ನಿನ್ನ ಮುರಳಿಗೆ ಕೊರಳ ತೂಗಲಿ

ಗಗನ ಮಲ್ಲಿಗೆ ಮುಗಿಲ ಮಂಚದಿ
ರಂಗವಲ್ಲಿಯ ಬರೆಯಲಿ
ಪ್ರೀತಿ ಸಂಪಿಗೆ ತುಟಿಯ ಗುಡಿಯಲಿ
ತಾಯ ಹಾಡನು ಹಾಡಲಿ

ಸಿಡಿಲ ಮುಗಿಲಲಿ ಕಡಲ ಅಲೆಯಲಿ
ಆತ್ಮ ಚಂದಿರ ಮೂಡಲಿ
ಬಾಳ ತೋರಣ ಕಲೆಯ ಹೂರಣ
ಹರುಷ ಹೋಳಿಗೆ ಉಣಿಸಲಿ

ಅವ್ವ ತಾಯಿಯೆ ಅಬ್ಬೆ ದೇವಿಯೆ
ಆಡು ಆಡಿಸು ಈ ವನ
ಚಂಡು ಕಣಗಿಲ ಜಾಜಿ ಬಕುಲದ
ಹೂವು ಮಕ್ಕಳು ಈ ಜನ

ವಿಷವು ಏತಕೆ ವೈರವೇತಕೆ
ಮಂದಹಾಸವ ಬೆಳಗಿಸೌ
ಹಾಲುಗಲ್ಲದ ಕೂಸು ಗಲ್ಲಕೆ
ಜೇನುತುಪ್ಪವ ತೋಯಿಸೌ

ಚಂದ್ರವಾಗಲಿ ವೀಣೆ ಮಿಡಿಯಲಿ
ಕೊಳಲಗಾನವ ಕೇಳಲಿ
ನಿನ್ನ ಮುರಳಿಗೆ ಕೊರಳ ತೂಗಲಿ
ಯೋಗ ಜೋಗುಳ ಸವಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾರ್‍ಥನೆ
Next post ಕೋರಿಕೆ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…