Home / ಲೇಖನ / ವಿಜ್ಞಾನ / ಏಡ್ಸ್ ಮಾರಿಯಹುಟ್ಟು

ಏಡ್ಸ್ ಮಾರಿಯಹುಟ್ಟು

“ಏಡ್ಸ್” ಎಂದ ತಕ್ಷಣ ಜಗತ್ತಿನ ಜನ ಬೆಚ್ಚಿಬೀಳುತ್ತಾರೆ. ಏಕೆಂದರೆ ಇದಕ್ಕೆ ಮದ್ದೇ ಇಲ್ಲವೆಂಬ ಸತ್ಯ ಅರಿತಿದ್ದಾರೆ. ಇದಕ್ಕೆ ಮದ್ದನ್ನು ಕಂಡು ಹಿಡಿಯಲಾಗಿದೆ ಎಂಬ ಸತ್ಯಗಳು ಹೊರ ಬೀಳುತ್ತಲಿವೆ. ಏನೇ ಆದರೂ ಈಗ್ಗೆ೧೦ ವರ್ಷಗಳ ಹಿಂದೆ ಈ ರೋಗದ ಯಾವಶೇಷವೂ ಇರಲಿಲ್ಲ. ಈಗ ಕೋಟ್ಯಾಂತರ ಏಡ್ಸ್ ರೋಗಿಗಳು ಜೀವನಮ್ರಣಗಳಲ್ಲಿ ಸಿಕ್ಕಿ ತಮ್ಮ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದಾರೆ. ‘ಏಡ್ಸ್’ ಎಂದರೇನು? ಇದು ಎಲ್ಲಿ ಹುಟ್ಟಿತು? ಎಂಬ ಸಂಗತಿ ಬಹಳ ಜನಕ್ಕೆ ಗೊತ್ತಿಲ್ಲ ಇದಕ್ಕಾಗಿ ಇದರ ಉಗಮದ ಬಗೆಗೆ ವಿಜ್ಞಾನಿಗಳು ಸಂಶೋಧನೆ ನಡೆಸಿ ‘ಆಫ್ರಿಕಾ’ ವನ್ನು ಮೂಲ ಮಾಡುತ್ತಾರೆ.

