ತಲ್ಲಣ

ಎಲ್ಲಾ ಹಕ್ಕಿಗಳು ಹಾರಿ ಹೋದವು
ಬರಡು ಮರದಲಿ ಹಸಿರು ಕಾಣದೆ
ಎಲ್ಲಾ ಚಿಕ್ಕಿಗಳು ಮಾಯವಾದವು
ಪ್ರೀತಿ ಕಳೆದ ನೀಲಿ ಆಗಸದಲಿ.

ಅಂಬರದ ಮುನಿಸಿಗೆ ತೆರೆಯಲಿಲ್ಲ
ಅರಿವಿನ ರೆಕ್ಕೆಗಳು ಪಟಪಟ
ಅಕ್ಷಗುಂಟ ಇಳಿದ ಹನಿಗಳು
ಮೋಡವಾಗಲಿಲ್ಲ ಬಿರು ಬಿಸಿಲಿನಲಿ.

ಹಾರಿ ಹೋದ ಹಕ್ಕಿಯ ರೆಕ್ಕೆಯ ನೆರಳು
ನೆತ್ತಿ ಸವರಲಿಲ್ಲ ಇಳಿ ಸಂಜೆಯಲಿ
ಕೌನೆರಳಿನ ಕೌದಿಯ ಅಡಿಯಲಿ
ಮುದುಡಿ ಮಂಕಾಯಿತು ಚಿಕ್ಕಿ ಮಿನುಗುಗಳು.

ಹಕ್ಕಿ ಚಿಕ್ಕಿ ಬಂಧ ಅನುಬಂಧಕೆ
ಪ್ರೇಮ ಕಾವ್ಯ ಅರಳಲಿಲ್ಲ ಶಬ್ದಗಳಲಿ
ಮನದಾಚೆಯ ಮಾತುಗಳು ಪದಗಳಾಗಲಿಲ್ಲ
ನಾ ನೀ ಎದುರು ಬದರು ಕುಳಿತಾಗ.

ಯಾವ ಎಳೆಗಳಲಿ ಪೋಣಿಸಲಿ ಚಿಕ್ಕಿಗಳ
ಯಾವ ಹಾಯಲಿ ತೇಲಿಸಾಲಿ ಹಕ್ಕಿಗಳ
ಆಲಯ ಬಯಲಲಿ ಭಾವ ಅನುಭಾವದ
ಕಾರ್ತೀಕ ಹೇಗೆ ಬೆಳಗಲಿ ವಸಂತ ಚಿಗುರಿಸಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣಿ – ಪಕ್ಷಿಗಳ ನಿದ್ರೆಯ ವಿಭಿನ್ನ ಕ್ರಮ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೫

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…