Home / ಕವನ / ಕವಿತೆ / ಆಶಮಾಡಿ ಪಾಶಕ ಬಿದ್ದಿತೋ ಚಿಗರಿ

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ

ಆಶಮಾಡಿ ಪಾಶಕ ಬಿದ್ದಿತೋ ಚಿಗರಿ
ದೇಶಕ ತುಂಬ ಜಾಲ ಹಾಕಿದ ಕ್ಷತ್ರಿ  ||ಪ||

ಮೇಯಲಿಕ್ಕೆ ಬಿಟ್ಟುಬಂದಿತು ತನ್ನ ಮರಿ
ಮೋಸದಿ ಸಿಲುಕಿತು ಅರಸನ ಕೈಸೇರಿ  ||ಅ.ಪ.||

ಬಿಡರಿ ಸ್ವಲ್ಪ ಕುಡಿಸಿ ಬರುನೆನು ಹಾಲ
ಅಗಲಿದಿಯಾ ಅಯ್ಯೋ ಬಾಲಗೋಪಾಲ
ಅರಸನಿಗೆ ಕರುಣ ಬರಲಿಲ್ಲರಿ
ಮುಖಭಂಗವಾಗಿತ್ತು ದುಃಖದೊಳು ಚಿಗರಿ  ||೧||

ಮನಿಗೆ ಹೋಗಿ ಮಕ್ಕಳ ನೋಡಿ ಬರುವೆನ್ರಿ
ಬೇಕಾರದವ್ರ ಬೇಡ್ರಿ ಕೊಡುನೆನು ಜಾಮೀನ್ರಿ
ಮೃಗಜಾತಿ ನಿನ್ನ ನಂಬಿಗೆಯೇನು
ಅಡವಿಯಲ್ಲಿ ಮೇಯುತ್ತಿದ್ದಿ ಬೆದರಿ  ||೨||

ಶರಣರ ಚರಣಕ್ಕೆ ಎರಗಿತು ಚಿಗರಿ
ಅರಸನ ಕೈಯೊಳಗಿಂದ ಬಿಡಿಸಿರಿ
ಅರವುಳ್ಳ ಶರಣರು ಕಕಲಾತಿ ಮಾಡಿದರು
ಸಕಲಸಂಪನ್ನರಾಗಿ ಬಿಡಿಸಿದರು ಚಿಗುರಿ  ||೩||

ಕರಮುಗದು ಚಿಗರಿ ವಂದನಮಾಡಿ
ಸೆರಮನಿ ಬಿಡಿಸಿರಿ ಕರುಣೆಮಾಡಿ
ಎರಡು ಮಕ್ಕಳ ತಂದು ಶರಣರ ಮುಂದೆ
ಅಡಿದಾವರೆಗೆ ಒಪ್ಪಿಸೇನಿ ಬೇಕಾದ್ದಮಾಡ್ರಿ  ||೪||

ಮಕ್ಕಳು ಅಂದಾವು ಮುಂಚೆ ನಮ್ಮನ್ನು ಕೊಯ್ಯಿರಿ
ನಮ್ಮ ತಾಯಿ ಸಲಹಿ ನೀವು ಹಿತವಂತರಾಗಿರಿ
ಅರಸನ ಮನಸಿಗೆ ಆದೀತೋ ಫನಶಾಂತಿ
ಅನುಮಾನ ಯಾತಕ್ಕೆ ಹೋಗು ಚಿಗರಿ  ||೫||

ಶರಣರ ಅನುಗ್ರಹದಿ ಉಳಿದಾವು ಮೂರು ಜನ್ಮ
ಸರ್ವಜನರು ಅನ್ನುವರು ಶರೀಫಸಾಹೇಬನ ಕಲ್ಮಾ
ಅಲ್ಲಮನ ಧ್ಯಾನ ಕಲ್ಮಾನ ಸೂತ್ರ
ಬಹದ್ದೂರ ಗೋವಿಂದನ ಧ್ಯಾನ  ||೬||

*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...