ಕೇಳು ಎದೆಯ ಪ್ರೇಮ ಕವನ

ನೋಡು ಮೌನ ಶಾಂತಿ ಸುಮನ
ಆಳ ಆಳ ಇಳಿದಿದೆ
ಕೇಳು ಎದೆಯ ಪ್ರೇಮ ಕವನ
ಮೇಲೆ ಮೇಲೆ ಏರಿದೆ

ಅಗೋ ಅಲ್ಲಿ ಗಗನದಲ್ಲಿ
ಮೌನ ಮಹಡಿ ಕರೆದಿದೆ
ಇಗೋ ಇಲ್ಲಿ ಮೊರಡಿಯಲ್ಲಿ
ಶಬ್ದ ಕರಡಿ ಮಡಿದಿದೆ

ಬಂತು ಬಂತು ಭಾವ ಗಾನ
ನಿತ್ಯ ಸತ್ಯ ಶಾಶ್ವತಾ
ಆತ್ಮ ವಸ್ತು ಜ್ಯೋತಿ ಶಿಸ್ತು
ಬಾಳ ಚೈತ್ಯ ಭೌಮತಾ

ನಗೆಯ ರಾಣಿ ನಾಗವೇಣಿ
ಮುಗಿಲ ಗಂಗೆ ಸುರಿದಳು
ವಿಮಲ ಅಮಲ ಕಮಲ ರಾಣಿ
ಆತ್ಮ ರಾಣಿ ಎರೆದಳು

ಬಂತು ಬಂತು ಸೊಂಪು ತಂಪು
ಕಂಪು ಹೂವು ಅರಳಿತೋ
ತಲೆಯ ಟೊಳ್ಳು ಟಳ್ಳನೆಂದು
ಜ್ಯೋತಿ ಪುಷ್ಪ ಬಿಚ್ಚಿತೋ

ಓಂ ಶಿವನೆ ಓಂ ಶಾಂತಿ
ಓಂ ಒಲವಿನಮೃತಂ
ಓಂ ಶಾಂತಿ ಓಂ ಶಾಂತಿ
ಓಂ ಮಿಲನ ಶಾಶ್ವತಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕಥೆ
Next post ನಡು ಬೇಸಗೆ, ಟೊಬಾಗೋ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…