ನಿನ್ನ ಮುರಳಿಗೆ ಕೊರಳ ತೂಗಲಿ

ಗಗನ ಮಲ್ಲಿಗೆ ಮುಗಿಲ ಮಂಚದಿ
ರಂಗವಲ್ಲಿಯ ಬರೆಯಲಿ
ಪ್ರೀತಿ ಸಂಪಿಗೆ ತುಟಿಯ ಗುಡಿಯಲಿ
ತಾಯ ಹಾಡನು ಹಾಡಲಿ

ಸಿಡಿಲ ಮುಗಿಲಲಿ ಕಡಲ ಅಲೆಯಲಿ
ಆತ್ಮ ಚಂದಿರ ಮೂಡಲಿ
ಬಾಳ ತೋರಣ ಕಲೆಯ ಹೂರಣ
ಹರುಷ ಹೋಳಿಗೆ ಉಣಿಸಲಿ

ಅವ್ವ ತಾಯಿಯೆ ಅಬ್ಬೆ ದೇವಿಯೆ
ಆಡು ಆಡಿಸು ಈ ವನ
ಚಂಡು ಕಣಗಿಲ ಜಾಜಿ ಬಕುಲದ
ಹೂವು ಮಕ್ಕಳು ಈ ಜನ

ವಿಷವು ಏತಕೆ ವೈರವೇತಕೆ
ಮಂದಹಾಸವ ಬೆಳಗಿಸೌ
ಹಾಲುಗಲ್ಲದ ಕೂಸು ಗಲ್ಲಕೆ
ಜೇನುತುಪ್ಪವ ತೋಯಿಸೌ

ಚಂದ್ರವಾಗಲಿ ವೀಣೆ ಮಿಡಿಯಲಿ
ಕೊಳಲಗಾನವ ಕೇಳಲಿ
ನಿನ್ನ ಮುರಳಿಗೆ ಕೊರಳ ತೂಗಲಿ
ಯೋಗ ಜೋಗುಳ ಸವಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾರ್‍ಥನೆ
Next post ಕೋರಿಕೆ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys