ನಿಲ್ದಾಣ

ಹಳಿಗಳ ಮೇಲೆ ಅಲೆದು
ಅಲೆದು ತಿರುವಿನ ಪಯಣ
ನನ್ನೊಳಗಿನ ಮಿತಿ ಮೀರಿ
ಬೀಸುಗಾಳಿಗೆ ಉಸಿರಾಡಿದ ಕನಸುಗಳು
ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು.

ಯಾರೊಳಗೆ ಯಾರಿಲ್ಲ ಬರೀ
ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ
ತವಕಗಳು ಅರಳಿದ ಹೂವಿನಿಂದ
ಒಮ್ಮೆಲೇ ಘಮ್ಮೆಂದು ಜೀವಧಾತು
ಮಿತಿ ಮೀರಿದ ಆಶೆಗಳು ಕೇಳಿದವು ಕಾರಣವ.

ಅಂತಃಪುರದ ಹೊರಗೆ ಅಂತರಂಗದ
ಒಳಗೆ ಬಯಲು ತಪಿಸಿ ಕಣ್ಮುಚ್ಚಿ
ಧ್ಯಾನಿಸಿದವು ಮಳೆಯ ಮಂಜನ ಸ್ನಾನ
ನಡೆದ ಪಾದ ಶಿರ ಭುಜಗಳೆಲ್ಲಾ
ದಂಗಾಗಿ ನಿಂತವು ತಮ್ಮ ಬಿರು ಚಲನೆಗೆ ಬೆರಗಾಗಿ.

ದುಃಖದ ಬೇಸರದ ವಿಷಾದದ ಖುಷಿಯ
ನೆರಳು ಹಿಂಬಾಲಿಸಿ ಯಾರ ಸ್ಮರಣೆಯಲಿ
ಸಿಹಿ ನಿದೆಯ ಆಳಕೆ ಇಳಿದ ಮುಖಗಳು
ಯಾವುದೂ ಕಹಿಯಲ್ಲ ಈ ಪ್ರೀತಿಯ ಜಗದಲಿ
ಕಾರಣವಿಲ್ಲದೇ ಸುಮ್ಮನೆ ಪಯಣಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸೊಂದ ಕಂಡೆ
Next post ಸೂರ್ಯ ಕೈಂಕರ್ಯ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys