ನಿಲ್ದಾಣ

ಹಳಿಗಳ ಮೇಲೆ ಅಲೆದು
ಅಲೆದು ತಿರುವಿನ ಪಯಣ
ನನ್ನೊಳಗಿನ ಮಿತಿ ಮೀರಿ
ಬೀಸುಗಾಳಿಗೆ ಉಸಿರಾಡಿದ ಕನಸುಗಳು
ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು.

ಯಾರೊಳಗೆ ಯಾರಿಲ್ಲ ಬರೀ
ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ
ತವಕಗಳು ಅರಳಿದ ಹೂವಿನಿಂದ
ಒಮ್ಮೆಲೇ ಘಮ್ಮೆಂದು ಜೀವಧಾತು
ಮಿತಿ ಮೀರಿದ ಆಶೆಗಳು ಕೇಳಿದವು ಕಾರಣವ.

ಅಂತಃಪುರದ ಹೊರಗೆ ಅಂತರಂಗದ
ಒಳಗೆ ಬಯಲು ತಪಿಸಿ ಕಣ್ಮುಚ್ಚಿ
ಧ್ಯಾನಿಸಿದವು ಮಳೆಯ ಮಂಜನ ಸ್ನಾನ
ನಡೆದ ಪಾದ ಶಿರ ಭುಜಗಳೆಲ್ಲಾ
ದಂಗಾಗಿ ನಿಂತವು ತಮ್ಮ ಬಿರು ಚಲನೆಗೆ ಬೆರಗಾಗಿ.

ದುಃಖದ ಬೇಸರದ ವಿಷಾದದ ಖುಷಿಯ
ನೆರಳು ಹಿಂಬಾಲಿಸಿ ಯಾರ ಸ್ಮರಣೆಯಲಿ
ಸಿಹಿ ನಿದೆಯ ಆಳಕೆ ಇಳಿದ ಮುಖಗಳು
ಯಾವುದೂ ಕಹಿಯಲ್ಲ ಈ ಪ್ರೀತಿಯ ಜಗದಲಿ
ಕಾರಣವಿಲ್ಲದೇ ಸುಮ್ಮನೆ ಪಯಣಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸೊಂದ ಕಂಡೆ
Next post ಸೂರ್ಯ ಕೈಂಕರ್ಯ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…