Home / ಕವನ / ಕವಿತೆ / ನಿರಾಶಿತೆ

ನಿರಾಶಿತೆ

ಕರ್ತವ್ಯದ ನೆಪದಲ್ಲಿ
ಅತ್ಯಾಚಾರ ಮಾಡುವ ಹೆತ್ತವರು
ಕತ್ತೆಯೊಂದಕ್ಕೆ ಗಂಟು ಹಾಕಿದರೂ
ಏನು ಮಾಡುವುದು ಹಣೆ ಬರಹವೆಂಬ
ತಲೆ ಬುಡವೇ ಇಲ್ಲದ ಬುದ್ಧಿಗೇಡಿ ತತ್ವಕ್ಕೆ ಶರಣಾಗದೆ
ನಿಷ್ಠೆ, ಒಳ್ಳೆತನದ ಸೋಗು ಹಾಕಿ
ಬೆಂಕಿ ಬಿದ್ದ ಹತ್ತಿಯಂತೆ ಹಾಳಾಗಲೊಲ್ಲದೆ
ಪ್ರೇತ ಬದುಕಿಗೆ ತಲೆ ಕೊಡದೆ
ಹಿತ ಶತ್ರುಗಳ ಪಂಜರದಿಂದ ಪಾರಾಗಿ ಒಲುಮೆಯ ಬದುಕನರಸಿ
ಹೊರ ಹೊರಟೆ.

ಬೆಳದಿಂಗಳಲ್ಲಿ ಉಂಡು
ಸವಿಯಾದ ತಾಂಬೂಲ ತಿಂದು
ಕೆಂಪು ತುಟಿಗಳ ಸ್ಪರ್ಧೆ ನಡೆಸಿದೆವು ಸುಖದ ಬಿಸಿಯನ್ನು ಸವಿದೆವು :
ಇರುಳು ಹಗಲುಗಳ ಉದ್ದ ಗಾತ್ರಗಳನಳೆದೆವು

ಕುಣಿ ಕುಣಿಯುತ್ತ ಬಂತು ಬೇಸಿಗೆ
ನೀರು ನೆರಳನ್ನು ಹಾರೈಸಿ
ಅತ್ತಿತ್ತ ನೋಡಿದರೆ
ಊರು ತುಂಬಾ ಬರಿ ಜಾಲಿ, ಬ್ಯಾಲ
ಬೇಲಿಯೊಳಗೆ ಭದ್ರವಾಗಿರುವ ತೋಟ ತುಡಿಕೆಗಳು
ಮುಕ್ತ ಆಶ್ರಯ ತಾಣ ಒಂದೂ ಕಂಡು ಬರಲಿಲ್ಲ.

ಕೆಟ್ಟ ಕೆಟ್ಟ ಕನಸುಗಳು ಬೀಳಲಾರಂಭಿಸಿ
ಭಯವಾಗಿ ನಡುಕ ಗದಗುಡಿಸ ತೊಡಗಿತು.
ಪಾಪ ಪ್ರಜ್ಞೆಯ ಭೂತ ನೃತ್ಯವು ಸಾಗಿ
ಬಾರಿ ಬಾರಿಗೂ ತಪ್ಪಾಯಿತೆನಿಸಿತು
ಮನಸು ‘ತಬ್ಬಲಿ’ ‘ತಬ್ಬಲಿ’ ಯೆಂದು ಚೀರ ತೊಡಗಿತು.

ಅನ್ನ ವಿಷವಾಯಿತು
ಬದುಕು ನಿಸ್ಸಾರವಾಯಿತು
ಅಂಗಿದ್ದರೇನು? ಇಂಗಿದ್ದರೇನು?
ಹ್ಯಾಗಿದ್ದರೇನು?
ಕರೆವವರೆ? ಕಳುವವರೆ?
ನೋಡುವವರೆ? ನಲಿವವರೆ?
ನಮಗೆ ಯಾರಿದ್ದಾರೆ?
‘ಇದೊಂದು ಜೀವನಾನ?’ ಎನ್ನಿಸಿ
ಆಸೆಯೇ ಇಮರಿ ಹೋಯಿತು.

ಅನ್ನೋ ಹಾಗಿಲ್ಲ ಅನುಭವಿಸೋ ಹಾಗಿಲ್ಲ
ಬನ್ನ ಬವಣೆ ಅಂತಗೊಣಗುವಂತಿಲ್ಲ
ಚೆನ್ನಿಗ ನನ್ನವನಿಗೂ ಹೀಗೆ ಅನ್ನಿಸುತ್ತಿರಬೇಕು ಎಲ್ಲಾ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...