ಕಿಂಗ್‌ಸ್ಲಿಯ ಗಾಂಧಿ


ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ
ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ
ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ

ಮಲಗಿದನೆಂದು ? ಇಡಿಯ ದೇಶದ ಜೀವವನ್ನು
ತನ್ನ ಸಾವಿನಲ್ಲಿ ಪಡೆದವನು ಭಾರತದ
ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ

ಅಲೆಗಳ ಮೇಲೆ ಯಾರಿಗೆಂದೋ ಹರಿಯಬಿಟ್ಟಿದ್ದ
ಬಟ್ಟೆ ಸೇರಿತ್ತೆ ಅದು ಸೇರಬೇಕಾದ ಕಡೆ
ತೇಲಿಕೊಂಡು ಹೋಗಿ? ನಡೆಗೆ ನಡೆ

ಮಾತಿಗೆ ಮಾತು ಮೌನಕ್ಕೆ ಮೌನ; ಪಾತ್ರಾಭಿನಯ
ಕೂಡ ತಿಳಿಯುವ ವಿಧಾನವೆಂದೇ ಕಿಂಗ್‌ಸ್ಲಿ
ಹುಡುಕ ಹೊರಟದ್ದು ಗಾಂಧಿಯನ್ನು


ಬೆನ್ನ ಹಿಂದಿದ್ದ ಪಕ್ಕದಲ್ಲೇ ಇದ್ದ ಅವನು
ಸಿಕ್ಕಿಯೂ ಸಿಕ್ಕದಂತಿದ್ದ ಎಲ್ಲಿ ಅನ್ವೇಷಣೆಯೂ
ಸ್ವಂತದಿಂದಲೆ ಹೊರಟು ಸ್ವಾಂತವಾಗುವ ರೀತಿ

ಒಂದಿಗಿದ್ದೇ ಪ್ರಕಟಗೊಳ್ಳಬೇಕಿತ್ತು. ಸುಲಭ
ದೈವತ್ವಕ್ಕೆ ಜಾರದೆಯೆ ಕೇವಲ ಮನುಷ್ಯ
ಸಹಜ ಭಂಗಿಗಳಲ್ಲಿ ಸಾಧಾರಣ

ಮಾತುಕತೆ ಕ್ರಿಯೆಗಳಲ್ಲಿ ಕಾರಣ
ಅಮೂರ್ತತೆಗೆ ಯಾವ ರೂಪು ಯಾವ ಚಹರೆ
ಯಾವ ವಿಧಾನ? ಮನುಷ್ಯತ್ವ ಕೂಡ

ಮಾಗುವುದು ಮರಣದಲ್ಲಿ-ಇದರ
ಆಭಿನಯವೂ ಒಂದು ಹುಡುಕು, ಬೆಳಕಿನ
ತೀಕ್ಷ್ಣ ಕಲ್ಪನೆಗೆ ಕತ್ತಲು ಕೂಡ ಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ
Next post ಬ್ರಹ್ಮಾಂಡದ ದನಿಗಳು

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys