ಬಾಳಿಕೆ

ಪ್ರಿಯ ಸಖಿ,
ಸಾವು ನಿಶ್ಚಿತವೆಂದು ತಿಳಿದೂ ಮಾನವ ತನ್ನ ಬದುಕಿನ ಕೊನೆಯ ಕ್ಷಣದವರೆಗೂ ತಾನು ಶಾಶ್ವತ. ತನ್ನಿಂದಲೇ ಪ್ರಪಂಚವೆಲ್ಲಾ ಎಂದುಕೊಂಡು ಇರುತ್ತಾನೆ. ಆದರೆ ಅವನು ಸತ್ತು ಹೆಣವಾದ ನಂತರ ಏತಕ್ಕೆ ಉಪಯೋಗಕ್ಕೆ ಬರುತ್ತಾನೆ? ಕವಿ ಜರಗನಹಳ್ಳಿ ಶಿವಶಂಕರ್ ಅವರು ತಮ್ಮ ಬಾಳಿಕೆ ಎಂಬ ಹನಿಗವನದಲ್ಲಿ.
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ.
ನೂರು ವರುಷ
ಆಳಿದ ಅರಸ
ಉಳಿಯಲಿಲ್ಲ ಹೆಣವಾಗಿ
ಮೂರು ದಿವಸ
ಎನ್ನುತ್ತಾರೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಮರ ಇದ್ದರೂ ಉಪಯೋಗಕ್ಕೆ ಬರುತ್ತದೆ. ಸತ್ತರೂ ಉಪಯೋಗಕ್ಕೆ ಬರುತ್ತದೆ. ಮಾನವ ಸತ್ತ ನಂತರವಂತೂ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಆದರೆ ಬದುಕಿದ್ದಾಗಲಾದರೂ ಇತರರಿಗೆ, ಸಮಾಜಕ್ಕೆ ಉಪಯೋಗವಾಗುವಂತೆ ಬದುಕಿದರೆ ಅದಕ್ಕಿಂತಾ ಧನ್ಯತೆ ಬೇರೆಲ್ಲಿದೆ.

ಈ ಮನುಜ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಅದನ್ನು ಸಾರ್ಥಕಗೊಳಿಸುವಂತೆ ಬದುಕುವುದು ಮನುಜನ ಕರ್ತವ್ಯ. ವ್ಯಕ್ತಿಗಳು ಅಳಿದರೂ ಅವರು ಮಾಡಿದ ಕೆಲಸ ಇತಿಹಾಸದ ಪುಟಗಳಲ್ಲಿ ದಾಖಲಾಗುವುದಂತೂ ಖಂಡಿತಾ. ಹಾಗಾದರೆ ಈ ಸಾವಿನ ಕಬಂಧ ಬಾಹುಗಳಲ್ಲಿ ಸಿಲುಕದೆ ಅವಿನಾಶಿಯಾಗಿ ಉಳಿಯುವುದು ಯಾವುದು? ಕಥೆಗಾರ, ಚಿಂತಕ, ಚದುರಂಗರು ‘ಮಾನವನ ಬದುಕಿನಲ್ಲಿ ಮರಣವೇ ಅತ್ಯಂತ ಪ್ರಮುಖವಾದ ಸತ್ಯವಾದ ಸಂಗತಿ, ಉಳಿದೆಲ್ಲಾ ವಿಷಯಗಳೂ ಗೌಣ. ಈ ಸಾವಿನ ಮರುಳುಗಾಡಿನಲ್ಲಿ ಅವಿನಾಶಿಯಾಗಿ ಉಳಿಯಬಲ್ಲ ಒಂದೇ ಒಂದು ವಸ್ತುವೆಂದರೆ-ಕಲೆ’ ಎನ್ನುತ್ತಾರೆ.

ಹೌದಲ್ಲವೇ ಸಖಿ ಯಾವ ಕಲೆಗೂ ಸಾವೆಂಬುದಿಲ್ಲ. ಅವಿನಾಶಿ ಕಲೆಯ ಹೆಸರಿನೊಂದಿಗೆ, ಕಲೆಗಾರ ಸತ್ತರೂ ಜೀವಂತವಾಗುಳಿಯುತ್ತಾನೆ! ನಿಜವಾದ ಬದುಕಿನ
ಸಾರ್ಥಕತೆ ಇರುವುದೇ ಇಲ್ಲಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಲೀ ಮರೀ ಇಲೀ ಮರೀ
Next post ಮಲ್ಲಿಗೆಯ ಮೊಗ್ಗುಗಳ ರಾಸಿ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys