ಯುಗಾದಿ ಹರವು

ಹರವು ಹೆಚ್ಚಲು ಮುಗಿಲ ನೆಲದಲಿ
ಬೆಳಕು ಚಿಮ್ಮಿತು
ಕೊಸರು ಕರಗಲು ಹಸೆಯು ಹರಡಲು
ಎದೆಯ ಬನದಲಿ ತನ್ನಿಂತಾನೇ
ಚೆಲುವು ಮೂಡಿತು.

ಯುಗವು ಕಳೆಯಲು ಯುಗವು ಮರಳಲು
ಜಗದ ನಿಯಮ ಸಹಜವಾಗಲು
ವಿಳಂಬಿ ವಿಳಂಬವೆನ್ನದೇ
ದಾಪುಗಾಲು ಹಾಕಿ ಬರುತಿರೆ
ಹೇಮಲಂಬಿ ಹಳೆಯ ಬಿಂಬಿ
ದೂರ ಸರಿಯಿತು.

ಕೆಂದಳಿರಿಗೂ ಮೀಗಿ ಕೆಂದೂಳು
ಹುಡಿಯೆದ್ದು
ಜಗವು ಸುಗ್ಗಿಯ ಸೊಬಗ ಹೊದೆದು
ರಸದೌತಣ ಇಳೆಯ ಮನೆಯೊಳೆದ್ದು
ತೇಲುತೇಲುತ
ಕನಸ ಹೆಣೆಯುವ ಕಾಲ ಬಂದಿತು.

ಹೂಬಿಸಿಲು ನೃತ್ಯಗೈಯಲು
ಮಾಮರದ ಸೆರಗ ಹಿಡಿಯಲು
ದುಂಬಿ ನುಡಿಯಲು,
ಕುಕಿಲ ಉಲಿಯಲು
ರೈತ ಬವಣೆಯು ಮುಗಿದು ಹೋಗಲು
ಸುಗ್ಗಿ ಸಂಭ್ರಮ ಮುಷ್ಟಿ ಹಿಡಿದು
ಸೃಷ್ಟಿ ಮೆರೆಯಿತು.

ಬೇವು ಬೆಲ್ಲ ನೋವು ನಲಿವು
ಮೆರಗು ಚೆಲ್ಲಿತು.
ಹೊಸ ಭರವಸೆಯ ಬೆಳಕ ಸೂಡಿ.
ಎದೆಗೂ ಎದೆಗೂ ಅರಿವು ಹರಡಿ
ವೈರುಧ್ಯ ತೊರೆದು ಜ್ಞಾನ ಮೂಡಿ
ಏಕತೆಯ ಗಾನ ಹೊರಟಿತು.

ಶಿಶಿರ ಋತುವು ಬೇಲಿದಾಟಲು
ವಸಂತ ಗಾನದ ಮಧುರ ಮೈತ್ರಿಯು
ಚೈತ್ರ ಸೊಬಗು ಬಲೆಯ ಬೀಸಲು
ಬಿರಿದ ಮೊಗ್ಗಿನ ಘಮವು ಪಸರಿಸೆ
ಹಾರೋ ಹೆಜ್ಜೆಗೂ ಗೆಜ್ಜೆ ಕಟ್ಟಿತು.

ಜಗವ ಹರಸಲು,
ರಮೆಯ ರಮಿಸಲು
ಬವಣೆ ಭಾವ ಕಳೆದು ಹೋಗಲು
ತಳಿರುತೋರಣ ಮುತ್ತಿನಾರತಿ
ಸುಮದರಾಶಿಯ ಹೊತ್ತು ತಂದಿತು
ವಿಳಂಬವೆನ್ನದೇವಿಳಂಬಿಯೊಡನೆ
ಇಳೆಗೆ ಹಬ್ಬವು ಹಬ್ಬಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೮
Next post ಮುಸ್ಸಂಜೆಯ ಮಿಂಚು – ೧೬

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys