Home / ಲೇಖನ / ವಿಜ್ಞಾನ / ತಂತ್ರಜ್ಞಾನದ ಭದ್ರತೆಯ ಭವನಗಳು

ತಂತ್ರಜ್ಞಾನದ ಭದ್ರತೆಯ ಭವನಗಳು

ಭಯೋತ್ಪಾದಕರ, ಕಳ್ಳಕಾಕರ ಭಯದಿಂದಾಗಿ ಮನೆಗಳನ್ನು ಎಷ್ಟೇ ಭದ್ರವಾಗಿ ಕಟ್ಟಿದರೂ ಒಂದೊಂದು ಸಲ ಮೋಸವಾಗಿ ಬಿಡುತ್ತದೆ. ಎಂತಹ ಭದ್ರತೆ ಇದ್ದರೂ ಕಳ್ಳತನ ಅಥವಾ ಕೊಲೆ ಜರುಗೇ ಇರುತ್ತದೆ. ಇಂಥದ್ದನ್ನೆಲ್ಲ ಹೋಗಲಾಡಿಸಿ ಭದ್ರತೆಯ ಭವನಗಳನ್ನು ಕಟ್ಟಬೇಕೆಂಬ ಆಲೋಚನೆಯಿಂದ ವಿಜ್ಞಾನಿಗಳು ಸಹಾಸಪಟ್ಟರು ಇವರ ಸಾಹಸದ ಪ್ರತಿಫಲವಾಗಿ ಅತ್ಯಾಧುನಿಕ ತಂತ್ರಜ್ಞಾನದ ಭದ್ರತೆಯ ಭವನಗಳು ಸಾಕಾರಗೊಂಡಿವೆ. ಕೊರಿಯಾದ `POSCO’ ಕಟ್ಟಡಗಳು, ಬಾಂಬೆಯಲ್ಲಿರುವ C.M.C. ಕಟ್ಟಡ, ಪೂನಾದ ಟಾಟಾ ಸಂಶೋಧನಾ ಕಟ್ಟಡಗಳು, ಕಲ್ಕತ್ತಾದ ೨೨ ಅಂತಸ್ತುಗಳ ಭದ್ರತೆಯ ಕಟ್ಟಡಗಳು ವಿನೂತನ ತಂತ್ರಜ್ಞಾನದಿಂದ ಸದ್ಯಕ್ಕೆ ಭಯಮುಕ್ತವೆನಿಸಿವೆ.

