Home / ಕವನ / ಕವಿತೆ / ಕಿಂಗ್‌ಸ್ಲಿಯ ಗಾಂಧಿ

ಕಿಂಗ್‌ಸ್ಲಿಯ ಗಾಂಧಿ


ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ
ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ
ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ

ಮಲಗಿದನೆಂದು ? ಇಡಿಯ ದೇಶದ ಜೀವವನ್ನು
ತನ್ನ ಸಾವಿನಲ್ಲಿ ಪಡೆದವನು ಭಾರತದ
ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ

ಅಲೆಗಳ ಮೇಲೆ ಯಾರಿಗೆಂದೋ ಹರಿಯಬಿಟ್ಟಿದ್ದ
ಬಟ್ಟೆ ಸೇರಿತ್ತೆ ಅದು ಸೇರಬೇಕಾದ ಕಡೆ
ತೇಲಿಕೊಂಡು ಹೋಗಿ? ನಡೆಗೆ ನಡೆ

ಮಾತಿಗೆ ಮಾತು ಮೌನಕ್ಕೆ ಮೌನ; ಪಾತ್ರಾಭಿನಯ
ಕೂಡ ತಿಳಿಯುವ ವಿಧಾನವೆಂದೇ ಕಿಂಗ್‌ಸ್ಲಿ
ಹುಡುಕ ಹೊರಟದ್ದು ಗಾಂಧಿಯನ್ನು


ಬೆನ್ನ ಹಿಂದಿದ್ದ ಪಕ್ಕದಲ್ಲೇ ಇದ್ದ ಅವನು
ಸಿಕ್ಕಿಯೂ ಸಿಕ್ಕದಂತಿದ್ದ ಎಲ್ಲಿ ಅನ್ವೇಷಣೆಯೂ
ಸ್ವಂತದಿಂದಲೆ ಹೊರಟು ಸ್ವಾಂತವಾಗುವ ರೀತಿ

ಒಂದಿಗಿದ್ದೇ ಪ್ರಕಟಗೊಳ್ಳಬೇಕಿತ್ತು. ಸುಲಭ
ದೈವತ್ವಕ್ಕೆ ಜಾರದೆಯೆ ಕೇವಲ ಮನುಷ್ಯ
ಸಹಜ ಭಂಗಿಗಳಲ್ಲಿ ಸಾಧಾರಣ

ಮಾತುಕತೆ ಕ್ರಿಯೆಗಳಲ್ಲಿ ಕಾರಣ
ಅಮೂರ್ತತೆಗೆ ಯಾವ ರೂಪು ಯಾವ ಚಹರೆ
ಯಾವ ವಿಧಾನ? ಮನುಷ್ಯತ್ವ ಕೂಡ

ಮಾಗುವುದು ಮರಣದಲ್ಲಿ-ಇದರ
ಆಭಿನಯವೂ ಒಂದು ಹುಡುಕು, ಬೆಳಕಿನ
ತೀಕ್ಷ್ಣ ಕಲ್ಪನೆಗೆ ಕತ್ತಲು ಕೂಡ ಬೇಕು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್