Home / ಕವನ / ಕವಿತೆ / ಯುಗಾದಿ ಹರವು

ಯುಗಾದಿ ಹರವು

ಹರವು ಹೆಚ್ಚಲು ಮುಗಿಲ ನೆಲದಲಿ
ಬೆಳಕು ಚಿಮ್ಮಿತು
ಕೊಸರು ಕರಗಲು ಹಸೆಯು ಹರಡಲು
ಎದೆಯ ಬನದಲಿ ತನ್ನಿಂತಾನೇ
ಚೆಲುವು ಮೂಡಿತು.

ಯುಗವು ಕಳೆಯಲು ಯುಗವು ಮರಳಲು
ಜಗದ ನಿಯಮ ಸಹಜವಾಗಲು
ವಿಳಂಬಿ ವಿಳಂಬವೆನ್ನದೇ
ದಾಪುಗಾಲು ಹಾಕಿ ಬರುತಿರೆ
ಹೇಮಲಂಬಿ ಹಳೆಯ ಬಿಂಬಿ
ದೂರ ಸರಿಯಿತು.

ಕೆಂದಳಿರಿಗೂ ಮೀಗಿ ಕೆಂದೂಳು
ಹುಡಿಯೆದ್ದು
ಜಗವು ಸುಗ್ಗಿಯ ಸೊಬಗ ಹೊದೆದು
ರಸದೌತಣ ಇಳೆಯ ಮನೆಯೊಳೆದ್ದು
ತೇಲುತೇಲುತ
ಕನಸ ಹೆಣೆಯುವ ಕಾಲ ಬಂದಿತು.

ಹೂಬಿಸಿಲು ನೃತ್ಯಗೈಯಲು
ಮಾಮರದ ಸೆರಗ ಹಿಡಿಯಲು
ದುಂಬಿ ನುಡಿಯಲು,
ಕುಕಿಲ ಉಲಿಯಲು
ರೈತ ಬವಣೆಯು ಮುಗಿದು ಹೋಗಲು
ಸುಗ್ಗಿ ಸಂಭ್ರಮ ಮುಷ್ಟಿ ಹಿಡಿದು
ಸೃಷ್ಟಿ ಮೆರೆಯಿತು.

ಬೇವು ಬೆಲ್ಲ ನೋವು ನಲಿವು
ಮೆರಗು ಚೆಲ್ಲಿತು.
ಹೊಸ ಭರವಸೆಯ ಬೆಳಕ ಸೂಡಿ.
ಎದೆಗೂ ಎದೆಗೂ ಅರಿವು ಹರಡಿ
ವೈರುಧ್ಯ ತೊರೆದು ಜ್ಞಾನ ಮೂಡಿ
ಏಕತೆಯ ಗಾನ ಹೊರಟಿತು.

ಶಿಶಿರ ಋತುವು ಬೇಲಿದಾಟಲು
ವಸಂತ ಗಾನದ ಮಧುರ ಮೈತ್ರಿಯು
ಚೈತ್ರ ಸೊಬಗು ಬಲೆಯ ಬೀಸಲು
ಬಿರಿದ ಮೊಗ್ಗಿನ ಘಮವು ಪಸರಿಸೆ
ಹಾರೋ ಹೆಜ್ಜೆಗೂ ಗೆಜ್ಜೆ ಕಟ್ಟಿತು.

ಜಗವ ಹರಸಲು,
ರಮೆಯ ರಮಿಸಲು
ಬವಣೆ ಭಾವ ಕಳೆದು ಹೋಗಲು
ತಳಿರುತೋರಣ ಮುತ್ತಿನಾರತಿ
ಸುಮದರಾಶಿಯ ಹೊತ್ತು ತಂದಿತು
ವಿಳಂಬವೆನ್ನದೇವಿಳಂಬಿಯೊಡನೆ
ಇಳೆಗೆ ಹಬ್ಬವು ಹಬ್ಬಿತು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...