ಇಂತಹ ಕಟ್ಟಡಗಳ ಕೊಠಡಿಯೊಳಗೆ ಯಾರು ಇರದಿದ್ದಲ್ಲಿ ಸ್ವಯಂಚಾಲಿತವಾಗಿ ದೀಪಗಳು, ಫ್ಯಾನುಗಳು, ವಾತಾನುಕೂಲ ಯಂತ್ರಗಳು ನಿಂತುಹೋಗುತ್ತವೆ. ಕೊಠಡಿಯೊಳಗಿನ ಬೆಳಕು ಇಂತಿಷ್ಟೇ ಇರಬೇಕೆಂದರೆ ಕಿಟಕಿಯ ಕರ್ಟನ್‌ಗಳು ತಾನೇ ತಾನೇ ಮುಚ್ಚಿಕೊಳ್ಳುತ್ತವೆ. ಸೂರ್ಯಪ್ರಕಾಶ ಕಡಿಮೆಯಾಗಿ (ಮೋಡಗಳಾದಾಗ, ಅಥವಾ ಕತ್ತಲಾದಾಗ ದೀಪಗಳು ತಾನೇ ತಾನೆ ಆನ್ ಆಗುತ್ತವೆ. ಈ ಎಲ್ಲ ಕೆಲಸಗಳನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ಕಿಟಕಿಯ ಪರದೆಗಳ ಚಲನೆಗೆ ಮೋಟಾರುಗಳನ್ನು ಜೋಡಿಸಿ ಕಂಪ್ಯೂಟರ್ಗಳಿಗೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಕೊಠಡಿಯೊಳಗಿನ ಉಷ್ಣ, ಶೀತ, ಸಮಶೀತೋಷ್ಣ ಹವೆಯ ಅಗತ್ಯವನ್ನರಿತು ವಾತಾನುಯಂತ್ರವು ಸಮದೂಗಿಸುತ್ತದೆ. ನಿಮ್ಮ ಸ್ನೇಹಿತರು ಕಟ್ಟಡದ ಯಾವುದೇ ಮೂಲೆಯಲ್ಲಿದ್ದರೂ ಅದರೊಂದಿಗೆ (ಟರ್ಮಿನಸ್‌ನ ಬಳಿ ಇರುವ ಇರುವಿಕೆಯನ್ನು ಪತ್ತೆ ಹಚ್ಚಿ) ಅವರೊಂದಿಗೆ ವಿಡಿಯೋ ಫೋನ್ ಮೂಲಕ ಮಾತನಾಡಬಹುದು. ಹತ್ತಿರದ ಊರುಗಳಲ್ಲಿಯ ಪ್ರಮುಖರೊಂದಿಗೆ ವಿಡಿಯೋ ಮೀಟಿಂಗ್ ಮಾಡಬಹುದು. ವ್ಯಕ್ತಿಗಳ ಚಿತ್ರಗಳು ಪರಸ್ಪರ ಕಾಣುತ್ತಿರುತ್ತವೆ. (ಟಿ.ವಿ.ಯಲ್ಲಿಕಾಣುತ್ತವೆ) ಈ ಕಾರ್ಯಾಲಯದಲ್ಲಿ ಕೆಲಸ ಮಾಡುವಾಗ ಪ್ರತಿಯೊಬ್ಬ ಉದ್ಯೋಗಿಯ ಬಳಿಯೂ ಒಂದು ಐಡೆಂಟಿಟಿ ಕಾರ್ಡು ಇರಬೇಕಿರುವುದು ಅನಿವಾರ್ಯ. ಕಟ್ಟಡದ ಯಾವುದೇ ಒಂದು ಕೋಣೆಗೆ ಪ್ರವೇಶ ಪಡೆಯಲು ಈ ಕಾರ್ಡನ್ನು ಅದಕ್ಕೆಂದೇ ನಿರ್ಮಿಸಿರುವ ಕಾರ್ಡ್‌ರೀಡರ್ಗಳಲ್ಲಿ ತೂರಿಸಬೇಕು. ಈ ಕಾರ್ಡಿನಲ್ಲಿರುವ ಕೋಡನ್ನು ಓದುವ ರೀಡರ್‌ಗಳು ಅವರಿಗೆ ಪ್ರವೇಶಾನುಮತಿ ಇದ್ದರೆ ಬಾಗಿಲು ತೆಗೆಯುತ್ತವೆ.

