ಆರುವ ಮುನ್ನ ದೀಪವು
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
- ನಾನು ಅಂಧನಾಗಿ - January 11, 2021
- ಅಲ್ಪ ತೃಪ್ತನಾಗಿರೆ - January 4, 2021
- ಅಮ್ಮ ನಿನ್ನ ಮಡಿಲಲ್ಲೊಮ್ಮೆ - December 28, 2020
ಆರುವ ಮುನ್ನ ದೀಪವು ಹೊಳೆದಂತೆ ಮಾಡದಿರೆನ್ನ ತಂದೆ ನೀನು| ಸಮಯವಿರುವಾಗಲೆ ಸದಾಕಾಲ ಬೆಳಗಿಸೆನ್ನನು ನೀನು|| ಚಿಂತಿಸಿ ನಾನಾ ತರದಲಿ ಜಗದಿ ಎನನೂ ಮಾಡಲಾಗದ ನನ್ನ ಭಯವನು ಹೊಡೆದೋಡಿಸು ನೀನು| ನೀ ದಾರಿದೀಪವಾಗೆನಗೆ ಕೃಪೆಯನು ತೋರಿ ನನ್ನ ಕತ್ತಲೆ ಓಡಿಸು ನೀನು|| ಬದುಕಲಿ ಬೆರಳೆಣಿಕೆಯಷ್ಟು ಜನ ಸಾದಕರಲಿ ನನ್ನನು ನೀ ಬೆರೆಸು| ಕಾರಣ ಹುಡುಕಿ ಸಮಯಕೆ ಕಾಯದಂತೆನ್ನ […]