Home / ಕವನ / ಕವಿತೆ / ಆಶಮಾಡಿ ಪಾಶಕ ಬಿದ್ದಿತೋ ಚಿಗರಿ

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ
ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ  ||ಪ||

ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ
ಮೋಸದಿ ಸಿಲುಕಿತು ಅರಸನ ಕೈಸೇರಿ  ||ಅ.ಪ.||

ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ
ಅಗಲಿದಿಯಾ ಅಯ್ಯೋ ಬಾಲಗೋಪಾಲ
ಅರಸನಿಗೆ ಕರುಣ ಬರಲಿಲ್ಲರಿ
ಮುಖಭಂಗವಾಗಿತ್ತು ದುಃಖದೊಳು ಚಿಗರಿ  ||೧||

ಮನಿಗೆ ಹೋಗಿ ಮಕ್ಕಳ ನೋಡಿ ಬರುವೆನ್ರಿ
ಬೇಕಾರದವ್ರ ಬೇಡ್ರಿ ಕೊಡುನೆನು ಜಾಮೀನ್ರಿ
ಮೃಗಜಾತಿ ನಿನ್ನ ನಂಬಿಗೆಯೇನು
ಅಡವಿಯಲ್ಲಿ ಮೇಯುತ್ತಿದ್ದಿ ಬೆದರಿ  ||೨||

ಶರಣರ ಚರಣಕ್ಕೆ ಎರಗಿತು ಚಿಗರಿ
ಅರಸನ ಕೈಯೊಳಗಿಂದ ಬಿಡಿಸಿರಿ
ಅರವುಳ್ಳ ಶರಣರು ಕಕಲಾತಿ ಮಾಡಿದರು
ಸಕಲಸಂಪನ್ನರಾಗಿ ಬಿಡಿಸಿದರು ಚಿಗುರಿ  ||೩||

ಕರಮುಗದು ಚಿಗರಿ ವಂದನಮಾಡಿ
ಸೆರಮನಿ ಬಿಡಿಸಿರಿ ಕರುಣೆಮಾಡಿ
ಎರಡು ಮಕ್ಕಳ ತಂದು ಶರಣರ ಮುಂದೆ
ಅಡಿದಾವರೆಗೆ ಒಪ್ಪಿಸೇನಿ ಬೇಕಾದ್ದಮಾಡ್ರಿ  ||೪||

ಮಕ್ಕಳು ಅಂದಾವು ಮುಂಚೆ ನಮ್ಮನ್ನು ಕೊಯ್ಯಿರಿ
ನಮ್ಮ ತಾಯಿ ಸಲಹಿ ನೀವು ಹಿತವಂತರಾಗಿರಿ
ಅರಸನ ಮನಸಿಗೆ ಆದೀತೋ ಫನಶಾಂತಿ
ಅನುಮಾನ ಯಾತಕ್ಕೆ ಹೋಗು ಚಿಗರಿ  ||೫||

ಶರಣರ ಅನುಗ್ರಹದಿ ಉಳಿದಾವು ಮೂರು ಜನ್ಮ
ಸರ್ವಜನರು ಅನ್ನುವರು ಶರೀಫಸಾಹೇಬನ ಕಲ್ಮಾ
ಅಲ್ಲಮನ ಧ್ಯಾನ ಕಲ್ಮಾನ ಸೂತ್ರ
ಬಹದ್ದೂರ ಗೋವಿಂದನ ಧ್ಯಾನ  ||೬||

*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...