ನಾಗರೀಕತೆ

ಎಲ್ಲಿ ಹೋಗಿವೆ ರೀತಿ ನೀತಿಗಳು
ಎಲ್ಲಿ ಹೋಗಿವೆ ಮೌಲ್ಯಗಳು?
ಎಲ್ಲಿ ಹೋಗಿದೆ ಸೌಜನ್ಯ
ಮಾನವೀಯತೆಯ ಮೊಳಗುವ ಪಾಂಚಜನ್ಯ?

ಹೆತ್ತವರಿಗಿಲ್ಲ ಮಕ್ಕಳು
ಗುರುಗಳಿಗಿಲ್ಲ ಶಿಷ್ಯರು
ಒಬ್ಬರಿಗಿಲ್ಲ ಇನ್ನೊಬ್ಬರು
ಆಗುತ್ತಿದ್ದಾರೆ ಸ್ವಾರ್ಥಿಗಳು
ಹೃದಯವಿಲ್ಲದ ಮಾನವರು.

ಮಕ್ಕಳಿಗಿಲ್ಲ ಹೆತ್ತವರು
ತುಂಬಿಹೋಗಿವೆ ಅನಾಥಾಶ್ರಮಗಳು!
ಹಿರಿಯರಿಗಿಲ್ಲ ಕಿರಿಯರು
ಆಶ್ರಯವಾಗಿವೆ ವೃದ್ಧಾಶ್ರಮಗಳು
ನಾಗರೀಕತೆಯ ಸಂಕೇತಗಳು!

ಕಳೆದುಹೋಗಿವೆ ರೀತಿನೀತಿಗಳು
ಕಾಣೆಯಾಗಿದೆ ಮಾನವೀಯತೆ
ಸೌಜನ್ಯತೆಯ ಮೊಳಗದು ಪಾಂಚಜನ್ಯ
ಇದೇ ಏನು ಆಧುನಿಕತೆ,
ಬೆಳೆಯುತ್ತಿರುವ ನಾಗರೀಕತೆ?

ಜಗತ್ತು ಹತ್ತಿರವಾದಂತೆಲ್ಲ
ಆಗಬೇಕೇನು ಮನಸ್ಸುಗಳು ದೂರ ದೂರ?
ಆಧುನಿಕತೆಯ ಮೈಗೂಡಿಸಿಕೊಂಡಂತೆಲ್ಲ
ಸಾಯಿಸಬೇಕೇ ನೆಚ್ಚಿಕೊಂಡಿದ್ದ ಮೌಲ್ಯಗಳ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ
Next post ವ್ಯತ್ಯಾಸ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

cheap jordans|wholesale air max|wholesale jordans|wholesale jewelry|wholesale jerseys