Home / ಕವನ / ಕವಿತೆ / ಚಂದ್ರನನ್ನು ಕರೆಯಿರಿ ಭೂಮಿಗೆ

ಚಂದ್ರನನ್ನು ಕರೆಯಿರಿ ಭೂಮಿಗೆ

ಪುಟ್ಟ ಮಕ್ಕಳು ಚಂದ್ರನನ್ನು
ಕರೆಯುತ್ತಿದ್ದಾರೆ ಭೂಮಿಗೆ.

ನಾನೂ ಮಗುವಾಗಿದ್ದಾಗ
ಮೊಗ್ಗಿನಂತಹ ಬೆರಳುಗಳನ್ನು
ಮಡಿಸಿ ಅರಳಿಸಿ
ಚಂದ್ರನನ್ನು ಕರೆದಿದ್ದೆ ಭೂಮಿಗೆ.

ನನ್ನ ತಮ್ಮಂದಿರು, ತಂಗಿ
ಗೆಳೆಯ ಗೆಳೆತಿಯರು
ಯಾರೆಲ್ಲ ಕರೆದಿದ್ದರು
ಭೂಮಿಗೆ.

ಗೂಡಲ್ಲಿ ಕಣ್ಣರಳಿಸಿ
ಕೂತಿರುವ ಮರಿಹಕ್ಕಿ
ನದಿಯೊಳಗೆ ಈಸುತ್ತಿರುವ
ಮರಿ ಮೀನು, ಯಾರೆಲ್ಲ
ಕರೆದಿದ್ದರು ಚಂದ್ರನನ್ನು ಭೂಮಿಗೆ.

ಅಂದು ತೊದಲು ನುಡಿಯುತ್ತಿದ್ದ
ಮರಿಕೋಗಿಲೆ ಇಂದು
ಪಂಚಮದಲ್ಲಿ ಹಾಡಿದೆ.

ಅಂದು ನದಿಯೊಳಗೆ ಈಸುತ್ತಿದ್ದ
ಮರಿ ಮೀನು ಇಂದು
ಸಮುದ್ರವ ಸೇರಿದೆ.

ಅಂದು ಚಂದ್ರನನ್ನು ಕರೆಯುತ್ತಿದ್ದ
ನನ್ನ ಬೆರಳುಗಳು ಇಂದು
ಭೂಗೋಳ, ವಿಜ್ಞಾನ ಪುಸ್ತಕಗಳ
ಪುಟ ತಿರುವಿ ಒರಟಾಗಿವೆ.

ಮುಗಿಲು ಮುಟ್ಟಿ ನಿಂತಿರುವ ಹೆಮ್ಮರ
ಮೊಳೆಕೆಯೊಡೆದ ದಿನಗಳನ್ನು
ಮೆಲುಕು ಹಾಕುವ ಹಾಗೆ
ನಾನೊಮ್ಮೆ ಹಿಂದಿರುಗಿ ನೋಡಲೆ?

ಆಸೆ, ದುಃಖ, ಹರ್‍ಷ, ವಿಷಾದದ
ಎಲೆಗಳನ್ನು ಕಳಚಿಕೊಂಡು
ಧ್ಯಾನದಲ್ಲಿರುವಂತಿದೆ ಮರ
ನೋಡಿಯೂ ಸುಮ್ಮನಿರಲೆ?

ಕಂದಮ್ಮಗಳೆ….
ಕೇಕೆ ಹಾಕಿ ಕುಣಿಕುಣಿದು
ಕರೆಯಿರಿ ಚಂದ್ರನನ್ನು ಭೂಮಿಗೆ
ಹೂವಿನ ಹಾಗೆ ಬೆರಳುಗಳನ್ನು
ಅರಳಿಸಿ ನೀವೇ
ಕರೆಯಿರಿ ಚಂದ್ರನನ್ನು ಭೂಮಿಗೆ.

ನಾನು ನಾನಿರುವಂತೆಯೇ
ನೋಡುವೆ ಒಂದು ಘಳಿಗೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...