ಕಂಬನಿಯ ಲವಣ

ನಲ್ಮೆಯ ಗೂಡು ನಾದಮಯ
ನಲ್ಲನಾ ನುಡಿಯೂ ಪ್ರೇಮಮಯ
ಸಂಚರೀಪ ವಾಂಛೆಗೆ ಅಳುಕುವುದು
ಮೈ ಮನ, ಎನ್ನೋಲವು ಆ ಒಲವ
ಬೇಡುವುದು ಅನುದಿನ.

ಈ ಹೊತ್ತು ಅವನಿರದೆ ತಿಂಗಳನು
ಬಂದಿರಲು, ಹುಣ್ಣಿಮೆಯು
ಹಗೆಯಾಗಿ ಕೊಲ್ಲುತಿರಲು
ಹೇಗೋ ಏನೋ ಹಾಗೆ
ಹಂಬಲಿಕೆ ಕನವರಿಕೆ ಅವನೊಲವಿನಾ ಬಯಕೆ
ಸೆಲೆಯ ಕಡಲು
ಹಾಸು ಹೊದಿಕೆಯು ಕೂಡ ಉರಿಯ ಬಲೆಯು.
ಕಣ್ಣೂರ ಕೊನೆಯಲ್ಲಿ ಬಿಂಬವಾಗುಳಿದಿಹನು
ಕಂಬನಿಯ ಲವಣದಲೂ ಉನ್ಮತ್ತ ಸವಿಯು
ಸಾಗುತಿದೆ ಬರಿಹಾದಿ ಕೆಮ್ಮಣ್ಣ ಹುಡಿಯೆದ್ದು
ಮಲ್ಲಿಗೆಯ ಮೈಗೆಂಪು ಕರಟಿ ಕಪ್ಪು
ಯಾವಗಾಳಿಯ ಬಲೆಗೆ ಸಿಕ್ಕಿತದು ಎಸಳು
ಜರ್ಜರಿತ ಜಾತ್ರೆಯಲ್ಲಿ ನಿರ್ಜೀವ ಕೊರಳು

ಪ್ರೇಮದಲಿ ಛಲಬರದು, ಮೋಹದಲಿ ಮದವಿರದು
ಮಂಗಳೆಗೆ ಮದನನಾ ದಾಹವಿಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಕರಾಗುವಾ: ಪಾಪಬೋಧೆ
Next post ಅಧ್ಯಯನ, ಅಭಿವೃದ್ಧಿ ಮತ್ತು ಹಸಿವಿನ ಭಾಷೆ (ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ)

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys