Home / ಕವನ / ಕವಿತೆ / ಅನ್ನದಾತನೆ ನಿನಗೆ

ಅನ್ನದಾತನೆ ನಿನಗೆ

ಅನ್ನದಾತನೆ ನಿನಗೆ
ನನ್ನ ಕೋಟಿ ನಮನ|
ನಿನ್ನೊಂದು ಬೆವರ ಹನಿಗೆ
ಸಮವಲ್ಲ ನನ್ನ ಈ ಜೀವನ||

ಬಿಸಿಲೆನ್ನದೆ ಗಾಳಿ ಎನ್ನದೆ
ದುಡಿದು ನಮ್ಮೆಲ್ಲರಿಗಾಗಿ
ಮುಡಿಪಾಗಿಟ್ಟಿಯೇ ನಿನ್ನಯ ಜೀವನ|
ಸದಾ ಪಂಚಭೂತಗಳನೇ
ಪೂಜೆಗೈಯುತ
ಅರ್ಪಿಸುವೆ ನಿನ್ನ
ತನು ಮನಗಳ ಶಾಶ್ವತ||

ನೆಲವ ಹದಮಾಡಿ ಬೀಜವ ಬಿತ್ತಿ
ಭೂತಾಯಿಯ ಸೇವೆಯ ಮಾಡುವೆ|
ಮಳೆಗಾಗಿ ಮುಗಿಲ ನೋಡುತ ನೀ
ವರುಣನಿಗೆ ಪ್ರಾರ್ಥನೆಯ ಸಲ್ಲಿಸುವೆ|
ಮಳೆ ಬಾರದೆ ಭೂತಾಯಿ
ಒಡಲು ಸುಡುತಿರೆ ನೀ ನೊಂದು
ಕಣ್ಣನೀರನು ಸುರಿಸುವೆ|
ಮಳೆ ಬಂದು ಬೆಳೆ ಬೆಳೆದರೆ
ಲೋಕಕೆ ಅನ್ನವ ನೀಡಿ ಸಂತಸಗೈಯುವೆ||

ಬರಗಾಲ ಇರಲಿ ಕ್ಷಾಮವೇ ಬರಲಿ
ಸಮಚಿತ್ತದಿಂದ ನೀ ಸ್ವೀಕರಿಸುವೆ|
ಶಾಂತಿ ಸಮಾನತೆಯಿಂದೆಲ್ಲರ ಕ್ಷಮಿಸಿ
ನೂರು ಕಾಲ ನೀ ಬಾಳುವೆ||

ಯಾವ ಪಾಪಕರ್ಮವ ಮಾಡದೆ
ಬರೀ ಪುಣ್ಯ ಜೀವನ ನಡೆಸಿ ಎಲ್ಲರಿಗೂ
ಆದರ್ಶ ಮಾರ್ಗದರ್ಶನಗೈಯುವೆ|
ದೇವಾದಿದೇವತೆಗಳಿಂದಲಿ
ಪ್ರಶಂಸೆಯ, ಋಷಿಮುನಿಗಳಿಂದಲೂ
ನೀ ಪೂಜೆಯ ಪಡೆವೆ||
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...