ಯುಗಾದಿ ಹರವು

ಹರವು ಹೆಚ್ಚಲು ಮುಗಿಲ ನೆಲದಲಿ
ಬೆಳಕು ಚಿಮ್ಮಿತು
ಕೊಸರು ಕರಗಲು ಹಸೆಯು ಹರಡಲು
ಎದೆಯ ಬನದಲಿ ತನ್ನಿಂತಾನೇ
ಚೆಲುವು ಮೂಡಿತು.

ಯುಗವು ಕಳೆಯಲು ಯುಗವು ಮರಳಲು
ಜಗದ ನಿಯಮ ಸಹಜವಾಗಲು
ವಿಳಂಬಿ ವಿಳಂಬವೆನ್ನದೇ
ದಾಪುಗಾಲು ಹಾಕಿ ಬರುತಿರೆ
ಹೇಮಲಂಬಿ ಹಳೆಯ ಬಿಂಬಿ
ದೂರ ಸರಿಯಿತು.

ಕೆಂದಳಿರಿಗೂ ಮೀಗಿ ಕೆಂದೂಳು
ಹುಡಿಯೆದ್ದು
ಜಗವು ಸುಗ್ಗಿಯ ಸೊಬಗ ಹೊದೆದು
ರಸದೌತಣ ಇಳೆಯ ಮನೆಯೊಳೆದ್ದು
ತೇಲುತೇಲುತ
ಕನಸ ಹೆಣೆಯುವ ಕಾಲ ಬಂದಿತು.

ಹೂಬಿಸಿಲು ನೃತ್ಯಗೈಯಲು
ಮಾಮರದ ಸೆರಗ ಹಿಡಿಯಲು
ದುಂಬಿ ನುಡಿಯಲು,
ಕುಕಿಲ ಉಲಿಯಲು
ರೈತ ಬವಣೆಯು ಮುಗಿದು ಹೋಗಲು
ಸುಗ್ಗಿ ಸಂಭ್ರಮ ಮುಷ್ಟಿ ಹಿಡಿದು
ಸೃಷ್ಟಿ ಮೆರೆಯಿತು.

ಬೇವು ಬೆಲ್ಲ ನೋವು ನಲಿವು
ಮೆರಗು ಚೆಲ್ಲಿತು.
ಹೊಸ ಭರವಸೆಯ ಬೆಳಕ ಸೂಡಿ.
ಎದೆಗೂ ಎದೆಗೂ ಅರಿವು ಹರಡಿ
ವೈರುಧ್ಯ ತೊರೆದು ಜ್ಞಾನ ಮೂಡಿ
ಏಕತೆಯ ಗಾನ ಹೊರಟಿತು.

ಶಿಶಿರ ಋತುವು ಬೇಲಿದಾಟಲು
ವಸಂತ ಗಾನದ ಮಧುರ ಮೈತ್ರಿಯು
ಚೈತ್ರ ಸೊಬಗು ಬಲೆಯ ಬೀಸಲು
ಬಿರಿದ ಮೊಗ್ಗಿನ ಘಮವು ಪಸರಿಸೆ
ಹಾರೋ ಹೆಜ್ಜೆಗೂ ಗೆಜ್ಜೆ ಕಟ್ಟಿತು.

ಜಗವ ಹರಸಲು,
ರಮೆಯ ರಮಿಸಲು
ಬವಣೆ ಭಾವ ಕಳೆದು ಹೋಗಲು
ತಳಿರುತೋರಣ ಮುತ್ತಿನಾರತಿ
ಸುಮದರಾಶಿಯ ಹೊತ್ತು ತಂದಿತು
ವಿಳಂಬವೆನ್ನದೇವಿಳಂಬಿಯೊಡನೆ
ಇಳೆಗೆ ಹಬ್ಬವು ಹಬ್ಬಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೮
Next post ಮುಸ್ಸಂಜೆಯ ಮಿಂಚು – ೧೬

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…