Home / ಕವನ / ಕವಿತೆ / ಇನ್ನು… ರಾಧೆ ಇಲ್ಲ…

ಇನ್ನು… ರಾಧೆ ಇಲ್ಲ…

ನಾನು ರಾಧೆಯಲ್ಲ
ನೀನು ಕೃಷ್ಣನಲ್ಲ
ರಾಧೆಯಂಥ ರಾಧೆ ನಾನು
ವಿವಶಳಾದೆನಲ್ಲ ಬೇರೆ ಏನು ಇಲ್ಲ!

ಕೊಳಲ ನುಡಿಸಿ ನೀನು
ನನ್ನ ಕರೆದೆಯಲ್ಲ
ನವಿಲಿನಂತೆ ಒಲವು
ಗರಿಯ ಬಿಚ್ಚಿತ್ತಲ್ಲ
ಮುಗಿಲಿನಂತೆ ನಿಂದೆ
ಮಿಂಚು ನೀನು ತಂದೆ
ವಿವಶಳಾದೆನಲ್ಲ ಬೇರೆ ಏನು ಇಲ್ಲ!

ದೇವರಂತೆ ನೀನು
ನಾನು ನಂಬಲಿಲ್ಲ
ದೇವರಂತೆ ನೀನು
ನನಗೆ ಕಾಣಲಿಲ್ಲ
ಪ್ರೀತಿಯಿಂದ ಕರೆದೆ
ಭೀತಿ ತೊರೆದು ಬೆರೆತೆ
ವಿವಶಳಾದೆನಲ್ಲ ಬೇರೆ ಏನು ಇಲ್ಲ!

ಯಮುನೆಯಲ್ಲಿ ನೀನು
ಕಾದು ಕೂತೆಯಲ್ಲ
ತುಂಗೆಯಲ್ಲಿ ನಾನು
ಹೇಳಿಕೊಂಡೆ ಎಲ್ಲ
ತುಳಸಿಮಾಲೆಯೊಂದು ತೇಲಿ ಬಂತು ನೋಡು
ಎದೆಯು ತುಂಬಿ ಬಂದು ಉಕ್ಕಿತೊಂದು ಹಾಡು
ವಿವಶಳಾದೆನಲ್ಲ ಬೇರೆ ಏನು ಇಲ್ಲ!

ನೀನು ಯಾರು ಎಂದು
ನಾನು ಕೇಳಲಿಲ್ಲ
ನಾನು ಯಾರು ಎಂದು
ನೀನೂ ಹೇಳಲಿಲ್ಲ
ನೀನು ಯಾರು ಎಂದು
ತಿಳಿದೂ ತಿಳಿಯಲಿಲ್ಲ
ನಾನು ಯಾರು ಎಂದು
ಹೊಳೆದೂ ಹೊಳೆಯಲಿಲ್ಲ
ಕೃಷ್ಣ ನೀನೆ ಎಲ್ಲ
ಇನ್ನು ರಾಧೆ ಇಲ್ಲ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...