H.I.V.(ಹ್ಯೂಮನ್ ಇಮಿನೊ ಡೆಫಿಸೆನ್ಸಿ) ಎಂಬ ಜೀವಾಣುಗಳಿಂದ H.I.V. Iಮತ್ತು H.I.V. IIಎಂಬ ಎರಡು ರೀತಿಯ ಏಡ್ಸ್ ವೈರಸ್‌ಗಳನ್ನು ಗುರುತಿಸಿದ್ದಾರೆ. ನೂಯಾರ್ಕಿನ ರಾಕ್‌ಫೆಲರ್ ವಿಶ್ವವಿದ್ಯಾಲಯದ ಟುಯೋಫ ‘ಜು’ ಮತ್ತು ಷವರ ಸಂಗಡಿಗರು ತಮ್ಮ ಅಧ್ಯಯನದ ಬಗ್ಗೆ ಇತ್ತೀಚಿಗೆ ವರದಿ ಮಾಡಿದ್ದಾರೆ. ಕಾಂಗೋದೇಶ ವಾಸಿಯೊಬ್ಬನ ೧೯೫೯ರಲ್ಲಿನ ರಕ್ತವನ್ನು ಪರೀಕ್ಷೆ ಮಾಡಿದನು. ಈ ಸಂದರ್ಭದಲ್ಲಿ ಅವನು H.I.V. ಯನ್ನು ಗುರುತಿಸಲು ಪಾಲಿಮೆರೇಸ್ ಚೇನ್ ರಿಯಾಕ್ಷನ್ ಎಂಬ ರಾಸಾಯನಿಕ ಕ್ರಿಯಾ ತಂತ್ರವನ್ನು ಬಳಸಿದ್ದರೂ. ಆಗ ಅವನಿಗೆ ಏಡ್ಸ್‌ನ್ನು ಹೋಲುವ ಸಂಕೇತಗಳು ದೊರೆತವು. ಗಣಕೀಕೃತ ಮಾಹಿತಿಯಿಂದ D.N.A. ಅಥವಾ ಜೀವಾಣು ಘಟಕವನ್ನು ವಿಶ್ಲೇಷಿಸಿತು. ಹಿಂದೆ ಅದು ಸಾಮಾನ್ಯ ಪೂರ್ವಜರಿಗೆ ಅಂಟಿಗೊಂಡಿತ್ತು ಎಂದು ತೀರ್ಮಾನಿಸಿದ್ದಾರೆ. ’H.I.V.1. ಮತ್ತು H.I.V.II ಪರಸ್ಪರಗಳಿಂದ ನಂತರ ಬೇರ್‍ಪಟ್ಟವು. ಆದ್ದರಿಂದ ಏಡ್ಸ್ ನಿವಾರಣೆಗಾಗಿ ಔಷಧಿಗಳನ್ನು ಕಂಡು ಹಿಡಿಯ ಬೇಕಾದರೆ ವಿವಿಧ ಜಾತಿಯ H.I.V.I ಜೀವಾಣುಗಳನ್ನು ಗುರಿಯಾಗಿಟ್ಟು ಕೊಳ್ಳಬೇಕಾಗುತ್ತದೆ. ಅಶುದ್ಧಸೂಜಿಗಳ ಚುಚ್ಚು ಮದ್ದು, ಲೈಂಗಿಕ ಸ್ವೇಚ್ಚಾಚಾರಕ್ಕೆ, ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಏಡ್ಸ್ ಹರಡುತ್ತದೆನ್ನುವುದನ್ನು ದೃಢಪಡಿಸಿಕೊಂಡರು. ಆದರೆ ದಕ್ಷಿಣ ಆಫ್ರಿಕಾದಲ್ಲಿಯೇ ಏಕೆ ಈ ರೋಗ ಹರಡಿತು ಎಂಬ ಸಮಂಜಸ ಉತ್ತರ ಇನ್ನು ದೊರೆತಿಲ್ಲ.

ಮೂಲತಃ ಏಡ್ಸ್ ಜೀವಾಣುಗಳು ಬೇರಾವುದೇ ಪ್ರಾಣಿಯಿಂದ ಹಾರಿ ಬಂದು ಮನುಷ್ಯನಿಗೆ ಅಂಟಿಕೊಂಡಿರಬಹುದು. ನಂತರ ಮನುಷ್ಯರಲ್ಲಿ ಇದು ತ್ವರಿತ ಗತಿಯಲ್ಲಿ ಬೆಳೆದು ಸಧ್ಯದ ಸ್ಥಿತಿಗೆ ತಲುಪಿರಬಹುದೆಂದು ಒಂದು ವಿಜ್ಞಾನ ಸಿದ್ಧಾಂತ ತಿಳಿಸುತ್ತದೆ. ಬಲವಾದ ಸಾಕ್ಷಿ ಎಂದರೆ ಚಿಂಪಾಂಜಿಗಳಿಗೆ (H.I.V) I ಮತ್ತು ಕೆಲವು ಜಾತಿಯ ವಾನರಗಳಿಗೆ (H.I.V.) II. ಈ ರೋಗ ತಗಲಿದ್ದು ಕಂಡು ಬಂದದ್ದನ್ನು ಸ್ಥಿತಿಗೊಳಿಸಿದ್ದಾರೆ. ಇವೆರಡೂ ಪ್ರಾಣಿಗಳು ಆಫ್ರಿಕಾದಲ್ಲಿ ಹತ್ತಿರ ಹತ್ತಿರವಾಗಿ ವಾಸಿಸುವ ಪ್ರಾಣಿಗಳಾಗಿವೆ. ಪ್ರಾಣಿ ಮೂಲದಿಂದ ಹರಡಿರಬಹುದಾದ ಈ ಏಡ್ಸ್ ಮಾರಿ ಇಂದು ಜಗತ್ತೇ ತಲ್ಲಣಗೊಳಿಸುತ್ತಿರುವುದಂತೂ ವಾಸ್ತವ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...