ಚೆಲುವ ನಾರಾಯಣ

ಧೂಪ-ದೀಪದಲ್ಲಿದ್ದ
ಹೂವು-ಗಂಧದಲ್ಲಿದ್ದ
ಚೆಲುವ ನಾರಾಯಣ

ಕರ್‍ಪೂರದಾರತಿಯಲ್ಲಿದ್ದ
ಕುಂಕುಮದಕ್ಷತೆಯಲ್ಲಿದ್ದ
ಚೆಲುವ ನಾರಾಯಣ

ಗಂಟೆ ಜಾಗಟೆಯಲ್ಲಿದ್ದ
ಮಂತ್ರ ಘೋಷದಲ್ಲಿದ್ದ
ಚೆಲುವ ನಾರಾಯಣ

ನಿತ್ಯ ಪೂಜೆಯಲ್ಲಿದ್ದ
ಹೊತ್ತ ಹರಕೆಯಲ್ಲಿದ್ದ
ಚೆಲುವ ನಾರಾಯಣ

ಮುದ್ದನುಕ್ಕಿಸುತ್ತಿದ್ದ
ನೆಟ್ಟಗೆ ದಿಟ್ಟಿಸುತ್ತಿದ್ದ
ಮರುಳಾಗದವರುಂಟೆ,
ಚೆಲುವ ನಾರಾಯಣ?

ಮುದ್ದು ಮುಖವನೆ
ನೆನೆದು
ಗಂಡನ ನೆನಪನೆ
ತೊರೆದು
ಕರೆಯಬಹುದೆ
ಚೆಲುವ ನಾರಾಯಣ?

ಮುದ್ದು ಮಗುವಿನ ತಾಯಿ
ಮನಸು
ತತ್ತರಿಸುವ ಹಾಯಿ
ಕರೆಯಬಹುದೆ
ಚೆಲುವ ನಾರಾಯಣ?

ಬಂಧುವನೆ ಬದಿಗಿರಿಸಿ
ಊರ ಮಂದಿಯನೂ
ಕಡೆಗಣಿಸಿ
ಕರೆಯಬಹುದೆ
ಚೆಲುವ ನಾರಾಯಣ?

ಯಾಕೆಂದು ತಿಳಿಯದು
ಏನೊಂದು ಹೊಳೆಯದು
ಒಲವಿನಾವೇಶ!
ವಿವಶಳಾದಳೆ ಅವಳು
ಚೆಲುವ ನಾರಾಯಣ?

ಹೊರಗೇನೂ ಕಾಣಿಸದು
ಒಳಗೇನೊ ಅನಿಸುವುದು
ಅದಕೂ ಅವನೆ ಕಾರಣ
ಚೆಲುವ ನಾರಾಯಣ

ನೆಮ್ಮಿ ನಲುಗಿರಬಹುದು
ಒಲಿದು ಕೆಟ್ಟವರುಂಟೆ?
ಒಲುಮೆ ಇಲ್ಲದಿರೆ
ಅವನ ಮುಟ್ಟುವುದುಂಟೆ?
ಎಂಟೆದೆಯ ತುಂಟನೆ
ಚೆಲುವ ನಾರಾಯಣ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧
Next post ಮೊಗ್ಗು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys