ಯಕ್ಷಗಾನ

ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ
ಕೊಟ್ಟು ಕುಳಿತಲ್ಲೆ ಒಡ್ಡೋಲಗ
ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ
ಉಸಿರು ಬಿಗಿಹಿಡಿದು ಗೆದ್ದ ಕಾಳಗ
ಇನ್ನಿಲ್ಲವೆಂಬ ಅಶ್ವಮೇಧ ಯಾಗ

ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ
ಅದೇನು ಭಗ್ಗನೆ ಉರಿವ ಪಂಜು ?
ಮಹಾ ರಕ್ಕಸನೆ ಸರಿ ಇವನು ಅಂಥ ಕರಾಳ ನೋಟ
ಲೆಕ್ಕಿಸದೆ ಮುಂಜಾವದ ಮಂಜು
ಕಾರುತಿರುವನು ಎಲ್ಲರ ಮೇಲೆ ನಂಜು

ಮುಗಿಯಿತೆಂದರೆ ಮುಗಿಯುವುದು ಹೇಗೆ ಒಂದು
ಜನಾಂಗವನ್ನೆ ಹುಚ್ಚೆಬ್ಬಿಸಿದ ಪುರಾಣ
ಮಗಧ ದೇಶದ ಅರಸನಿವನು ಹೆಸರು ಮಾಗಧನೆಂದು
ಸದೆಬಡಿಯಲಾರವು ಬಿಲ್ಲು ಬಾಣ
ಇವನಿಗೆ ಅನೇಕ ಆನೆಗಳ ತ್ರಾಣ

ಇವನ ಪ್ರಾಣದ ರಹಸ್ಯವೇನೂ ಹೊಸತಲ್ಲ ನಮಗೆ
ಆದರೂ ತಿಳಿವಂತೆ ಹೊಸ ಗುಟ್ಟು
ಕಾದಿರುವೆವು ವರುಷವರುಷವೂ ಆತಂಕಗೊಂಡು ಬಗೆ
ನಮ್ಮ ತಲ್ಲಣದಲ್ಲಿ ನಿಮ್ಮ ಮಟ್ಟು
ಯುಗದಾಚೆಗೆ ಕಾಲನಿಟ್ಟು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿತ್ರದುರ್ಗ ಜಿಲ್ಲೆಯ ಅವಿಸ್ಮರಣೀಯ ಸಾಹಿತ್ಯ ಸಿರಿ
Next post ಹಗಲು ದರೋಡೆ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys