯಿಂದಲೇ ಮೊಳಕೆಯೊಡೆಸಿ
ತಂದ ಕಾಳುಗಳ ಮೊಳೆತ
ಕಟ್ಟಿಟ್ಟ ಮಾಲೆಯ ಮೊಗ್ಗು
ಅಂಕೆಯಿಲ್ಲದೇ ಅರಳುತ್ತಾ…..


ನೀರಸ ಕೊಳುವ ಕೊಡುವ
ವ್ಯವಹಾರದ ಮಧ್ಯೆಯೂ
ಮೌನದಲಿ ನಡೆದೇ ಇದೆ
ಜೀವ ವ್ಯಾಪಾರ.


ಅವನಿ,
ಪಲ್ಲವಿಸುತ್ತಲೇ ಇದ್ದಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗತೀಕರಣ ಮತ್ತು ಸಿನಿಮಾ
Next post ಕಲಾ-ಮಹಿ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys