Home / ಕವನ / ಕವಿತೆ / ಚಂದ್ರನನ್ನು ಕರೆಯಿರಿ ಭೂಮಿಗೆ

ಚಂದ್ರನನ್ನು ಕರೆಯಿರಿ ಭೂಮಿಗೆ

ಪುಟ್ಟ ಮಕ್ಕಳು ಚಂದ್ರನನ್ನು
ಕರೆಯುತ್ತಿದ್ದಾರೆ ಭೂಮಿಗೆ.

ನಾನೂ ಮಗುವಾಗಿದ್ದಾಗ
ಮೊಗ್ಗಿನಂತಹ ಬೆರಳುಗಳನ್ನು
ಮಡಿಸಿ ಅರಳಿಸಿ
ಚಂದ್ರನನ್ನು ಕರೆದಿದ್ದೆ ಭೂಮಿಗೆ.

ನನ್ನ ತಮ್ಮಂದಿರು, ತಂಗಿ
ಗೆಳೆಯ ಗೆಳೆತಿಯರು
ಯಾರೆಲ್ಲ ಕರೆದಿದ್ದರು
ಭೂಮಿಗೆ.

ಗೂಡಲ್ಲಿ ಕಣ್ಣರಳಿಸಿ
ಕೂತಿರುವ ಮರಿಹಕ್ಕಿ
ನದಿಯೊಳಗೆ ಈಸುತ್ತಿರುವ
ಮರಿ ಮೀನು, ಯಾರೆಲ್ಲ
ಕರೆದಿದ್ದರು ಚಂದ್ರನನ್ನು ಭೂಮಿಗೆ.

ಅಂದು ತೊದಲು ನುಡಿಯುತ್ತಿದ್ದ
ಮರಿಕೋಗಿಲೆ ಇಂದು
ಪಂಚಮದಲ್ಲಿ ಹಾಡಿದೆ.

ಅಂದು ನದಿಯೊಳಗೆ ಈಸುತ್ತಿದ್ದ
ಮರಿ ಮೀನು ಇಂದು
ಸಮುದ್ರವ ಸೇರಿದೆ.

ಅಂದು ಚಂದ್ರನನ್ನು ಕರೆಯುತ್ತಿದ್ದ
ನನ್ನ ಬೆರಳುಗಳು ಇಂದು
ಭೂಗೋಳ, ವಿಜ್ಞಾನ ಪುಸ್ತಕಗಳ
ಪುಟ ತಿರುವಿ ಒರಟಾಗಿವೆ.

ಮುಗಿಲು ಮುಟ್ಟಿ ನಿಂತಿರುವ ಹೆಮ್ಮರ
ಮೊಳೆಕೆಯೊಡೆದ ದಿನಗಳನ್ನು
ಮೆಲುಕು ಹಾಕುವ ಹಾಗೆ
ನಾನೊಮ್ಮೆ ಹಿಂದಿರುಗಿ ನೋಡಲೆ?

ಆಸೆ, ದುಃಖ, ಹರ್‍ಷ, ವಿಷಾದದ
ಎಲೆಗಳನ್ನು ಕಳಚಿಕೊಂಡು
ಧ್ಯಾನದಲ್ಲಿರುವಂತಿದೆ ಮರ
ನೋಡಿಯೂ ಸುಮ್ಮನಿರಲೆ?

ಕಂದಮ್ಮಗಳೆ….
ಕೇಕೆ ಹಾಕಿ ಕುಣಿಕುಣಿದು
ಕರೆಯಿರಿ ಚಂದ್ರನನ್ನು ಭೂಮಿಗೆ
ಹೂವಿನ ಹಾಗೆ ಬೆರಳುಗಳನ್ನು
ಅರಳಿಸಿ ನೀವೇ
ಕರೆಯಿರಿ ಚಂದ್ರನನ್ನು ಭೂಮಿಗೆ.

ನಾನು ನಾನಿರುವಂತೆಯೇ
ನೋಡುವೆ ಒಂದು ಘಳಿಗೆ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...