Home / ಕವನ / ಕವಿತೆ / ಮಿಡಿಗಾಯ ಮಹಿಮೆ

ಮಿಡಿಗಾಯ ಮಹಿಮೆ

ಮಾವಿನ ಮಿಡಿ ಎಲ್ಲಿ ಸಿಗುತ್ತೋ?
ಕಾಯುತ್ತಿದ್ದೆ.
ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ
ಹಾಕಿಡಬೇಕು.
ಅದೇ ಮೊನ್ನೆ ಹಸಿಹಸಿರು ಮಿಡಿ
ಗುಲಗುಂಜಿಗೆ ಸ್ವಲ್ಪವೇ ದೊಡ್ಡದು
ಪೇಟೆ ಅಂಚಿಗೆ ನನಗೆ ಬೇಕಾದದ್ದು
ಅವನೊಬ್ಬನಲ್ಲಿ ಮಾತ್ರ ಸುರಿದುಕೊಂಡಿದ್ದ.
ಏರುಪೇರಾಗದಂತೆ ಕೈ ಬಾಯಿ
ಸ್ವಚ್ಛವಾಗಿಟ್ಟುಕೊಳ್ಳಬೇಕು
ಮಾಡುವಾಗ ಎಂದಿದ್ದ..

ಭರಣಿಯ ಬಿರಡೆ
ಸ್ವಲ್ಪ ಸಡಿಲವಾದರೂ ಸಾಕು
ಒಳಗಿನ ಉಪ್ಪಿನ ಕಾಯಿಗೆ
ಹುಳು ಬೀಳುವುದು
ಹೊರಗಿನ ಹನಿ ನೀರ ಸೋಂಕು
ಕೆಡಿಸಿಬಿಡುವುದು
ರುಚಿಯ ಸಾರ ಹತ್ತದಂತೆ.

ಘಮಘಮ ಪರಿಮಳಕ್ಕೆ ಎಷ್ಟೊಂದು
ಮೂಗುಗಳು ತೆರೆದುಕೊಳ್ಳುತ್ತವೆ.
ಹುಳಿಖಾರ ಉಪ್ಪಿನದು ಅದೆಂಥಾ ಕರಾಮತ್ತು?

ಇಡಿಗಾಯಿ ಮಿಡಿಗಾಯಿ ಜಿಹ್ವೆಯೊಳಗೆ
ಅಂಟಿ ಮೀಟುವುದು ರಸಗೃಂಥಿಗಳ
ಹದವಾಗಿ ಬಿಸಿಮಾಡಿ ಸೌಟ ಬಳಸಿದರೆ
ಕಾಯ್ದುಕೊಳ್ಳಬಹುದು ಕಾಲಪೂರ್‍ತಿ

ಆಚೆ ಮನೆಗೂ ಇಚೆ ಮನೆಗೂ
ಮತ್ತೆ ಮತ್ತೆ ನಂಟು
ಬೆಸೆಯುವುದು ಮತ್ತೆ ಕಿಚ್ಚು ಹೊತ್ತಿಸುವುದು
ಇದೇ ಉಪ್ಪಿನ ಕಾಯಿ
ಅದಕ್ಕೆ ಪದೇ ಪದೇ ಹೇಳಿಕೊಳ್ಳಬೇಡ
ಉಪ್ಪಿನ ಕಾಯಿ ಬೆರೆಸಿಟ್ಟಿದ್ದನ್ನು
ಮನೆಯಾತ ಎಚ್ಚರಿಸಿದ್ದ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...