ನೇಹದಿ ಕೊನರುವುದು ಕೊರಡು

ಮಿತ್ರನಾಗಲಿ ಶತ್ರುವಾಗಲಿ
ಗುರುತಿನವನಾಗಲಿ, ಗುರುತಿಲ್ಲದವನಾಗಲಿ
ದೊಡ್ಡವನೆಂದು ತಿಳಿದವನ
ಬಡವನೆಂದು ಒಪ್ಪದವನ
ಮೇಲೆ
ಯಾವದೇ ಕಾರಣದಿಂದ
ಅಪಯಶದ ಧೂಳು ಹಾರಿದರೆ
ನೀನು
ಕಟುವಚನದಿಂದ ಅವನನ್ನು
ದೂರುವ ತಪ್ಪು ಮಾಡದಿರು
ಇವನು ಹಾಗೇ ಇದ್ದನೆಂದು
ನೂರಾರು ಪುರಾವೆಗಳ ಹಿಡಿದು
ಸಾಧಿಸದಿರು
ಅವನು ನಿಜವಾಗಿಯೂ ಎಡವಿ
ತಪ್ಪುದಾರಿ ಹಿಡಿದರೆ
ಕಟು ಮಾತಿನಿಂದಲ್ಲ
ಸ್ನೇಹದಿಂದ ಮಾತಾಡಿ ನೋಡು
ದೋಷ ಎಷ್ಟು ಆಳವಾದರು
ಸ್ನೇಹ ಅಲ್ಲಿ ಇಳಿಯುವುದು
ಲೋಕ ಎಷ್ಟು ಭ್ರಷ್ಟವಾದರು
ಸ್ನೇಹ ಎಲ್ಲರಿಗೆ ಹಿಡಿಸುವುದು
ಬಿದ್ದವರನ್ನು ಎಬ್ಬಿಸುವಷ್ಟು
ಪ್ರಿಯ ಕಾರ್ಯವಿಲ್ಲ
ಎತ್ತಿ ಸ್ನೇಹ ಹಂಚದ
ಕೀಳ್ತನದಷ್ಟು ಪತನ ಬೇರೆ ಇಲ್ಲ
ಸ್ನೇಹ ದೃಷ್ಟಿಯಿಂದ
ನೋಡಿದರೆ,
ಕಣ್ಣಿನ ದುನ್ಸಾಹಸ
ಮರೆಯಾಗುವುದು
ಪ್ರತಿಯೊಂದು ದುಷ್ಟತನ
ಕಂಬನಿಯಾಗಿ
ಕಪೋಲದಿಂದ ಹರಿಯುವುದು
ಆಣೆಯ ಮೇಲೆ ನಿನಗೆ
ಹೆಚ್ಚು ಮೋಹ
ಆಣೆ ಹಾಕುವ ಚಟ ಒಳಿತಲ್ಲ
ಆಣೆ ಜೊತೆಗೆ ತೊಂದರೆಯನ್ನು ತರುವುದು
ನಿನ್ನ ಮೇಲೆ ಹಾವಿಯಾಗುವುದು
ಹೊರಿಸುವೆನು ಆಣೆ ನಿನ್ನ ಮೇಲೆ ನಾನು
ಇಳಿಸಿ ಹಾಡಿ ಹರಡು
ಸ್ನೇಹದಿ ನೀನು
ಆಣೆ ನಿನಗೆ ಆ ಕರುಣಾಕರನ
ಬೆತ್ತಲೆಯಾಗಿ ಸ್ನೇಹದ
ಭಿಕ್ಷೆ ಬೇಡುವ ಭಿಕ್ಷುಕನ
ಕಟುವಾಗಿ ಒರೆಯದೆ, ಹೊರಡು
ಅಂತರ ಮನದ ನೇಹದಿ ಹೇಳು
ಕೊನರುವುದು ಕೊರಡು
*****
ಮೂಲ: ಭವಾನಿಪ್ರಸಾದ ಮಿಶ್ರ
(ಹಿಂದಿ ಅನುವಾದ ವಿಭಾಗ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ವರುಷ
Next post ದುಡಿಮೆಗೊಲಿಯದ ಜ್ಞಾನ ನಿಧಿಯುಂಟೇ?

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…