Home / ಕವನ / ಕವಿತೆ / ಯುಗಾದಿ ಹರವು

ಯುಗಾದಿ ಹರವು

ಹರವು ಹೆಚ್ಚಲು ಮುಗಿಲ ನೆಲದಲಿ
ಬೆಳಕು ಚಿಮ್ಮಿತು
ಕೊಸರು ಕರಗಲು ಹಸೆಯು ಹರಡಲು
ಎದೆಯ ಬನದಲಿ ತನ್ನಿಂತಾನೇ
ಚೆಲುವು ಮೂಡಿತು.

ಯುಗವು ಕಳೆಯಲು ಯುಗವು ಮರಳಲು
ಜಗದ ನಿಯಮ ಸಹಜವಾಗಲು
ವಿಳಂಬಿ ವಿಳಂಬವೆನ್ನದೇ
ದಾಪುಗಾಲು ಹಾಕಿ ಬರುತಿರೆ
ಹೇಮಲಂಬಿ ಹಳೆಯ ಬಿಂಬಿ
ದೂರ ಸರಿಯಿತು.

ಕೆಂದಳಿರಿಗೂ ಮೀಗಿ ಕೆಂದೂಳು
ಹುಡಿಯೆದ್ದು
ಜಗವು ಸುಗ್ಗಿಯ ಸೊಬಗ ಹೊದೆದು
ರಸದೌತಣ ಇಳೆಯ ಮನೆಯೊಳೆದ್ದು
ತೇಲುತೇಲುತ
ಕನಸ ಹೆಣೆಯುವ ಕಾಲ ಬಂದಿತು.

ಹೂಬಿಸಿಲು ನೃತ್ಯಗೈಯಲು
ಮಾಮರದ ಸೆರಗ ಹಿಡಿಯಲು
ದುಂಬಿ ನುಡಿಯಲು,
ಕುಕಿಲ ಉಲಿಯಲು
ರೈತ ಬವಣೆಯು ಮುಗಿದು ಹೋಗಲು
ಸುಗ್ಗಿ ಸಂಭ್ರಮ ಮುಷ್ಟಿ ಹಿಡಿದು
ಸೃಷ್ಟಿ ಮೆರೆಯಿತು.

ಬೇವು ಬೆಲ್ಲ ನೋವು ನಲಿವು
ಮೆರಗು ಚೆಲ್ಲಿತು.
ಹೊಸ ಭರವಸೆಯ ಬೆಳಕ ಸೂಡಿ.
ಎದೆಗೂ ಎದೆಗೂ ಅರಿವು ಹರಡಿ
ವೈರುಧ್ಯ ತೊರೆದು ಜ್ಞಾನ ಮೂಡಿ
ಏಕತೆಯ ಗಾನ ಹೊರಟಿತು.

ಶಿಶಿರ ಋತುವು ಬೇಲಿದಾಟಲು
ವಸಂತ ಗಾನದ ಮಧುರ ಮೈತ್ರಿಯು
ಚೈತ್ರ ಸೊಬಗು ಬಲೆಯ ಬೀಸಲು
ಬಿರಿದ ಮೊಗ್ಗಿನ ಘಮವು ಪಸರಿಸೆ
ಹಾರೋ ಹೆಜ್ಜೆಗೂ ಗೆಜ್ಜೆ ಕಟ್ಟಿತು.

ಜಗವ ಹರಸಲು,
ರಮೆಯ ರಮಿಸಲು
ಬವಣೆ ಭಾವ ಕಳೆದು ಹೋಗಲು
ತಳಿರುತೋರಣ ಮುತ್ತಿನಾರತಿ
ಸುಮದರಾಶಿಯ ಹೊತ್ತು ತಂದಿತು
ವಿಳಂಬವೆನ್ನದೇವಿಳಂಬಿಯೊಡನೆ
ಇಳೆಗೆ ಹಬ್ಬವು ಹಬ್ಬಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...