ಅನ್ನದಾತನೆ ನಿನಗೆ

ಅನ್ನದಾತನೆ ನಿನಗೆ
ನನ್ನ ಕೋಟಿ ನಮನ|
ನಿನ್ನೊಂದು ಬೆವರ ಹನಿಗೆ
ಸಮವಲ್ಲ ನನ್ನ ಈ ಜೀವನ||

ಬಿಸಿಲೆನ್ನದೆ ಗಾಳಿ ಎನ್ನದೆ
ದುಡಿದು ನಮ್ಮೆಲ್ಲರಿಗಾಗಿ
ಮುಡಿಪಾಗಿಟ್ಟಿಯೇ ನಿನ್ನಯ ಜೀವನ|
ಸದಾ ಪಂಚಭೂತಗಳನೇ
ಪೂಜೆಗೈಯುತ
ಅರ್ಪಿಸುವೆ ನಿನ್ನ
ತನು ಮನಗಳ ಶಾಶ್ವತ||

ನೆಲವ ಹದಮಾಡಿ ಬೀಜವ ಬಿತ್ತಿ
ಭೂತಾಯಿಯ ಸೇವೆಯ ಮಾಡುವೆ|
ಮಳೆಗಾಗಿ ಮುಗಿಲ ನೋಡುತ ನೀ
ವರುಣನಿಗೆ ಪ್ರಾರ್ಥನೆಯ ಸಲ್ಲಿಸುವೆ|
ಮಳೆ ಬಾರದೆ ಭೂತಾಯಿ
ಒಡಲು ಸುಡುತಿರೆ ನೀ ನೊಂದು
ಕಣ್ಣನೀರನು ಸುರಿಸುವೆ|
ಮಳೆ ಬಂದು ಬೆಳೆ ಬೆಳೆದರೆ
ಲೋಕಕೆ ಅನ್ನವ ನೀಡಿ ಸಂತಸಗೈಯುವೆ||

ಬರಗಾಲ ಇರಲಿ ಕ್ಷಾಮವೇ ಬರಲಿ
ಸಮಚಿತ್ತದಿಂದ ನೀ ಸ್ವೀಕರಿಸುವೆ|
ಶಾಂತಿ ಸಮಾನತೆಯಿಂದೆಲ್ಲರ ಕ್ಷಮಿಸಿ
ನೂರು ಕಾಲ ನೀ ಬಾಳುವೆ||

ಯಾವ ಪಾಪಕರ್ಮವ ಮಾಡದೆ
ಬರೀ ಪುಣ್ಯ ಜೀವನ ನಡೆಸಿ ಎಲ್ಲರಿಗೂ
ಆದರ್ಶ ಮಾರ್ಗದರ್ಶನಗೈಯುವೆ|
ದೇವಾದಿದೇವತೆಗಳಿಂದಲಿ
ಪ್ರಶಂಸೆಯ, ಋಷಿಮುನಿಗಳಿಂದಲೂ
ನೀ ಪೂಜೆಯ ಪಡೆವೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಮ್ಲ ಮಳೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೧

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…