ದುಷ್ಯಂತನಿಗೆ

ನಮ್ಮ ರೋಗಕ್ಕೆ ಓಣಿಯಲಿ
ಬೇಯುವ ಮೊಟ್ಟೆಯ ಅಮ್ಲೆಟ್
ವಾಸನೆ ಹೊಟ್ಟೆಯು ತಳಮಳ
ಹುಟ್ಟು ಹಾಕುತ್ತದೆ ಪ್ರೇಮವಿರದ
ಕೂರೂಪ ಮುಖ ಎದೆಯ ತುಂಬ
ಉರಿವ ಸೂರ್ಯ ಬಿಸಿ ಹರಡುತ್ತಾನೆ.

ಕಾಲ ಮತ್ತು ಪ್ರೇಮ ಉಗಿಯು ಹಗಲು
ಉರಿದ ನೆನಪಿನ ತುಂಡುಗಳು
ಪ್ರತಿ ನಿಮಿಷ ಮತ್ತು ಮನಸ್ಸುಗಳು
ಹುರಿದ ಕರಿದ ಭಜೆಯ ಕರಕಲು
ಮಾಸಿದ ತುಟಿಗಳು ತಬ್ಬಿವೆ.
ಮನೆಯ ಮುಂದಿನ ದಾರಿತುಂಬ ಕೆಂಪುಧೂಳು.

ಯಾವ ದೇವರ ಮನೆಯ ಬಾಗಿಲೂ
ತೆರೆದಿರುವದಿಲ್ಲ ತಿಳಿಗೇಡಿ ಪ್ರೇಮದ ನಿವೇದನೆಯಲಿ
ಹಾಸಿಗೆಯಲಿ ಅತ್ತ ಕಣ್ಣೀರು ಹನಿಗಳು
ಜೇನುಗೂಡು ಕಟ್ಟಿವೆ ರೋಗದ ಮನೆಯಲ್ಲಿ
ಕೆಟ್ಟ ಊಟಕ್ಕಿಂತ ಉಪವಾಸ ಮೇಲು
ಒಂಟಿಕಾಲಿನ ಬಕಧ್ಯಾನ ಸರ್ವಪ್ರಧಾನ.

ಏನು ಬೇಡಲಿ ನಿನ್ನ ಬಳಿಗೆ ಬಂದು
ಕೂಡಲು ಏನೂ ಇಲ್ಲವಲ್ಲ ನಿನ್ನಲ್ಲಿ
ಕಳೆದು ಹೋದ ಅದೃಷ್ಟ ಕರಗಿದ ಕಾಡಿಗೆ
ನಡುವೆ ಕಂಡ ಬದುಕು ನಿನ್ನದೂ ಅಲ್ಲ
ನನ್ನದೂ ಅಲ್ಲ ಏಕೆ ಹುಡುಕಲಿ ಊರೂರು
ಅಲೆಯುತ್ತ ಸತ್ತಪೈರಿಗೆ ಸುಟ್ಟು ಕನಸುಗಳಿಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಕನಸು

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys