Home / ಕವನ / ಕವಿತೆ / ಅಂವ ಬರುವ ಹೊತ್ತು

ಅಂವ ಬರುವ ಹೊತ್ತು

ಈ ಸಂಜೆಯ ಕೌನೆರಳು, ಬಾಗಿಲ ಬಳಿ
ಅವನ ಕಾಲ ಸಪ್ಪಳ, ದೇವರ ಮುಂದಿನ
ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ,
ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ,
ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ
ಹರಡಿ, ಅಂವ ಬಂದ ಹೊತ್ತು, ಅವಳ ಕಣ್ಣುಗಳಲಿ
ನೀರ ಹನಿಗಳು ತುಂಬಿದ ಕತ್ತಲು.

ಕೊಟ್ಟಿಗೆಯ ತುಂಬ ಕರುಗಳು ಮೊಲೆಗಳಿಗೆ
ಬಾಯಿ ಇಟ್ಟಿವೆ. ಮೂಲೆಯಲಿ ರಾತ್ರಿ ಗಂಜಿ
ಬೇಯುತ್ತಿದೆ. ಹಿತ್ತಲತುಂಬ ಪಾರಿಜಾತ ಗಂಧ.
ಅಡುಗೆ ಮನೆಯಿಂದ ನೀಲಿ ಹೊಗೆ ಆಕಾಶಕ್ಕೇರಿ
ತೊಟ್ಟಿಲಲಿ ಮಲಗಿದ ಕಂದ ಕಣ್ಗಳ ತುಂಬ
ಚಿಕ್ಕಿಗಳು ತೇಲಿ ಅವಳ ಎದೆತುಂಬ ಲಾಲಿಹಾಡು,
ಅಂವ ಬಂದ ಹೊತ್ತು ಪರಿಮಳ ತುಂಬಿದ ಮನೆ.

ಅಂವ ಬಾಗಿಲಿಗೆ ಬಂದ ಹೊತ್ತು ಹಗಲ
ಆಯಾಸವೆಲ್ಲಾ ಕರಗಿ, ಕೈಕಾಲುಗಳ ತುಂಬ ಹರುಷ
ಹರಡಿ ಹಾಸಿದ ಅಂಗಳದಲಿ ಹಸಿರು ಹುಲ್ಲಿನ ಗರಿ,
ಯಾವ ಭವಕೆ ಯಾರೋ ಆಲಾಪನೆ ಜಾರಿ,

ಕತ್ತಲೆಯ ಮೂಲೆಯಲ್ಲೊಂದು ಬೆಳಕಿನ ಕಂದೀಲು,
ಎಲ್ಲರೊಂದಿಗೆ ಹರಿದು ಹಂಚಿದ ಶಾಂತಿ ಪ್ರಭೆ,
ದೇವರು ನಮ್ಮಿಂದ ದೂರವಿಲ್ಲ. ಇಲ್ಲೇ ಬಾಗಿಲಲ್ಲಿ
ನಿಂತಿರುವನು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...