ಅಂವ ಬರುವ ಹೊತ್ತು

ಈ ಸಂಜೆಯ ಕೌನೆರಳು, ಬಾಗಿಲ ಬಳಿ
ಅವನ ಕಾಲ ಸಪ್ಪಳ, ದೇವರ ಮುಂದಿನ
ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ,
ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ,
ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ
ಹರಡಿ, ಅಂವ ಬಂದ ಹೊತ್ತು, ಅವಳ ಕಣ್ಣುಗಳಲಿ
ನೀರ ಹನಿಗಳು ತುಂಬಿದ ಕತ್ತಲು.

ಕೊಟ್ಟಿಗೆಯ ತುಂಬ ಕರುಗಳು ಮೊಲೆಗಳಿಗೆ
ಬಾಯಿ ಇಟ್ಟಿವೆ. ಮೂಲೆಯಲಿ ರಾತ್ರಿ ಗಂಜಿ
ಬೇಯುತ್ತಿದೆ. ಹಿತ್ತಲತುಂಬ ಪಾರಿಜಾತ ಗಂಧ.
ಅಡುಗೆ ಮನೆಯಿಂದ ನೀಲಿ ಹೊಗೆ ಆಕಾಶಕ್ಕೇರಿ
ತೊಟ್ಟಿಲಲಿ ಮಲಗಿದ ಕಂದ ಕಣ್ಗಳ ತುಂಬ
ಚಿಕ್ಕಿಗಳು ತೇಲಿ ಅವಳ ಎದೆತುಂಬ ಲಾಲಿಹಾಡು,
ಅಂವ ಬಂದ ಹೊತ್ತು ಪರಿಮಳ ತುಂಬಿದ ಮನೆ.

ಅಂವ ಬಾಗಿಲಿಗೆ ಬಂದ ಹೊತ್ತು ಹಗಲ
ಆಯಾಸವೆಲ್ಲಾ ಕರಗಿ, ಕೈಕಾಲುಗಳ ತುಂಬ ಹರುಷ
ಹರಡಿ ಹಾಸಿದ ಅಂಗಳದಲಿ ಹಸಿರು ಹುಲ್ಲಿನ ಗರಿ,
ಯಾವ ಭವಕೆ ಯಾರೋ ಆಲಾಪನೆ ಜಾರಿ,

ಕತ್ತಲೆಯ ಮೂಲೆಯಲ್ಲೊಂದು ಬೆಳಕಿನ ಕಂದೀಲು,
ಎಲ್ಲರೊಂದಿಗೆ ಹರಿದು ಹಂಚಿದ ಶಾಂತಿ ಪ್ರಭೆ,
ದೇವರು ನಮ್ಮಿಂದ ದೂರವಿಲ್ಲ. ಇಲ್ಲೇ ಬಾಗಿಲಲ್ಲಿ
ನಿಂತಿರುವನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನಗೆ ವಂದನೆ
Next post ಬಾರಕೋಲು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys