Home / ಕವನ / ಕವಿತೆ / ಕಿಂಗ್‌ಸ್ಲಿಯ ಗಾಂಧಿ

ಕಿಂಗ್‌ಸ್ಲಿಯ ಗಾಂಧಿ


ದಕ್ಷಿಣಾಫ್ರಿಕೆಯಲ್ಲಿದ್ದನೆಂದು ? ಸಾಬರ್‌ಮತಿಯ
ಕರ್ಮಯೋಗಿ ದಂಡಿಯ ತೀರಕ್ಕೆ ಯಾತ್ರೆ
ಕೈಗೊಂಡನೆಂದು? ನೋಖಾಲಿಯಲ್ಲಿ ಉಪವಾಸ

ಮಲಗಿದನೆಂದು ? ಇಡಿಯ ದೇಶದ ಜೀವವನ್ನು
ತನ್ನ ಸಾವಿನಲ್ಲಿ ಪಡೆದವನು ಭಾರತದ
ಉದ್ದಗಲ ಸಂಚರಿಸುತ್ತ ಒಮ್ಮೆ ನದಿ ತೀರ

ಅಲೆಗಳ ಮೇಲೆ ಯಾರಿಗೆಂದೋ ಹರಿಯಬಿಟ್ಟಿದ್ದ
ಬಟ್ಟೆ ಸೇರಿತ್ತೆ ಅದು ಸೇರಬೇಕಾದ ಕಡೆ
ತೇಲಿಕೊಂಡು ಹೋಗಿ? ನಡೆಗೆ ನಡೆ

ಮಾತಿಗೆ ಮಾತು ಮೌನಕ್ಕೆ ಮೌನ; ಪಾತ್ರಾಭಿನಯ
ಕೂಡ ತಿಳಿಯುವ ವಿಧಾನವೆಂದೇ ಕಿಂಗ್‌ಸ್ಲಿ
ಹುಡುಕ ಹೊರಟದ್ದು ಗಾಂಧಿಯನ್ನು


ಬೆನ್ನ ಹಿಂದಿದ್ದ ಪಕ್ಕದಲ್ಲೇ ಇದ್ದ ಅವನು
ಸಿಕ್ಕಿಯೂ ಸಿಕ್ಕದಂತಿದ್ದ ಎಲ್ಲಿ ಅನ್ವೇಷಣೆಯೂ
ಸ್ವಂತದಿಂದಲೆ ಹೊರಟು ಸ್ವಾಂತವಾಗುವ ರೀತಿ

ಒಂದಿಗಿದ್ದೇ ಪ್ರಕಟಗೊಳ್ಳಬೇಕಿತ್ತು. ಸುಲಭ
ದೈವತ್ವಕ್ಕೆ ಜಾರದೆಯೆ ಕೇವಲ ಮನುಷ್ಯ
ಸಹಜ ಭಂಗಿಗಳಲ್ಲಿ ಸಾಧಾರಣ

ಮಾತುಕತೆ ಕ್ರಿಯೆಗಳಲ್ಲಿ ಕಾರಣ
ಅಮೂರ್ತತೆಗೆ ಯಾವ ರೂಪು ಯಾವ ಚಹರೆ
ಯಾವ ವಿಧಾನ? ಮನುಷ್ಯತ್ವ ಕೂಡ

ಮಾಗುವುದು ಮರಣದಲ್ಲಿ-ಇದರ
ಆಭಿನಯವೂ ಒಂದು ಹುಡುಕು, ಬೆಳಕಿನ
ತೀಕ್ಷ್ಣ ಕಲ್ಪನೆಗೆ ಕತ್ತಲು ಕೂಡ ಬೇಕು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...