Home / ಲೇಖನ / ಇತರೆ / ಪಲಾಯನ ಉತ್ತರವಲ್ಲ

ಪಲಾಯನ ಉತ್ತರವಲ್ಲ

ಪ್ರಿಯ ಸಖಿ,
ಇವನು ಐದು ವರ್ಷಗಳ ತನ್ನ ವಿದೇಶ ವಾಸ ಮುಗಿಸಿ ಈಗಷ್ಟೇ ತನ್ನ ಮಾತೃಭೂಮಿಗೆ ಕಾಲಿಡುತ್ತಿದ್ದಾನೆ. ಈಗ ಇವನಿಗೆ ಇಲ್ಲಿಯದೆಲ್ಲವೂ ಕೆಟ್ಟದಾಗಿ, ಅಸಹ್ಯವಾಗಿ, ಕೀಳಾಗಿ ಕಾಣುತ್ತಿದೆ.

ಗಳಿಗೆಗೊಂದು ಬಾರೀ ವಿದೇಶೀಯರ ಶುಚಿತ್ವ, ಅಲ್ಲಿನ ರಸ್ತೆಗಳು, ಅವರ ಶಿಸ್ತು, ಶ್ರೀಮಂತಿಕೆ, ವೈಭೋಗ, ಕರ್ತವ್ಯಪಾಲನೆ, ಸ್ಯಾಂಡ್ವಿಚ್, ಪಿಜ್ಜಾ……….. ಇತ್ಯಾದಿ ಇತ್ಯಾದಿ ಕುರಿತು ಭಾಷಣ ಬಿಗಿಯುತ್ತಾನೆ. ಹೌದು ಅವನು ಹೇಳುವುದೆಲ್ಲ ನಿಜವೇ ಇರಬಹುದು. ಹಾಗೇ ಇಲ್ಲಿನ ಈ ಅವ್ಯವಸ್ಥೆ ಅಶಿಸ್ತು, ಕೊಳಕು, ಭ್ರಷ್ಟತೆ, ಲಂಚಗುಳಿತನ…. ಇತ್ಯಾದಿ ಎಲ್ಲವೂ ನಿಜವೇ ಸಖಿ. ಆದರೆ ಈ ಎಲ್ಲಾ ಕೊಳಕಿನ ಬಗೆಗೆ ಮೋರೆ ಸಿಂಡರಿಸುವ ಇವನು ಮಾಡುವುದೇನು ಗೊತ್ತೇ? ಅದನ್ನು ಹೇಗೆ ಸರಿಪಡಿಸಲಿ ಎಂದು ಯೋಚಿಸುವುದಿಲ್ಲ. ದಾರಿಗಳನ್ನು ಹುಡುಕುವುದಿಲ್ಲ. ಭೂಲೋಕದ ಸ್ವರ್ಗವೆಂದು ಇವನು ನಂಬಿರುವ ವಿದೇಶಕ್ಕೆ (ಹೆಚ್ಚಿನಂಶ ಅಮೇರಿಕಾ) ಹೇಗೂ ದಾರಿ ತೆರೆದಿದೆ. ಪಕ್ಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರಿದರಾಯ್ತು. ಮೈ ಮುರಿದು ದುಡಿಸಿಕೊಂಡರೂ, ಕೈತುಂಬ ಮಿಕ್ಕುವಷ್ಟು ಹಣ ಸಿಕ್ಕುತ್ತದೆ. ಎಲ್ಲವೂ ವ್ಯವಸ್ಥಿತವಾಗಿ ತಯಾರಾಗಿ ನಿಂತಿರುವಾಗ ನಾವದನ್ನು ಅನುಭವಿಸಿದರಾಯ್ತು. ಇಲ್ಲಿನ ಈ ಎಲ್ಲಾ ಅವ್ಯವಸ್ಥೆ ನಡುವೆ ಏಕೆ ಹೆಣಗಬೇಕು? ಹಣ ಮಾಡಿಕೊಂಡು ವಾಪಸ್ ಬಂದರೂ ಆಯ್ತು. ಇಲ್ಲದಿದ್ದರೆ ಅಲ್ಲಿನದೇ ಸಿಟಿಜನ್ಶಿಪ್ ಪಡೆದು ಅಲ್ಲೇ ನೆಲೆಯೂರಿದರೂ ಆಯ್ತು. ಇಲ್ಲಿದ್ದರೂ ಅಲ್ಲಿದ್ದರೂ ಇವನಿಗೆ ಭಾರತದೊಂದಿಗಿನ ಭಾವನಾತ್ಮಕ ನಂಟು ಪೂರ್ತಿ ಕಡಿದುಕೊಂಡಂತೆಯೇ!  ಇವನು ಇಲ್ಲಿದ್ದರೂ ಮಾನಸಿಕವಾಗಿ ವಿದೇಶದಲ್ಲೇ ಇರುತ್ತಾನೆ. ಅಲ್ಲಿದ್ದು ಅವನು ಭಾರತೀಯರಂತೆ ಜೀವನ ನಡೆಸಿದರೂ ಎಂದಿಗೂ ಅಲ್ಲಿನವನಂತೂ ಆಗುವುದು ಸಾಧ್ಯವಿಲ್ಲ. ಇಲ್ಲಿನವನೂ ಆಗುವುದಿಲ್ಲವೆಂಬುದೂ ಅಷ್ಟೇ ಸತ್ಯ.

ಬಡವಳೆಂದು, ಕೊಳಕಳೆಂದು, ಬುದ್ದಿ ತಿಳಿಯದವಳೆಂದು, ವಿವೇಕವಿಲ್ಲದವಳೆಂದು ಯಾರಾದರೂ ತನ್ನ ತಾಯಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ? ಅವಳನ್ನು ಬಿಟ್ಟು ಇನ್ಯಾವುದೋ ಶ್ರೀಮಂತ, ಶುಚಿಯಾದ, ವಿವೇಕಿ ಹೆಂಗಸನ್ನು ನಮ್ಮ ಅಮ್ಮನನ್ನಾಗಿ ಮಾಡಿಕೊಳ್ಳಲು ಸಾಧ್ಯವೇ?

ಪ್ರಿಯ ಸಖಿ, ದೇಶವನ್ನುವುದು ನಮ್ಮ ತಾಯಿಯಂತೆ. ಅವಳನ್ನು ಹೇಗೆ ಬವಲಿಸಲು ಸಾಧ್ಯ? ಅದಕ್ಕೆಂದೇ ಎಲ್ಲ ಅನಿಷ್ಟಗಳ ನಡುವೆಯೂ ಅವಳನ್ನು ಪ್ರೀತಿಸಲು ಸಾಧ್ಯ. ಒಪ್ಪಿಕೊಳ್ಳಲು ಸಾಧ್ಯ. ಹಾಗೇ ಅವಳ ಎಲ್ಲ ಋಣಾತ್ಮಕ ಅಂಶಗಳಿಗೂ ಹೊಂದಿಕೊಳ್ಳುವುದು ಅಥವಾ ತಿದ್ದುವುದೂ ನಮ್ಮಿಂದಲೇ ಸಾಧ್ಯ. ಪಲಾಯನ ಇದಕ್ಕೆ ಉತ್ತರವಲ್ಲ ಅಲ್ಲವೇ?
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...