ಪ್ರಾರ್‍ಥನೆ

ಯಾರೋ ಬಂದರು ಯಾರೋ ಹೋದರು
ಗೋಡೆ ಮೇಲೆಲ್ಲ ನೆರಳು,
ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು
ಯಾರದೋ ನುಣುಪು ಬೆರಳು,
ಬಂದಿದ್ದರು, ನಿಂತಿದ್ದರು, ನುಡಿಸಲು
ಎಣಿಸಿದ್ದರು ಎಂಬ
ಭಾವವೊಂದೆ ಉಳಿದಿದೆ, ಕತ್ತೆತ್ತಲು
ಏನಿದೆ, ಬರಿಬಯಲು!

ಹೂ ಪರಿಮಳ ಹಾಯಾಗಿ ಹಬ್ಬುತಿದೆ
ಇಡಿಕೊಠಡಿಯ ತುಂಬ;
ಜರಿವಸ್ತ್ರದ ಸರಪರಸದ್ದಿನ್ನೂ
ನಿಂತಿದೆ ಕಿವಿತುಂಬ;
ತಾಯಿಕೈಯ ನೇವರಿಕೆಯೆ, ಆದರು
ತಲೆಯನೆತ್ತಲಿಲ್ಲ,
ಕರುಣೆ ತೋರಿ ಬಳಿ ಬಂದಿರೆ ದಿನವೂ
ನಮಿಸಿದ ಪ್ರತಿಬಿಂಬ.

ನೀವು ಬಂದಾಗ ಕರೆಯಲಿಲ್ಲೆಂದು
ಕೋಪವೇನು ನಿಮಗೆ?
ಕೊಡಿ ಎಂದು ನಯ ನುಡಿಯಲಿಲ್ಲ
ಬೇರಾಯಿತೆ ನಿಮ್ಮ ಬಗೆ?
ಏತರಲೋ ಹೂತಿತ್ತು ಮನಸು, ಬರಿ
ಕಾತರ ಕನವರಿಕೆ;
ಮಂಕು ಮುಚ್ಚಿ ತಪ್ಪಿದೆ ನಿಜ, ಅಷ್ಟಕೆ
ಹೊರಟೇ ಬಿಡುವುದೆ ಹೊರಕೆ?

ಬನ್ನಿ ಕಾದಿರುವ ನಿಮ್ಮದೇ ಧ್ಯಾನ
ಶಬರಿಯ ಹಂಬಲಿಕೆ,
ಲೌಕಿಕದಲಿ ಬಗೆದೈವವ ಮರೆತೆನು
ಶಪಿಸಬೇಡಿ ಅದಕೆ.
ಸ್ವಪ್ನಚಿತ್ತರನು ಯಾರು ದೂರುವರು
ಕಂಡರು ಕಾಣದಕೆ?
ತಿಳಿಯದೆ ತಪ್ಪಿದರದೆ ಕಾರಣವೆ
ಬಂದುದು ಬಾರದಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆ ಆದ ಬ್ರಹ್ಮಚಾರಿ
Next post ನಿನ್ನ ಮುರಳಿಗೆ ಕೊರಳ ತೂಗಲಿ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…