ಕೋರಿಕೆ

ನೆರಳಲ್ಲಿ ನಿಂತು, ಸಾವಿರಬಾರಿ,
ಇದೆಲ್ಲ ನಡೆಯುವುದು, ನೋಡಿದ್ದೇನೆ.
ಕಳ್ಳತನ ಮೊದಲು, ಕೊಲೆ ಆಮೇಲೆ,
ಮಾನಭಂಗ, ನಂತರ ಕುರುಡು ಕೈಯ ದಾರುಣ ಕೃತ್ಯಗಳು.
ಪ್ರತಿ ಬಾರಿ ಹೊಸತಾಗಿ ಪ್ರಾರ್ಥಿಸಿದ್ದೇನೆ,
ಇಲ್ಲವೆ ಹಳೆಯ ಪ್ರಾರ್ಥನೆಯನ್ನೆ ಹೊಸದಾಗಿ ಹೇಳಿದ್ದೇನೆ.
ನೋವಿನಲ್ಲಿ ಕವಿತೆ ಹುಡುಕುತ್ತ
ನನ್ನ ಆತ್ಮದ ಬೆಲೆ ತೆತ್ತು
ಮೌನವೆ ಉತ್ತಮವೆಂದು ತಿಳಿದಿದ್ದೇನೆ.
ನಾನು ಕೇವಲ ಕಣ್ಣುಮಾತ್ರ
ಒಳಿತು ಸೋಲುತ್ತಿರುವುದರ ಸಾಕ್ಷಿ;
ಹುಟ್ಟಿದ ಮಕ್ಕಳ ಸೌಂದರ್ಯ ಕಾಣುತ್ತ
ಕ್ಯಾನ್ಸರ್ ಕಾದಿರುವುದು ತಿಳಿದಿದ್ದೇನೆ.
ಬದುಕನ್ನು ಇತ್ಯರ್ಥ ಮಾಡುವವನಲ್ಲಿ
ನನ್ನದೊಂದೇ ಕೋರಿಕೆ :
ಸತ್ಯ ಸುಂದರವಾಗಲಿ.

ಮಂಜೂರಾಗಲಿಲ್ಲ.
*****
ಮೂಲ: ಆರ್ ಎಸ್ ಥಾಮಸ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಮುರಳಿಗೆ ಕೊರಳ ತೂಗಲಿ
Next post ಮದುವೆಯ ಏಜಂಟ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…