ಈ ಜೀವಂತ ನೆಲದ ಮೇಲೆ

ಅಲ್ಲಿ ಗಾಢ ವಾಸನೆಯ
ಸತ್ತ ಒಣಕಲು ಮೀನು
ಕತ್ತರಿಸಿದ ಹೊಗೆಸೊಪ್ಪಿನ
ಮುರುಕಲು ತುಂಡು
ಸುಟ್ಟ ಸುಣ್ಣದ ಕಲ್ಲು
ತುಂಡರಿಸಿ ಬಿದ್ದ
ಒಣ ಅಡಿಕೆ ಚೂರು
ಗರಿಗುಡುತಿರುವ
ಒಣ ಮೆಣಸು
ಜಜ್ಜಿ ಬೀಜ ಬೇರ್ಪಡಿಸಿದ
ಹುಣಸೆ
ಬಿಕರಿಗೆ ಬಿದ್ದಿವೆ ಸತ್ತು
ಈ ಜೀವಂತ ನೆಲದ ಮೇಲೆ


ಇದರೊಂದಿಗೇ ಸದ್ದಿಲ್ಲದೇ
ಅಲ್ಲಿ ಈಗಷ್ಟೇ
ಹಿಡಿದು ತಂದ
ಮೀನಿನ ಜೀವದ ಜಿಗಿತ
ಆಗಷ್ಟೇ ಕಿತ್ತು ತಂದ
ಹಸಿ ಹಸಿ ಸೊಪ್ಪಿನ ಉಸಿರಾಟ
ಮನೆಯಿಂದಲೇ ಮೊಳಕೆಯೊಡೆಸಿ
ತಂದ ಕಾಳುಗಳ ಮೊಳೆತ
ಕಟ್ಟಿಟ್ಟ ಮಾಲೆಯ ಮೊಗ್ಗು
ಅಂಕೆಯಿಲ್ಲದೇ ಅರಳುತ್ತಾ…..


ನೀರಸ ಕೊಳುವ ಕೊಡುವ
ವ್ಯವಹಾರದ ಮಧ್ಯೆಯೂ
ಮೌನದಲಿ ನಡೆದೇ ಇದೆ
ಜೀವ ವ್ಯಾಪಾರ.


ಅವನಿ,
ಪಲ್ಲವಿಸುತ್ತಲೇ ಇದ್ದಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಗತೀಕರಣ ಮತ್ತು ಸಿನಿಮಾ
Next post ಕಲಾ-ಮಹಿ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…