ಹತ್ತು ದಿವಸದಾಕಾರ ಮೊಹೋರುಮ

ಹತ್ತು  ದಿವಸದಾಕಾರ ಮೊಹೋರುಮ
ಗೊತ್ತನರಿಯದಾದರೆ ಕತ್ತೆ                |ಪ|

ಮತ್ತೆ ಬೊಗಳುವಾ ಶ್ವಾನಕವಿ ಯಾ-
ವತ್ತು ರಿವಯತು ಹೇಳುತಿಹ             |ಅ-ಪ.|

ಮೇದಿನಿಯೊಳು ಬೈದಾಡೋ ಸವಾಲೊಂದು
ಹೋದ ವರುಷ ಹೇಳಿದಿ ಬಂದು
ವಾದ ಬಿಡೋ ಈ ವರುಷ ಐಸುರದಿ
ಭೇದನರಿಯದಾದೆಲೆ ಕತ್ತೆ               |೧|

ಬೆಲ್ಲ ಓದಿಸುವ ಬಿಸ್ಮಿಲ್ಲನರಿಯದೆ
ಮುಲ್ಲನೊಲವಿಗೊಲ್ಲರ ಕತ್ತೆ
ಮುಲ್ಲ ಖಾಜಿ ಖತೀಬ ಮುಸಲ್ಮಾನ
ಹುಲ್ಲು ಹೇರುವ ಗೊಲ್ಲರ ಕತ್ತಿ           |೨|

ದುಡ್ಡಿಗೆ ಬಡ್ಡಿ ತಿಂಬುವ ತುರುಕರು
ದಡ್ಡತನದಿ ಒಡ್ಡರ ಕತ್ತೆ
ಗಡ್ಡ ಬಿಟ್ಟು ಸುಳ್ಳಾಡು ಮುಸಲ್ಮಾನ
ಮಡ್ಡಕೊರವರ‍್ಹೇ‍ರ‍್ಯಾಡೋ ಕತ್ತೆ         |೩|

ದುಡ್ಡು ಕಾಸಿಗೆ ತಿರಕೊಂಬುವ ಫಕೀರರು
ವೇಷತಾಳಿ ತಿರುಗುವ ಕತ್ತೆ
ವಸುಧಿಗೆ ಶಿಶುನಾಳಧೀಶನೊಳು
ಧ್ಯಾಸವಿಲ್ಲದ ಹೇಸರಗತ್ತೆ               |೪|
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಯಾಬಿನ್ ನಂ.೬
Next post ಹುಗಲಿಲ್ಲ ಬಿಯದರಿಗೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys