ನಿರಾಶಿತೆ

ಕರ್ತವ್ಯದ ನೆಪದಲ್ಲಿ
ಅತ್ಯಾಚಾರ ಮಾಡುವ ಹೆತ್ತವರು
ಕತ್ತೆಯೊಂದಕ್ಕೆ ಗಂಟು ಹಾಕಿದರೂ
ಏನು ಮಾಡುವುದು ಹಣೆ ಬರಹವೆಂಬ
ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ
ನಿಷ್ಠೆ, ಒಳ್ಳೆತನದ ಸೋಗು ಹಾಕಿ
ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ
ಪ್ರೇತ ಬದುಕಿಗೆ ತಲೆ ಕೊಡದೆ
ಹಿತ ಶತ್ರುಗಳ ಪಂಜರದಿಂದ ಪಾರಾಗಿ ಒಲುಮೆಯ ಬದುಕನರಸಿ
ಹೊರ ಹೊರಟೆ.

ಬೆಳದಿಂಗಳಲ್ಲಿ ಉಂಡು
ಸವಿಯಾದ ತಾಂಬೂಲ ತಿಂದು
ಕೆಂಪು ತುಟಿಗಳ ಸ್ಪರ್ಧೆ ನಡೆಸಿದೆವು ಸುಖದ ಬಿಸಿಯನ್ನು ಸವಿದೆವು :
ಇರುಳು ಹಗಲುಗಳ ಉದ್ದ ಗಾತ್ರಗಳನಳೆದೆವು

ಕುಣಿ ಕುಣಿಯುತ್ತ ಬಂತು ಬೇಸಿಗೆ
ನೀರು ನೆರಳನ್ನು ಹಾರೈಸಿ
ಅತ್ತಿತ್ತ ನೋಡಿದರೆ
ಊರು ತುಂಬಾ ಬರಿ ಜಾಲಿ, ಬ್ಯಾಲ
ಬೇಲಿಯೊಳಗೆ ಭದ್ರವಾಗಿರುವ ತೋಟ ತುಡಿಕೆಗಳು
ಮುಕ್ತ ಆಶ್ರಯ ತಾಣ ಒಂದೂ ಕಂಡು ಬರಲಿಲ್ಲ.

ಕೆಟ್ಟ ಕೆಟ್ಟ ಕನಸುಗಳು ಬೀಳಲಾರಂಭಿಸಿ
ಭಯವಾಗಿ ನಡುಕ ಗದಗುಡಿಸ ತೊಡಗಿತು.
ಪಾಪ ಪ್ರಜ್ಞೆಯ ಭೂತ ನೃತ್ಯವು ಸಾಗಿ
ಬಾರಿ ಬಾರಿಗೂ ತಪ್ಪಾಯಿತೆನಿಸಿತು
ಮನಸು ‘ತಬ್ಬಲಿ’ ‘ತಬ್ಬಲಿ’ ಯೆಂದು ಚೀರ ತೊಡಗಿತು.

ಅನ್ನ ವಿಷವಾಯಿತು
ಬದುಕು ನಿಸ್ಸಾರವಾಯಿತು
ಅಂಗಿದ್ದರೇನು? ಇಂಗಿದ್ದರೇನು?
ಹ್ಯಾಗಿದ್ದರೇನು?
ಕರೆವವರೆ? ಕಳುವವರೆ?
ನೋಡುವವರೆ? ನಲಿವವರೆ?
ನಮಗೆ ಯಾರಿದ್ದಾರೆ?
‘ಇದೊಂದು ಜೀವನಾನ?’ ಎನ್ನಿಸಿ
ಆಸೆಯೇ ಇಮರಿ ಹೋಯಿತು.

ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ
ಬನ್ನ ಬವಣೆ ಅಂತಗೊಣಗುವಂತಿಲ್ಲ
ಚೆನ್ನಿಗ ನನ್ನವನಿಗೂ ಹೀಗೆ ಅನ್ನಿಸುತ್ತಿರಬೇಕು ಎಲ್ಲಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಣೆಯಾಗಿದೆ ಬಾಲ್ಯ
Next post ಕಣ್ಮರೆ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys