ಗೋಡೆಯ ಬರಹ

ಕುಣಿಯುತ ಬಂತೈ
ಕೆನೆಯುತ ಬಂತೈ
ಐದೂರ್ಷದ ಬಯಕೆ
ಅಪರೂಪದ ನೆನಪು
ಹಲ್ಗಿಂಜುವ ರೂಪು
ಕೈ ಒಡ್ಡಿತು ಜನಕೆ.

ಏನಬ್ಬರ ಏನುಬ್ಬರ
ಸಿಹಿ ಸ್ವರ್ಗದ ಸಾರ!
ಮೈದುಂಬಿದ ಬಾಯ್ದುಂಬಿದ
ಬೊಜ್ಜಿನ ಪರಿವಾರ.

‘ಪ್ರಜೆಯೇ ಪ್ರಭುವು
ಪ್ರಜೆಯೇ ಎಲ್ಲವು
ಇಡುವೆವು ನಾವು
ಮೂಳೆಗಳಾ ಲೆಕ್ಕ
ಕೈ ಹಿಡಿದರೆ ನೀವು
ಬಾಳಾಯಿತು ರೊಕ್ಕ’
ಎನ್ನುತ ಬಂತೈ
ಬರ್ರನೆ ಬಂತೈ
ಮಿಂಚನ ಮಾತು
ತುಂಬುತ ಬಂತೈ
ಉಕ್ಕಿನ ಚಕ್ರದ
ಕನಸಿನ ಕಾರು
ಎದೆಯನು ಮೆಟ್ಟಿ
ಹರಿಯುವ ಜೋರು.
ಉಳಿಯಿತು ಕಡಗೆ
ರಸ್ತೆಯ ಬದಿಗೆ
ಓಟಿನ ಬೇಟೆ
ಗೋಡೆಯ ಬರಹ
ಬಾಯ್ಕಟ್ಟುವ ಭ್ರಮೆ
ಭೂತದ ತರಹ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪ ಮತ್ತು ಪ್ರಾಯಶ್ಚಿತ್ತದ ಸುತ್ತ – ಎಸ್ ಟಿ. ಕೋಲೆರಿಡ್ಜ್ ನ The Rime of the Ancient Mariner
Next post ಕಾವಲಗಾರ ಕಂಭ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…