ಇಂತಹ ಕಟ್ಟಡಗಳ ನಿರ್ಮಾಣ ಅಧಿಕ ವೆಚ್ಚದಿಂದ ಕೂಡಿವೆ. ಇಲ್ಲಿಯ ವಿಶೇಷತೆಗಳಿಂದಾಗಿ ಜಗತ್ತಿನ ಎಲ್ಲರ ಗಮನ ಸೆಳೆಯುತ್ತವೆ. ಎಂಬ ರೋಬೋ ವರ್ಜಿನಿಯಾದ ಸೈಬರ್ ಮೋಶನ್ ಸಂಸ್ಥೆ ತಯಾರಿಸುವ ಈ ರೋಬೋ ೭೬ ಅಂಗುಲ ಎತ್ತರ ೩೪ ಅಂಗುಲ ಅಗಲವಾಗಿದೆ. ನಿರಂತರವಾಗಿ ೧೫ ಗಂಟೆಗಳ ಕಾಲ ಕೆಲಸ ಮಾಡುವ ಇದು ಕೆಲಸ ಸ್ಥಬ್ದಗೊಳಿಸಿದರೆ (ಬ್ಯಾಟ್ರಿ ಮುಗಿದು) ನಂತರ ಇದಕ್ಕೆ ಪುನಹ ಚಾರ್ಜ್ ಮಾಡಬಹುದು. ಕಟ್ಟಡದ ೧೦೦ ಅಡಿ ವ್ಯಾಪ್ತಿಯೊಳಗೆ ತಿರುಗಾಡುವ ಈ ರೊಬೋ ತನ್ನ ಕಾರ್ಯದ ವರದಿಯನ್ನು ಕಂಟ್ರೋಲ್ ಸೆಂಟರ್‌ನಲ್ಲಿರುವ ಮುಖ್ಯ ನಿಯಂತ್ರಕನಿಗೆ ತಲುಪಿಸಲಾಗುತ್ತದೆ. ಈ SRZಚಕ್ರಗಳ ಮೇಲೆ ಚಲಿಸುತ್ತಿದ್ದು ೧೦೦ ಅಡಿಯೊಳಗಿನ ಯಾವುದೇ ಚಲನೆಯನ್ನು ಪತ್ತೆಹಚ್ಚಿ ವರದಿಮಾಡುತ್ತದೆ. ೦.೨೩ ಅಶ್ವಶಕ್ತಿಯ ಮೋಟಾರು ಹೊಂದಿರುವ ಇದು ಸೆಕೆಂಡಿಗೆ ೨ ೧/೨ ಅಡಿ ವೇಗದಲ್ಲಿ ಚಲಿಸುತ್ತದೆ. ಇದು ಕಟ್ಟಡದ ಒಳಗಿನ ಕಾವಲುಗಾರನಾದರೆ ಕಟ್ಟಡದ ಹೊರಗೆ ‘ಗೀಕೋ’ ಎನ್ನುವ ರೋಬಟ್ ಕಾರ್ಯನಿರ್ವಹಿಸುತ್ತದೆ. ಸೈಜುಗಳೆರಡರಲ್ಲಿಯೂ ಕಾರ್ಯನಿರ್ವಹಿಸುವ ಇದನ್ನು ರೇಡಿಯೋ ತರಂಗಗಳ ಮೂಲಕ ನಿಯಂತ್ರಿಸಲಾಗುತ್ತದೆ. ೨೦ ಅಶ್ವಶಕ್ತಿ ಇದ್ದು ೮ ಚಕ್ರಗಳ ಮೇಲೆ ಚಲಿಸುತ್ತದೆ. ಇದರಿಂದ ಭೂಮಿಯ ಸ್ಥಿತಿಗತಿಗಳನ್ನು ಅರಿಯಲೂ ಬಳೆಸಿಕೊಳ್ಳುತ್ತಾರೆ. ಈ ರೀತಿಯ ಯಂತ್ರಗಳು ಕಟ್ಟಡ ಒಳಹೊರಗೆ ಓಡಾಡುವ ವ್ಯಕ್ತಿಗಳು ಬಚ್ಚಿಟ್ಟುಕೊಂಡ ಆಯುಧಗಳ ಪತ್ತೆಯನ್ನು ಹೊಸ ತಂತ್ರದಿಂದ ಮಾಡುತ್ತದೆ. ಕಡಿಮೆ ತರಂಗದ ವಿದ್ಯುತ್ ಕಾಂತಿಯ ಅಲೆಗಳ ಮೇಲೆ ಅಭಿವೃದ್ಧಿ ಮಾಡಲಾಗಿರುವ ಈ ನವೀನ ತಂತ್ರಜ್ಞಾನದಲ್ಲಿ ಎಕ್ಸ್‌ರೇ, ಆಗಲಿ ವ್ಯಕ್ತಿಯನ್ನು ಮುಟ್ಟಿನೋಡುವುದಾಗಲಿ ಮಾಡದೇ ಕಡಿಮೆ ಶಕ್ತಿಯ ಕಡಿಮೆ ತರಂಗಾಂತರದ ವಿದ್ಯುತ್ ಕಾಂತಿಯ ಅಲೆಗಳನ್ನು ಪರಿಶೀಲಿಸಬೇಕಾದ ವ್ಯಕ್ತಿಯೆಡೆಗೆ ರವಾನಿಸುತ್ತದೆ. ನಂತರ ಪ್ರತಿಫಲಿತ ಅಲೆಗಳ ಶಕ್ತಿ ಮತ್ತು ಸಮಯದ ಏರಿಳಿತವನ್ನು ನೋಡಿಕೊಂಡು ವ್ಯಕ್ತಿಯಲ್ಲಿರುವ ವಸ್ತುವಿನ ಗುಣಧರ್ಮದ ಬಗೆಗೆ ತಿಳಿದುಕೊಳ್ಳಬಹುದು.

ಈ ರೀತಿಯ ತರಂಗಗಳಿಗೆ ತುತ್ತಾದ ದೇಹ ಮತ್ತು ಆಯುಧಗಳ ಚಿತ್ರ ಸ್ಪಷ್ಟವಾಗಿದ್ದು ಆಯುಧಗಳ ಪತ್ತೆಯಾಗುತ್ತದೆ. ಈ ಯಂತ್ರವು ಪ್ಲಾಸ್ಟಿಕ್ ಸ್ಟೋಗಳನ್ನು ಸಹ ಪತ್ತೆಹಚ್ಚುತ್ತದೆ.
*****

Tagged:

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...