ಗೋಡೆಯ ಬರಹ

ಕುಣಿಯುತ ಬಂತೈ
ಕೆನೆಯುತ ಬಂತೈ
ಐದೂರ್ಷದ ಬಯಕೆ
ಅಪರೂಪದ ನೆನಪು
ಹಲ್ಗಿಂಜುವ ರೂಪು
ಕೈ ಒಡ್ಡಿತು ಜನಕೆ.

ಏನಬ್ಬರ ಏನುಬ್ಬರ
ಸಿಹಿ ಸ್ವರ್ಗದ ಸಾರ!
ಮೈದುಂಬಿದ ಬಾಯ್ದುಂಬಿದ
ಬೊಜ್ಜಿನ ಪರಿವಾರ.

‘ಪ್ರಜೆಯೇ ಪ್ರಭುವು
ಪ್ರಜೆಯೇ ಎಲ್ಲವು
ಇಡುವೆವು ನಾವು
ಮೂಳೆಗಳಾ ಲೆಕ್ಕ
ಕೈ ಹಿಡಿದರೆ ನೀವು
ಬಾಳಾಯಿತು ರೊಕ್ಕ’
ಎನ್ನುತ ಬಂತೈ
ಬರ್ರನೆ ಬಂತೈ
ಮಿಂಚನ ಮಾತು
ತುಂಬುತ ಬಂತೈ
ಉಕ್ಕಿನ ಚಕ್ರದ
ಕನಸಿನ ಕಾರು
ಎದೆಯನು ಮೆಟ್ಟಿ
ಹರಿಯುವ ಜೋರು.
ಉಳಿಯಿತು ಕಡಗೆ
ರಸ್ತೆಯ ಬದಿಗೆ
ಓಟಿನ ಬೇಟೆ
ಗೋಡೆಯ ಬರಹ
ಬಾಯ್ಕಟ್ಟುವ ಭ್ರಮೆ
ಭೂತದ ತರಹ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪ ಮತ್ತು ಪ್ರಾಯಶ್ಚಿತ್ತದ ಸುತ್ತ – ಎಸ್ ಟಿ. ಕೋಲೆರಿಡ್ಜ್ ನ The Rime of the Ancient Mariner
Next post ಕಾವಲಗಾರ ಕಂಭ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys