ಕೇಳು ಎದೆಯ ಪ್ರೇಮ ಕವನ

ನೋಡು ಮೌನ ಶಾಂತಿ ಸುಮನ
ಆಳ ಆಳ ಇಳಿದಿದೆ
ಕೇಳು ಎದೆಯ ಪ್ರೇಮ ಕವನ
ಮೇಲೆ ಮೇಲೆ ಏರಿದೆ

ಅಗೋ ಅಲ್ಲಿ ಗಗನದಲ್ಲಿ
ಮೌನ ಮಹಡಿ ಕರೆದಿದೆ
ಇಗೋ ಇಲ್ಲಿ ಮೊರಡಿಯಲ್ಲಿ
ಶಬ್ದ ಕರಡಿ ಮಡಿದಿದೆ

ಬಂತು ಬಂತು ಭಾವ ಗಾನ
ನಿತ್ಯ ಸತ್ಯ ಶಾಶ್ವತಾ
ಆತ್ಮ ವಸ್ತು ಜ್ಯೋತಿ ಶಿಸ್ತು
ಬಾಳ ಚೈತ್ಯ ಭೌಮತಾ

ನಗೆಯ ರಾಣಿ ನಾಗವೇಣಿ
ಮುಗಿಲ ಗಂಗೆ ಸುರಿದಳು
ವಿಮಲ ಅಮಲ ಕಮಲ ರಾಣಿ
ಆತ್ಮ ರಾಣಿ ಎರೆದಳು

ಬಂತು ಬಂತು ಸೊಂಪು ತಂಪು
ಕಂಪು ಹೂವು ಅರಳಿತೋ
ತಲೆಯ ಟೊಳ್ಳು ಟಳ್ಳನೆಂದು
ಜ್ಯೋತಿ ಪುಷ್ಪ ಬಿಚ್ಚಿತೋ

ಓಂ ಶಿವನೆ ಓಂ ಶಾಂತಿ
ಓಂ ಒಲವಿನಮೃತಂ
ಓಂ ಶಾಂತಿ ಓಂ ಶಾಂತಿ
ಓಂ ಮಿಲನ ಶಾಶ್ವತಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದೇ ಕಥೆ
Next post ನಡು ಬೇಸಗೆ, ಟೊಬಾಗೋ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…