ಯಾವ ಅಂಜಿಕೆಯೂ
ಈ ಪ್ರಾಣಿಗಿಲ್ಲ
ಮಾನವರ ಸರಿಸಮರು
ಕ್ರೂರ ಜಂತುವು ಇಲ್ಲ,
ಮಸಣದಲೂ ಮನೆಯ
ಕಟ್ಟಿಹನು ನೋಡ,
ದೆವ್ವಗಳೇ ನರ ಬಡಿದು
ಕುಂತಿಹವು ನೋಡ
ರೀತಿ ನೀತಿಗಳ ತತ್ವ
ತಂದವನು ಅವನೆ
ನೀತಿ ನಿಯಮಗಳ ಮೀರಿ
ಬೆಳೆದವನು ಅವನೇ
ಆಷಾಢಭೂತಿಗಳು
ಅರಸು ಮಕ್ಕಳ ಹಾಗೆ,
ಆಚಾರ ವಿಚಾರಗಳು
ಹಗಲು ವೇಷದ ಹಾಗೆ:
ಧರ್ಮಮರ್ಮ ವ್ಯಾಖ್ಯಾನ
ಸೊಗಸು ಉಪಾಖ್ಯಾನ
ರಂಗಮಂಚದಿ ಭಾಷ್ಯ
ಪರದೆ ಹಿಂದಿದೆ ಲಾಸ್ಯ
ಸೃಷ್ಠಿಯಲಿ ಹಿರಿತನವು
ಬುದ್ಧಿಮತ್ತೆಯ ವರವು
ಆದರೂ ಮತಿಗೇಡು,
ಬದುಕು ಬರಿಕೊರಡು.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.