ಕೇಳು ಎದೆಯ ಪ್ರೇಮ ಕವನ

ನೋಡು ಮೌನ ಶಾಂತಿ ಸುಮನ
ಆಳ ಆಳ ಇಳಿದಿದೆ
ಕೇಳು ಎದೆಯ ಪ್ರೇಮ ಕವನ
ಮೇಲೆ ಮೇಲೆ ಏರಿದೆ

ಅಗೋ ಅಲ್ಲಿ ಗಗನದಲ್ಲಿ
ಮೌನ ಮಹಡಿ ಕರೆದಿದೆ
ಇಗೋ ಇಲ್ಲಿ ಮೊರಡಿಯಲ್ಲಿ
ಶಬ್ದ ಕರಡಿ ಮಡಿದಿದೆ

ಬಂತು ಬಂತು ಭಾವ ಗಾನ
ನಿತ್ಯ ಸತ್ಯ ಶಾಶ್ವತಾ
ಆತ್ಮ ವಸ್ತು ಜ್ಯೋತಿ ಶಿಸ್ತು
ಬಾಳ ಚೈತ್ಯ ಭೌಮತಾ

ನಗೆಯ ರಾಣಿ ನಾಗವೇಣಿ
ಮುಗಿಲ ಗಂಗೆ ಸುರಿದಳು
ವಿಮಲ ಅಮಲ ಕಮಲ ರಾಣಿ
ಆತ್ಮ ರಾಣಿ ಎರೆದಳು

ಬಂತು ಬಂತು ಸೊಂಪು ತಂಪು
ಕಂಪು ಹೂವು ಅರಳಿತೋ
ತಲೆಯ ಟೊಳ್ಳು ಟಳ್ಳನೆಂದು
ಜ್ಯೋತಿ ಪುಷ್ಪ ಬಿಚ್ಚಿತೋ

ಓಂ ಶಿವನೆ ಓಂ ಶಾಂತಿ
ಓಂ ಒಲವಿನಮೃತಂ
ಓಂ ಶಾಂತಿ ಓಂ ಶಾಂತಿ
ಓಂ ಮಿಲನ ಶಾಶ್ವತಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕಥೆ
Next post ನಡು ಬೇಸಗೆ, ಟೊಬಾಗೋ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys