ನಿರಾಶಿತೆ

ಕರ್ತವ್ಯದ ನೆಪದಲ್ಲಿ
ಅತ್ಯಾಚಾರ ಮಾಡುವ ಹೆತ್ತವರು
ಕತ್ತೆಯೊಂದಕ್ಕೆ ಗಂಟು ಹಾಕಿದರೂ
ಏನು ಮಾಡುವುದು ಹಣೆ ಬರಹವೆಂಬ
ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ
ನಿಷ್ಠೆ, ಒಳ್ಳೆತನದ ಸೋಗು ಹಾಕಿ
ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ
ಪ್ರೇತ ಬದುಕಿಗೆ ತಲೆ ಕೊಡದೆ
ಹಿತ ಶತ್ರುಗಳ ಪಂಜರದಿಂದ ಪಾರಾಗಿ ಒಲುಮೆಯ ಬದುಕನರಸಿ
ಹೊರ ಹೊರಟೆ.

ಬೆಳದಿಂಗಳಲ್ಲಿ ಉಂಡು
ಸವಿಯಾದ ತಾಂಬೂಲ ತಿಂದು
ಕೆಂಪು ತುಟಿಗಳ ಸ್ಪರ್ಧೆ ನಡೆಸಿದೆವು ಸುಖದ ಬಿಸಿಯನ್ನು ಸವಿದೆವು :
ಇರುಳು ಹಗಲುಗಳ ಉದ್ದ ಗಾತ್ರಗಳನಳೆದೆವು

ಕುಣಿ ಕುಣಿಯುತ್ತ ಬಂತು ಬೇಸಿಗೆ
ನೀರು ನೆರಳನ್ನು ಹಾರೈಸಿ
ಅತ್ತಿತ್ತ ನೋಡಿದರೆ
ಊರು ತುಂಬಾ ಬರಿ ಜಾಲಿ, ಬ್ಯಾಲ
ಬೇಲಿಯೊಳಗೆ ಭದ್ರವಾಗಿರುವ ತೋಟ ತುಡಿಕೆಗಳು
ಮುಕ್ತ ಆಶ್ರಯ ತಾಣ ಒಂದೂ ಕಂಡು ಬರಲಿಲ್ಲ.

ಕೆಟ್ಟ ಕೆಟ್ಟ ಕನಸುಗಳು ಬೀಳಲಾರಂಭಿಸಿ
ಭಯವಾಗಿ ನಡುಕ ಗದಗುಡಿಸ ತೊಡಗಿತು.
ಪಾಪ ಪ್ರಜ್ಞೆಯ ಭೂತ ನೃತ್ಯವು ಸಾಗಿ
ಬಾರಿ ಬಾರಿಗೂ ತಪ್ಪಾಯಿತೆನಿಸಿತು
ಮನಸು ‘ತಬ್ಬಲಿ’ ‘ತಬ್ಬಲಿ’ ಯೆಂದು ಚೀರ ತೊಡಗಿತು.

ಅನ್ನ ವಿಷವಾಯಿತು
ಬದುಕು ನಿಸ್ಸಾರವಾಯಿತು
ಅಂಗಿದ್ದರೇನು? ಇಂಗಿದ್ದರೇನು?
ಹ್ಯಾಗಿದ್ದರೇನು?
ಕರೆವವರೆ? ಕಳುವವರೆ?
ನೋಡುವವರೆ? ನಲಿವವರೆ?
ನಮಗೆ ಯಾರಿದ್ದಾರೆ?
‘ಇದೊಂದು ಜೀವನಾನ?’ ಎನ್ನಿಸಿ
ಆಸೆಯೇ ಇಮರಿ ಹೋಯಿತು.

ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ
ಬನ್ನ ಬವಣೆ ಅಂತಗೊಣಗುವಂತಿಲ್ಲ
ಚೆನ್ನಿಗ ನನ್ನವನಿಗೂ ಹೀಗೆ ಅನ್ನಿಸುತ್ತಿರಬೇಕು ಎಲ್ಲಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣೆಯಾಗಿದೆ ಬಾಲ್ಯ
Next post ಕಣ್ಮರೆ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…