ಆಶಮಾಡಿ ಪಾಶಕ ಬಿದ್ದಿತೋ ಚಿಗರಿ

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ
ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ  ||ಪ||

ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ
ಮೋಸದಿ ಸಿಲುಕಿತು ಅರಸನ ಕೈಸೇರಿ  ||ಅ.ಪ.||

ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ
ಅಗಲಿದಿಯಾ ಅಯ್ಯೋ ಬಾಲಗೋಪಾಲ
ಅರಸನಿಗೆ ಕರುಣ ಬರಲಿಲ್ಲರಿ
ಮುಖಭಂಗವಾಗಿತ್ತು ದುಃಖದೊಳು ಚಿಗರಿ  ||೧||

ಮನಿಗೆ ಹೋಗಿ ಮಕ್ಕಳ ನೋಡಿ ಬರುವೆನ್ರಿ
ಬೇಕಾರದವ್ರ ಬೇಡ್ರಿ ಕೊಡುನೆನು ಜಾಮೀನ್ರಿ
ಮೃಗಜಾತಿ ನಿನ್ನ ನಂಬಿಗೆಯೇನು
ಅಡವಿಯಲ್ಲಿ ಮೇಯುತ್ತಿದ್ದಿ ಬೆದರಿ  ||೨||

ಶರಣರ ಚರಣಕ್ಕೆ ಎರಗಿತು ಚಿಗರಿ
ಅರಸನ ಕೈಯೊಳಗಿಂದ ಬಿಡಿಸಿರಿ
ಅರವುಳ್ಳ ಶರಣರು ಕಕಲಾತಿ ಮಾಡಿದರು
ಸಕಲಸಂಪನ್ನರಾಗಿ ಬಿಡಿಸಿದರು ಚಿಗುರಿ  ||೩||

ಕರಮುಗದು ಚಿಗರಿ ವಂದನಮಾಡಿ
ಸೆರಮನಿ ಬಿಡಿಸಿರಿ ಕರುಣೆಮಾಡಿ
ಎರಡು ಮಕ್ಕಳ ತಂದು ಶರಣರ ಮುಂದೆ
ಅಡಿದಾವರೆಗೆ ಒಪ್ಪಿಸೇನಿ ಬೇಕಾದ್ದಮಾಡ್ರಿ  ||೪||

ಮಕ್ಕಳು ಅಂದಾವು ಮುಂಚೆ ನಮ್ಮನ್ನು ಕೊಯ್ಯಿರಿ
ನಮ್ಮ ತಾಯಿ ಸಲಹಿ ನೀವು ಹಿತವಂತರಾಗಿರಿ
ಅರಸನ ಮನಸಿಗೆ ಆದೀತೋ ಫನಶಾಂತಿ
ಅನುಮಾನ ಯಾತಕ್ಕೆ ಹೋಗು ಚಿಗರಿ  ||೫||

ಶರಣರ ಅನುಗ್ರಹದಿ ಉಳಿದಾವು ಮೂರು ಜನ್ಮ
ಸರ್ವಜನರು ಅನ್ನುವರು ಶರೀಫಸಾಹೇಬನ ಕಲ್ಮಾ
ಅಲ್ಲಮನ ಧ್ಯಾನ ಕಲ್ಮಾನ ಸೂತ್ರ
ಬಹದ್ದೂರ ಗೋವಿಂದನ ಧ್ಯಾನ  ||೬||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಹೀಗೆ ಬೀಸುತ್ತಿರಬೇಕು ಗಾಳಿ….
Next post ಅಹಿಂದ ಕೊಹಿಂದ ವಿಹಿಂದ ಆಮೇಲೆ ಗೋ‌ಇಂದ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…