ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ
ದೇಹವನು ಮಾತ್ರ ಕರೆಯುವುದು ಭೂಮಿ
ಆಹ್! ಯೊಹಾನಸ್ ಕೆಪ್ಲರ್
ಆಕಾಶವನಳೆದವನು ಭೂಮಿಯ
ನೆರಳನಳೆಯುತ್ತಿರುವೆಯ !

ಆ ವಾಕ್ಯಗಳನೆಂತು ಮರೆಯುವುದು
ಆ ಅರ್ಥಗಳನೆಂತು ಬರೆಯುವುದು
ಒಂದು ಹೆಜ್ಜೆಯಲೆ
ಕಲ್ಪಗಳ ದಾಟಿದವನೆ
ಕವಿಯೆ, ವಿಜ್ಞಾನಿಯೆ, ತತ್ವಜ್ಞಾನಿಯೆ
ಎಲ್ಲವನು ಕಂಡವನು ನೀನು
ಕಾಣುವ ಬಗೆ ಹೇಳು

ರೆಕ್ಕೆಗಳುಂಟೆ ಕಲ್ಪನೆಗೆ
ಹಕ್ಕಿಯಾಗಿ ನೆಗೆಯುವುದೆ
ನೋಡನೋಡುತ್ತ ಕೇವಲ
ಚುಕ್ಕೆಯಾಗುವುದೆ
ಸಾಗುವುದೆ ಅದು
ಯಾವ ಅಗೋಚರ ಖಂಡಗಳತ್ತ
ಯಾವ ಅನೂಹ್ಯ ಗೋಲಗಳತ್ತ
ಯಾವ ನಕ್ಷತ್ರಗಳು ಹೊಳೆಯುವತ್ತ
ಯಾವ ಗ್ರಹಗತಿಗೆ ಸಿಕ್ಕಿ
ತಾನೆ ಗ್ರಹವಾಗುವುದೆ
ತಿರುಗುತ್ತ ತನ್ನ ಅಕ್ಷದ ಸುತ್ತ
ಇನ್ನು ಯಾರು ಕೊಡದ ಬೆಳಕ ನೀಡುತ್ತ
ಸುತ್ತಲಾರೆ ದೇಶಗಳ
ದಾಟಲಾರೆ ನನ್ನ ಕಾಲದ ಮಿತಿಗಳ
ಕಾಲು ಕುಸಿಯುವುದು ಮನಸು ಸೋಲುವುದು
ಇನ್ನೆಷ್ಟು ದೂರ?
ಎಲ್ಲ ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು

ಸೂರ್ಯನ ಬಳಿ ಹಾರಿದವನ
ಗತಿಯೇನಾಯಿತು ?-ಎಂದು ಕೇಳಿದರವರು
ರೆಕ್ಕೆಗಳು ಕರಗಿ
ಬಿದ್ದನು ನೆಲಕ್ಕೆ-ಎಂದು ಹೇಳಿದರು
ಬಿದ್ದು ಹೊರಳಾಡಿದನು
ಬೆಂಕಿಯಲಿ ನರಳಿದನು- ಎಂದು ಬಣ್ಣಿಸಿದರು
ಬಿದ್ದವನ ಸಮಾಧಿಯನು
ಬಿಡಲಿಲ್ಲ ಜನರು
ಹಸಿರು ಹುಲ್ಲನು ಕೆದಕಿದರು
ಕಲ್ಲು ಗಾರೆಗಳನು ಕೆಡೆವಿದರು
ಹಿಂದೆ ವಾಕ್ಯಗಳು ಇದ್ದಲ್ಲಿ
ಈಗ ಏನಿಲ್ಲ-ಆಚೀಚೆ
ಚದುರಿ ಬಿದ್ದಿವೆ ಕಲ್ಲುಗಳು
ಅಕ್ಷರಗಳ ಹೆಕ್ಕಿ ಜೋಡಿಸುತ್ತಲೆ ಇರುವೆ
ಅವು ಮೂಡಿಸುವ ವಾಕ್ಯಗಳೇನು
ಅರ್ಥಗಳೇನು
ಹೇಳುವುದು ಹೇಗೆ
ಎಲ್ಲ ಅಕ್ಷರಗಳೂ ಸಿಗುವ ವರೆಗೆ-
ಎಲ್ಲವನು ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀರುಂಡೆ ಸಾಲು
Next post ಪ್ರಾಣ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys